ಆ್ಯಪ್ನಗರ

‘ಮಕ್ಕಳ ಹಕ್ಕು ರಕ್ಷಣೆ ಕಾಯಿದೆ ಅನುಷ್ಠಾನಕ್ಕೆ ನಿರ್ಲಕ್ಷ್ಯ’

ಮಕ್ಕಳ ಹಕ್ಕುಗಳ ಸಂರಕ್ಷ ಣೆಗೆ ಜಾರಿಯಾದ ಕಾಯಿದೆಗಳ ಸಮರ್ಪಕ ಅನುಷ್ಠಾನಕ್ಕೆ ನಿರ್ಲಕ್ಷ್ಯ ಧೋರಣೆ ಮುಂದುವರಿದ ಪರಿಣಾಮ, ಇಂದಿಗೂ ಬಾಲ್ಯ ಮದುವೆ, ಬಾಲಕಾರ್ಮಿಕ ಪದ್ಧತಿ ಜೀವಂತವಾಗಿವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷ ಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಹೇಳಿದರು.

Vijaya Karnataka 20 Sep 2018, 5:00 am
ರಾಯಚೂರು : ಮಕ್ಕಳ ಹಕ್ಕುಗಳ ಸಂರಕ್ಷ ಣೆಗೆ ಜಾರಿಯಾದ ಕಾಯಿದೆಗಳ ಸಮರ್ಪಕ ಅನುಷ್ಠಾನಕ್ಕೆ ನಿರ್ಲಕ್ಷ್ಯ ಧೋರಣೆ ಮುಂದುವರಿದ ಪರಿಣಾಮ, ಇಂದಿಗೂ ಬಾಲ್ಯ ಮದುವೆ, ಬಾಲಕಾರ್ಮಿಕ ಪದ್ಧತಿ ಜೀವಂತವಾಗಿವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷ ಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಹೇಳಿದರು.
Vijaya Karnataka Web RAC-RCH19HD03


ನಗರದ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಪ್ರಕರಣ ನಿರ್ವಹಣೆ ಮತ್ತು ವೈಯಕ್ತಿಕ ಪೋಷಣೆ ಹಾಗೂ ಸಾಮಾಜಿಕ ತನಿಖಾ ವರದಿ ತಯಾರಿಗೆ ಸಂಬಂಧಿಸಿ ನೋಂದಣಿಯಾದ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳ ಸಂರಕ್ಷ ಣೆ, ಸೇವೆ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸೇವಾ ಸಂಸ್ಥೆಗಳು, ಸರಕಾರದ ಸೌಲಭ್ಯ ಪಡೆದು ಮಕ್ಕಳಿಗೆ ಕನಿಷ್ಠ ಸೌಕರ್ಯ ನೀಡದೇ ನಿಷ್ಕಾಳಜಿ ಮೆರೆಯುತ್ತಿವೆ. ಇಂತಹ ವಿಷಮ ಪರಿಸ್ಥಿತಿಯ ಮೇಲೆ ನಿಗಾವಹಿಸಿ ಕ್ರಮವಹಿಸಬೇಕಾದ ಇಲಾಖೆ ಮತ್ತು ಸಮಿತಿಗಳು ಮೌನವಾಗಿವೆ. ಅವು ಪರೋಕ್ಷ ವಾಗಿ ನಿಯಮ ಉಲ್ಲಂಘಿಸುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷ ಣೆಗೆ ಹಲವು ಕಾಯಿದೆಗಳಿವೆ. ಅವುಗಳ ಪರಿಣಾಮಕಾರಿ ಅನುಷ್ಠಾನ ಮೂಲಕ ಸಮಾಜದಲ್ಲಿನ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೆ ಮುಂದಾಗಬೇಕು. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ, ಪೋಕ್ಸೊ ಕಾಯಿದೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಚುರುಕುಪಡೆಯಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಸಿ.ನಾಡಗೌಡ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಗಳಾ ಹೆಗಡೆ ಮಾತನಾಡಿದರು. ಕೊಪ್ಪಳದ ಯುನಿಸೆಫ್‌ ಅಧಿಕಾರಿ ರಾಘವೇಂದ್ರ ಭಟ್‌, ಡಿಸಿಪಿಯು ವೀರಭದ್ರಪ್ಪ ರಾಯಚೂರು, ರಘುವರ್ಮ ಬಳ್ಳಾರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಆರ್‌.ನಾಗರಾಜ್‌, ಡಿಡಿಪಿಐ ಬಿ.ಕೆ.ನಂದನೂರು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಪ್ರಭುದೇವ ಪಾಟೀಲ್‌, ಬಸವರಾಜ ಬ್ಯಾಗವಾಟ್‌, ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಗುರುಪ್ರಸಾದ್‌, ಶ್ರೀದೇವಿ ಸೇರಿ ನಾನಾ ಎನ್‌ಜಿಒಗಳ ಮುಖ್ಯಸ್ಥರು ಇದ್ದರು. ಜಿಲ್ಲಾಡಳಿತ, ಜಿ.ಪಂ., ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮಕ್ಕಳ ಇಲಾಖೆ, ಮಕ್ಕಳ ರಕ್ಷ ಣಾ ಘಟಕ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ