ದೇವದುರ್ಗ ಪುರಸಭೆ ಆಡಳಿತ ಸ್ತಬ್ಧ
23 ಸದಸ್ಯರನ್ನು ಒಳಗೊಂಡ ಸ್ಥಳೀಯ ಪುರಸಭೆ ಆಡಳಿತ, ಯಜಮಾನನಿಲ್ಲದ ಮನೆಯಾಗಿದೆ. ಒಂದೆಡೆ ಚುನಾಯಿತ ಪ್ರತಿನಿಧಿಗಳ ಆಡಳಿತವೂ ಇಲ್ಲ. ಮತ್ತೊಂದೆಡೆ ಮುಖ್ಯಾಧಿಕಾರಿಯೂ ಇಲ್ಲ. ಸ್ಥಳೀಯ ಆಡಳಿತ ಸಂಸ್ಥೆ, ಸದ್ಯ ಸಂಪೂರ್ಣ ಸ್ತಬ್ಧವಾಗಿದ್ದು, ಮೂಲ ಸೌಕರ್ಯಗಳಿಗೆ ಜನ ಪರಿತಪ್ಪಿಸುವಂತಾಗಿದೆ.
Vijaya Karnataka 11 Dec 2018, 2:54 pm
ಮಹ್ಮದ್ ರಫಿ, ದೇವದುರ್ಗ
23 ಸದಸ್ಯರನ್ನು ಒಳಗೊಂಡ ಸ್ಥಳೀಯ ಪುರಸಭೆ ಆಡಳಿತ, ಯಜಮಾನನಿಲ್ಲದ ಮನೆಯಾಗಿದೆ. ಒಂದೆಡೆ ಚುನಾಯಿತ ಪ್ರತಿನಿಧಿಗಳ ಆಡಳಿತವೂ ಇಲ್ಲ. ಮತ್ತೊಂದೆಡೆ ಮುಖ್ಯಾಧಿಕಾರಿಯೂ ಇಲ್ಲ. ಸ್ಥಳೀಯ ಆಡಳಿತ ಸಂಸ್ಥೆ, ಸದ್ಯ ಸಂಪೂರ್ಣ ಸ್ತಬ್ಧವಾಗಿದ್ದು, ಮೂಲ ಸೌಕರ್ಯಗಳಿಗೆ ಜನ ಪರಿತಪ್ಪಿಸುವಂತಾಗಿದೆ.
ರಾಜ್ಯ ಸರಕಾರ ಹೊರಡಿಸಿರುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ -ಉಪಾಧ್ಯಕ್ಷ ರ ಆಯ್ಕೆ ಮೀಸಲಾತಿ ವಿರುದ್ಧ ಕೆಲವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಮೂರು ತಿಂಗಳು ಗತಿಸುತ್ತ ಬಂದರೂ ಅಧ್ಯಕ್ಷ -ಉಪಾಧ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.
ಇದು, ರಾಜ್ಯದ ಉಳಿದ ಸ್ಥಳೀಯ ಸಂಸ್ಥೆಗಳನ್ನು ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ. ಆದರೆ, ಸ್ಥಳೀಯ ಪುರಸಭೆ, ಮುಖ್ಯಾಧಿಕಾರಿಯ ಭಾಗ್ಯವನ್ನೂ ಕಳೆದುಕೊಂಡಿದೆ. ಹಿಂದಿನ ಮುಖ್ಯಾಧಿಕಾರಿ ಫಿರೋಜ್ ಖಾನ್ ಅವರು ವರ್ಗವಣೆಯಾಗಿ ಬಳ್ಳಾರಿ ಜಿಲ್ಲೆಯ ಪುರಸಭೆಯೊಂದರ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬೇರೊಬ್ಬ ಅಧಿಕಾರಿಯನ್ನು ನಿಯೋಜಿಸುವಲ್ಲಿ ಜಿಲ್ಲಾಡಳಿತ ಸೇರಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ನಿರ್ಲಕ್ಷ ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪರದಾಟ: ಸ್ಥಳೀಯ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ಸಮಸ್ಯೆಗಳು ತುಂಬಿ ತುಳುಕುತ್ತಿವೆ. ಸಮರ್ಪಕ ಕುಡಿವ ನೀರು ಸರಬರಾಜಾಗುತ್ತಿಲ್ಲ. ಬೀದಿ ದೀಪಗಳು ದುರಸ್ತಿಗೆ ಬಂದು, ಪ್ರಮುಖ ರಸ್ತೆಗಳಲ್ಲಿ ಕತ್ತಲು ಆವರಿಸಿದೆ. ಸಾರ್ವಜನಿಕ ಮಹಿಳಾ ಶೌಚಾಲಯಗಳ ದುರ್ಗತಿ ಹೇಳತೀರದಾಗಿದೆ. ಚರಂಡಿಗಳು ತುಂಬಿ, ರಸ್ತೆಗಳ ಮೇಲೆ ಮಲಿನ ನೀರು ಹರಿಯುತ್ತಿದೆ.
ಗಲೀಜು ನೀರಿನಿಂದ ವಾರ್ಡ್ಗಳಲ್ಲಿ ಗಬ್ಬು ವಾಸನೆ ಹರಡಿದೆ. ಕಸ ವಿಲೆವಾರಿಯಾಗದೇ ಇಡೀ ಪಟ್ಟಣ, ಕೊಚ್ಚೆ, ಕೊಳಕಿನ ತಾಣವಾಗಿದೆ. ಪ್ರಮುಖ ರಸ್ತೆಗಳ ಮೇಲೆ ಗುಂಡಿಗಳು ಬಿದ್ದು ತಿಂಗಳು ಗತಿಸುತ್ತಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು, ಗುಂಡಿಗಳನ್ನು ಹಾದು ಹೋಗುವಾಗ ಆಯತಪ್ಪಿ ಬೀಳುವಂತಾಗಿದೆ. ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿ ಸೇರಿ ಅಗತ್ಯ ದಾಖಲಾತಿಗೆ ಸಾರ್ವಜನಿಕರು ಪುರಸಭೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಮುಖ್ಯಾಧಿಕಾರಿಯೇ ಇಲ್ಲದ ಮೇಲೆ, ಕಚೇರಿಗೆ ಸಿಬ್ಬಂದಿ ಯಾವಾಗ ಬರುತ್ತಾರೋ? ಹೋಗುತ್ತಾರೋ? ಒಂದೂ ಗೊತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದೆ.
...........
ಸ್ಥಳೀಯ ಸಂಸ್ಥೆಯಲ್ಲಿ ಆಡಳಿತ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಅಗತ್ಯ ಸೌಕರ್ಯಗಳಿಗೆ ಪರದಾಡುವಂಥ ಪರಿಸ್ಥಿತಿಯಿದೆ. ಜಿಲ್ಲಾಡಳಿತ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಮುಂದಾಗಬೇಕು.
-ನಾಗರಾಜ ಅಬುಮೊಹಲ್ಲಾ, ದೇವದುರ್ಗ
23 ಸದಸ್ಯರನ್ನು ಒಳಗೊಂಡ ಸ್ಥಳೀಯ ಪುರಸಭೆ ಆಡಳಿತ, ಯಜಮಾನನಿಲ್ಲದ ಮನೆಯಾಗಿದೆ. ಒಂದೆಡೆ ಚುನಾಯಿತ ಪ್ರತಿನಿಧಿಗಳ ಆಡಳಿತವೂ ಇಲ್ಲ. ಮತ್ತೊಂದೆಡೆ ಮುಖ್ಯಾಧಿಕಾರಿಯೂ ಇಲ್ಲ. ಸ್ಥಳೀಯ ಆಡಳಿತ ಸಂಸ್ಥೆ, ಸದ್ಯ ಸಂಪೂರ್ಣ ಸ್ತಬ್ಧವಾಗಿದ್ದು, ಮೂಲ ಸೌಕರ್ಯಗಳಿಗೆ ಜನ ಪರಿತಪ್ಪಿಸುವಂತಾಗಿದೆ.
ರಾಜ್ಯ ಸರಕಾರ ಹೊರಡಿಸಿರುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ -ಉಪಾಧ್ಯಕ್ಷ ರ ಆಯ್ಕೆ ಮೀಸಲಾತಿ ವಿರುದ್ಧ ಕೆಲವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಮೂರು ತಿಂಗಳು ಗತಿಸುತ್ತ ಬಂದರೂ ಅಧ್ಯಕ್ಷ -ಉಪಾಧ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.
ಇದು, ರಾಜ್ಯದ ಉಳಿದ ಸ್ಥಳೀಯ ಸಂಸ್ಥೆಗಳನ್ನು ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ. ಆದರೆ, ಸ್ಥಳೀಯ ಪುರಸಭೆ, ಮುಖ್ಯಾಧಿಕಾರಿಯ ಭಾಗ್ಯವನ್ನೂ ಕಳೆದುಕೊಂಡಿದೆ. ಹಿಂದಿನ ಮುಖ್ಯಾಧಿಕಾರಿ ಫಿರೋಜ್ ಖಾನ್ ಅವರು ವರ್ಗವಣೆಯಾಗಿ ಬಳ್ಳಾರಿ ಜಿಲ್ಲೆಯ ಪುರಸಭೆಯೊಂದರ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬೇರೊಬ್ಬ ಅಧಿಕಾರಿಯನ್ನು ನಿಯೋಜಿಸುವಲ್ಲಿ ಜಿಲ್ಲಾಡಳಿತ ಸೇರಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ನಿರ್ಲಕ್ಷ ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪರದಾಟ: ಸ್ಥಳೀಯ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ಸಮಸ್ಯೆಗಳು ತುಂಬಿ ತುಳುಕುತ್ತಿವೆ. ಸಮರ್ಪಕ ಕುಡಿವ ನೀರು ಸರಬರಾಜಾಗುತ್ತಿಲ್ಲ. ಬೀದಿ ದೀಪಗಳು ದುರಸ್ತಿಗೆ ಬಂದು, ಪ್ರಮುಖ ರಸ್ತೆಗಳಲ್ಲಿ ಕತ್ತಲು ಆವರಿಸಿದೆ. ಸಾರ್ವಜನಿಕ ಮಹಿಳಾ ಶೌಚಾಲಯಗಳ ದುರ್ಗತಿ ಹೇಳತೀರದಾಗಿದೆ. ಚರಂಡಿಗಳು ತುಂಬಿ, ರಸ್ತೆಗಳ ಮೇಲೆ ಮಲಿನ ನೀರು ಹರಿಯುತ್ತಿದೆ.
ಗಲೀಜು ನೀರಿನಿಂದ ವಾರ್ಡ್ಗಳಲ್ಲಿ ಗಬ್ಬು ವಾಸನೆ ಹರಡಿದೆ. ಕಸ ವಿಲೆವಾರಿಯಾಗದೇ ಇಡೀ ಪಟ್ಟಣ, ಕೊಚ್ಚೆ, ಕೊಳಕಿನ ತಾಣವಾಗಿದೆ. ಪ್ರಮುಖ ರಸ್ತೆಗಳ ಮೇಲೆ ಗುಂಡಿಗಳು ಬಿದ್ದು ತಿಂಗಳು ಗತಿಸುತ್ತಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು, ಗುಂಡಿಗಳನ್ನು ಹಾದು ಹೋಗುವಾಗ ಆಯತಪ್ಪಿ ಬೀಳುವಂತಾಗಿದೆ. ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿ ಸೇರಿ ಅಗತ್ಯ ದಾಖಲಾತಿಗೆ ಸಾರ್ವಜನಿಕರು ಪುರಸಭೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಮುಖ್ಯಾಧಿಕಾರಿಯೇ ಇಲ್ಲದ ಮೇಲೆ, ಕಚೇರಿಗೆ ಸಿಬ್ಬಂದಿ ಯಾವಾಗ ಬರುತ್ತಾರೋ? ಹೋಗುತ್ತಾರೋ? ಒಂದೂ ಗೊತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದೆ.
...........
ಸ್ಥಳೀಯ ಸಂಸ್ಥೆಯಲ್ಲಿ ಆಡಳಿತ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಅಗತ್ಯ ಸೌಕರ್ಯಗಳಿಗೆ ಪರದಾಡುವಂಥ ಪರಿಸ್ಥಿತಿಯಿದೆ. ಜಿಲ್ಲಾಡಳಿತ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಮುಂದಾಗಬೇಕು.
-ನಾಗರಾಜ ಅಬುಮೊಹಲ್ಲಾ, ದೇವದುರ್ಗ