ರೈತ ಸಂಘದ ಮುಖಂಡನ ಬಿಡುಗಡೆಗೆ ಆಗ್ರಹ
ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಮೂಲಕ ಸರಕಾರಕ್ಕೆ ಶನಿವಾರ ಮನವಿ ರವಾನಿಸಿದರು.
Vijaya Karnataka 23 Sep 2018, 5:00 am
ರಾಯಚೂರು : ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಮೂಲಕ ಸರಕಾರಕ್ಕೆ ಶನಿವಾರ ಮನವಿ ರವಾನಿಸಿದರು.
ನಿರ್ವಾಣಪ್ಪ ಅವರನ್ನು ಬಂಧಿಸುವ ಮೂಲಕ ಕೊಡಗು ಜಿಲ್ಲಾಡಳಿತ ಸರ್ವಾಧಿಕಾರಿ ಧೋರಣೆ ತೋರಿದೆ. ಅಗತ್ಯ ಸೌಕರ್ಯ ಒದಗಿಸದ ಜಿಲ್ಲಾಡಳಿತ, ಸಂತ್ರಸ್ತರನ್ನು ಕೈದಿಗಳಂತೆ ನೋಡಿಕೊಂಡಿದೆ. ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಸಂತ್ರಸ್ತರಿಗೆ ಕೇಂದ್ರ ಬಿಟ್ಟು ಅವರವರ ಸಂಬಂಧಿಕರ ಮನೆಗಳಿಗೆ ಹೋಗುವಂತೆ ಒತ್ತಾಯಿಸಿದ್ದರು. ಪ್ರವಾಹ ಸಂತ್ರಸ್ತರ ಮೇಲೆ ಅಧಿಕಾರಿಗಳು ಗೂಂಡಾವರ್ತನೆ ತೋರಿದರೂ ಜಿಲ್ಲಾಡಳಿತ ಕ್ರಮಕೈಗೊಳ್ಳದೇ ರೈತ ಮುಖಂಡನನ್ನು ಬಂಧಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರ ಮೇಲೆ ಗೂಂಡಾವರ್ತನೆ ತೋರಿದ ತಹಸೀಲ್ದಾರ್ ಮಹೇಶ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಸಂತ್ರಸ್ತರಿಗೆ ಸೂಕ್ತ ಭದ್ರತೆ ಜತೆಗೆ ಭೂಮಿ, ವಸತಿ ಕಲ್ಪಿಸಬೇಕು. ನೆರೆ ಸಂತ್ರಸ್ತರಿಗೆ ಹರಿದು ಬಂದ ಸಾರ್ವಜನಿಕರ ದೇಣಿಗೆಯನ್ನು ಸಮರ್ಪಕವಾಗಿ ಉಪಯೋಗಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ರೈತ ಮುಖಂಡ ನಿರ್ವಾಣಪ್ಪ ಅವರನ್ನು ತಕ್ಷಣ ಬಿಡುಗಡೆಗೊಳಿಸದಿದ್ದರೆ ಕರ್ನಾಟಕ ರೈತ ಸಂಘದಿಂದ ಕೊಡಗು ಚಲೋ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಅಡಿವೆಪ್ಪ, ವಿರೂಪಾಕ್ಷಿಗೌಡ, ಸಂತೋಷ್ ಹಿರೇದಿನ್ನಿ, ಪರಶುರಾಮ್, ಹುಚ್ಚರೆಡ್ಡಿ, ಮಾರುತಿ, ವೆಂಕೋಬ, ದುರುಗಣ್ಣ ಸೇರಿ ಇತರರಿದ್ದರು.
ನಿರ್ವಾಣಪ್ಪ ಅವರನ್ನು ಬಂಧಿಸುವ ಮೂಲಕ ಕೊಡಗು ಜಿಲ್ಲಾಡಳಿತ ಸರ್ವಾಧಿಕಾರಿ ಧೋರಣೆ ತೋರಿದೆ. ಅಗತ್ಯ ಸೌಕರ್ಯ ಒದಗಿಸದ ಜಿಲ್ಲಾಡಳಿತ, ಸಂತ್ರಸ್ತರನ್ನು ಕೈದಿಗಳಂತೆ ನೋಡಿಕೊಂಡಿದೆ. ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಸಂತ್ರಸ್ತರಿಗೆ ಕೇಂದ್ರ ಬಿಟ್ಟು ಅವರವರ ಸಂಬಂಧಿಕರ ಮನೆಗಳಿಗೆ ಹೋಗುವಂತೆ ಒತ್ತಾಯಿಸಿದ್ದರು. ಪ್ರವಾಹ ಸಂತ್ರಸ್ತರ ಮೇಲೆ ಅಧಿಕಾರಿಗಳು ಗೂಂಡಾವರ್ತನೆ ತೋರಿದರೂ ಜಿಲ್ಲಾಡಳಿತ ಕ್ರಮಕೈಗೊಳ್ಳದೇ ರೈತ ಮುಖಂಡನನ್ನು ಬಂಧಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರ ಮೇಲೆ ಗೂಂಡಾವರ್ತನೆ ತೋರಿದ ತಹಸೀಲ್ದಾರ್ ಮಹೇಶ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಸಂತ್ರಸ್ತರಿಗೆ ಸೂಕ್ತ ಭದ್ರತೆ ಜತೆಗೆ ಭೂಮಿ, ವಸತಿ ಕಲ್ಪಿಸಬೇಕು. ನೆರೆ ಸಂತ್ರಸ್ತರಿಗೆ ಹರಿದು ಬಂದ ಸಾರ್ವಜನಿಕರ ದೇಣಿಗೆಯನ್ನು ಸಮರ್ಪಕವಾಗಿ ಉಪಯೋಗಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ರೈತ ಮುಖಂಡ ನಿರ್ವಾಣಪ್ಪ ಅವರನ್ನು ತಕ್ಷಣ ಬಿಡುಗಡೆಗೊಳಿಸದಿದ್ದರೆ ಕರ್ನಾಟಕ ರೈತ ಸಂಘದಿಂದ ಕೊಡಗು ಚಲೋ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಅಡಿವೆಪ್ಪ, ವಿರೂಪಾಕ್ಷಿಗೌಡ, ಸಂತೋಷ್ ಹಿರೇದಿನ್ನಿ, ಪರಶುರಾಮ್, ಹುಚ್ಚರೆಡ್ಡಿ, ಮಾರುತಿ, ವೆಂಕೋಬ, ದುರುಗಣ್ಣ ಸೇರಿ ಇತರರಿದ್ದರು.