ಆ್ಯಪ್ನಗರ

ಓಆರ್‌ಎಸ್‌ನಿಂದ ರೋಗ ನಿರೋಧಕ ಶಕ್ತಿ

ಅತಿಸಾರ ಭೇದಿಯಾದಾಗ ಪ್ರತಿ ಬಾರಿಯೂ ಒಆರ್‌ಎಸ್‌ ದ್ರಾವಣ ಕುಡಿಸಬೇಕು, ಇದರಿಂದ ಅತಿಸಾರ ಭೇದಿಯ ಅವಧಿ ಹಾಗೂ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷ ಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.

Vijaya Karnataka 29 May 2018, 12:00 am
ಕವಿತಾಳ: ಅತಿಸಾರ ಭೇದಿಯಾದಾಗ ಪ್ರತಿ ಬಾರಿಯೂ ಒಆರ್‌ಎಸ್‌ ದ್ರಾವಣ ಕುಡಿಸಬೇಕು, ಇದರಿಂದ ಅತಿಸಾರ ಭೇದಿಯ ಅವಧಿ ಹಾಗೂ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷ ಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.
Vijaya Karnataka Web disease resistant to the ors
ಓಆರ್‌ಎಸ್‌ನಿಂದ ರೋಗ ನಿರೋಧಕ ಶಕ್ತಿ


ಪಟ್ಟಣ ಸಮೀಪದ ಜೀನೂರು ಗ್ರಾಮದ ಉಪ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ಒಆರ್‌ಎಸ್‌ ಮತ್ತು ಜಿಂಕ್‌ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿರುವ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಒಆರ್‌ಎಸ್‌ ಪೊಟ್ಟಣ ಮತ್ತು ಜಿಂಕ್‌ ಮಾತ್ರೆಗಳನ್ನು ವಿತರಣೆ ಮಾಡುತ್ತಾರೆ. ಮಗುವಿಗೆ ಅತಿಸಾರ ಭೇದಿ ಕಾಣಿಸಿಕೊಂಡ ನಂತರ ಒಆರ್‌ಎಸ್‌ ದ್ರಾವಣವನ್ನು ಶುದ್ಧ ನೀರಿನಲ್ಲಿ ಕಲಿಸಿ ಕುಡಿಸಬೇಕು. ಇದರಿಂದ ಮಗುವನ್ನು 3 ತಿಂಗಳವರೆಗೆ ಅತಿಸಾರ ಬಾರದಂತೆ ತಡೆಯಬಹುದೆಂದು ಹೇಳಿದರು.

ಆರೋಗ್ಯ ಸಹಾಯಕ ದೇವಿಂದ್ರಪ್ಪ ಮಾತನಾಡಿದರು.

ಕಿರಿಯ ಆರೋಗ್ಯ ಸಹಾಯಕಿ ಮಂಜುಳಾ ಒಆರ್‌ಎಸ್‌ ದ್ರಾವಣ ಸೇವಿಸುವ ಬಗ್ಗೆ ವಿವರಿಸಿದರು. ಗ್ರಾ.ಪಂ.ಸದಸ್ಯ ದೇವಿಂದ್ರಪ್ಪ ಸೇರಿ ಆಶಾ ಕಾರ್ಯಕರ್ತೆಯರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ