ಆ್ಯಪ್ನಗರ

ಪ್ರವಾಹಪೀಡಿತ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ಕೃಷ್ಣಾನದಿ ಪ್ರವಾಹದಿಂದ ಮುಳುಗಡೆಯಾಗಿದ್ದ ರಾಯಚೂರು ತಾಲೂಕಿನ ಗುರ್ಜಾಪೂರ ಗ್ರಾಮದ ಮನೆಗಳನ್ನು ಸ್ಥಳಾಂತರ ಮಾಡುವ ಹಿನ್ನೆಲೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ನೇತೃತ್ವದಲ್ಲಿಅಧಿಕಾರಿಗಳು ಶುಕ್ರವಾರ ಪ್ರವಾಹಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.

Vijaya Karnataka 23 Nov 2019, 5:00 am
ರಾಯಚೂರು: ಕೃಷ್ಣಾನದಿ ಪ್ರವಾಹದಿಂದ ಮುಳುಗಡೆಯಾಗಿದ್ದ ರಾಯಚೂರು ತಾಲೂಕಿನ ಗುರ್ಜಾಪೂರ ಗ್ರಾಮದ ಮನೆಗಳನ್ನು ಸ್ಥಳಾಂತರ ಮಾಡುವ ಹಿನ್ನೆಲೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ನೇತೃತ್ವದಲ್ಲಿಅಧಿಕಾರಿಗಳು ಶುಕ್ರವಾರ ಪ್ರವಾಹಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
Vijaya Karnataka Web district collector visits flood affected village
ಪ್ರವಾಹಪೀಡಿತ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ


ಸ್ಥಳೀಯ ಗ್ರಾಮಸ್ಥರೊಂದಿಗೆ ದೇವಸ್ಥಾನದ ಆವರಣದಲ್ಲಿಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಮುಳುಗಡೆ ಸ್ಥಳಕ್ಕೆ ಪರ್ಯಾಯವಾಗಿ ಗುರ್ಜಾಪುರದ ಮತ್ತೊಂದು ಕಡೆ ಸರಕಾರದ ವತಿಯಿಂದ ಮನೆ ನಿರ್ಮಿಸಿಕೊಡಲು ಸಿದ್ಧವಿದ್ದರೂ ಯಾವುದೋ ಕಾರಣದಿಂದ ಅಲ್ಲಿಗೆ ತೆರಳುವುದಿಲ್ಲವೆಂಬ ಸಮಸ್ಯೆ ಬರಬಾರದು. ಪರ್ಯಾಯ ಸ್ಥಳದಲ್ಲಿಮನೆ ನಿರ್ಮಾಣವಾದ ನಂತರ ಶೇ.100ಕ್ಕೆ ನೂರರಷ್ಟು ನಿಗದಿತ ಅವಧಿಯೊಳಗೆ ಎಲ್ಲರೂ ಸ್ಥಳಾಂತರ ಆಗಬೇಕು. ಇದಕ್ಕೆ ಗ್ರಾಮಸ್ಥರು ಸಿದ್ಧರಾಗಬೇಕು ಎಂದು ಅವರು ಗ್ರಾಮಸ್ಥರಿಗೆ ಕೋರಿದರು.

ಸೂಚನೆ: ಇದೀಗ ಮನೆಗಳಿರುವ ಸ್ಥಳದಲ್ಲಿಪ್ರವಾಹದ ನೀರು ಬರುವ ಕಾರಣ ಶಾಶ್ವತ ಪರಿಹಾರ ಕಲ್ಪಿಸಲು ಮನೆಗಳನ್ನು ಬೇರೆಡೆಗೆ ನಿರ್ಮಿಸಿಕೊಡಲಾಗುವುದು. ಆದಕಾರಣ ಆ ಸ್ಥಳವನ್ನು ಪರಿಶೀಲನೆ ನಡೆಸಿದ ನಂತರ ಗ್ರಾಮಸ್ಥರೊಂದಿಗೆ ಚರ್ಚಿಸಿ ಅಲ್ಲಿಮನೆಗಳನ್ನು ನಿರ್ಮಿಸಲಾಗುವುದು. ಅಲ್ಲಿರಸ್ತೆ, ಕುಡಿವ ನೀರು, ವಿದ್ಯುತ್‌ ಸೇರಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು. ಪರ್ಯಾಯ ಸ್ಥಳದಲ್ಲಿಮನೆಗಳನ್ನು ನಿರ್ಮಿಸಲು ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಒಪ್ಪಿಗೆ ಪತ್ರ ಪಡೆಯಲಾಗುವುದು. ಎಲ್ಲರೂ ಒಪ್ಪಿಕೊಂಡ ಮೇಲೆ ಮನೆ ನಿರ್ಮಿಸಲಾಗುವುದು. ಆದ ಕಾರಣ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಒಪ್ಪಿಗೆ ನೀಡಬೇಕೆಂದು ಅವರು ಕೋರಿದರು. ಗುರ್ಜಾಪುರದಲ್ಲಿ2009ರಲ್ಲಿಪ್ರವಾಹ ಬಂದ ನಂತರ ಸ್ಥಳಾಂತರಕ್ಕಾಗಿ ನಿರ್ಮಿಸಿದ ಮನೆಗಳ ಸ್ಥಿತಿಗತಿಗಳನ್ನು ಸಮಿತಿಯೊಂದನ್ನು ರಚಿಸಿಕೊಂಡು ವರದಿ ನೀಡುವಂತೆ ಸ್ಥಳದಲ್ಲಿದ್ದ ಸಹಾಯಕ ಆಯುಕ್ತ ಸಂತೋಷ ಅವರಿಗೆ ಸೂಚನೆ ನೀಡಿದರು. ಗುರ್ಜಾಪುರದಲ್ಲಿಶುದ್ಧ ಕುಡಿವ ನೀರು ಪೂರೈಸುವ ಘಟಕವು ಹಲವು ದಿನಗಳಿಂದ ದುರಸ್ತಿಯಲ್ಲಿದೆ. ಗ್ರಾಮದಲ್ಲಿಬೋರ್‌ವೆಲ್‌ ಕೊರೆಯಿಸಿದರೆ ಉಪ್ಪು ನೀರು ಲಭಿಸುತ್ತದೆ. ಈ ಸಮಸ್ಯೆಗಳಿಂದಾಗಿ ಕುಡಿವ ನೀರಿಗೆ ತತ್ವಾರ ಉಂಟಾಗಿದೆ ಎಂದು ಸಭೆಯಲ್ಲಿಗ್ರಾಮಸ್ಥರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಡಿಸಿ, ಶುದ್ಧ ಕುಡಿವ ನೀರಿನ ಘಟಕದ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗೆ ವಹಿಸುವಂತೆ ಜಿ.ಪಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.

2009ರಲ್ಲಿನಿರ್ಮಾಣವಾದ ಮನೆಗಳ ವಸ್ತುಸ್ಥಿತಿ ಹಾಗೂ ಸ್ಥಳವನ್ನು ಪರಿಶೀಲಿಸಿದರು.

ಸಹಾಯಕ ಆಯುಕ್ತ ಕೆ.ಸಂತೋಷ, ತಹಸೀಲ್ದಾರ ಡಾ. ಹಂಪಣ್ಣ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚೆನ್ನಮ್ಮ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಜಿ.ಪಂ ಪಂಚಾಯತ್‌ ಸದಸ್ಯ ಹೇಮಾವತಿ, ತಾಲೂಕು ಸದಸ್ಯ ತಮ್ಮುಡು ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ