ಆ್ಯಪ್ನಗರ

ಮತಯಂತ್ರದ ಬಗ್ಗೆ ಅನುಮಾನ ಬೇಡ: ಡಿಸಿ

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಬಳಕೆ ಮಾಡಲಾಗುವ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಯಾವುದೇ ರೀತಿಯ ಅನುಮಾನ ಹೊಂದುವುದು ಬೇಡ ಎಂದಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು, ಮತದಾರ ಬಯಸಿದರೆ ಅವರು ಮತ ಹಾಕಿರುವ ಚಿಹ್ನೆಯನ್ನೇ ಖಾತರಿ ಪಡಿಸುವ ವಿವಿ ಪ್ಯಾಟ್‌ ಎಂಬ ಅತ್ಯಾಧುನಿಕ ಯಂತ್ರ ಈ ಬಾರಿ ಬಳಕೆ ಮಾಡಲಾಗುತ್ತಿದೆ ಹೇಳಿದರು.

Vijaya Karnataka Web 29 Mar 2018, 5:00 am
ರಾಯಚೂರು : ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಬಳಕೆ ಮಾಡಲಾಗುವ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಯಾವುದೇ ರೀತಿಯ ಅನುಮಾನ ಹೊಂದುವುದು ಬೇಡ ಎಂದಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು, ಮತದಾರ ಬಯಸಿದರೆ ಅವರು ಮತ ಹಾಕಿರುವ ಚಿಹ್ನೆಯನ್ನೇ ಖಾತರಿ ಪಡಿಸುವ ವಿವಿ ಪ್ಯಾಟ್‌ ಎಂಬ ಅತ್ಯಾಧುನಿಕ ಯಂತ್ರ ಈ ಬಾರಿ ಬಳಕೆ ಮಾಡಲಾಗುತ್ತಿದೆ ಹೇಳಿದರು.
Vijaya Karnataka Web do not be suspicious of the voter dc
ಮತಯಂತ್ರದ ಬಗ್ಗೆ ಅನುಮಾನ ಬೇಡ: ಡಿಸಿ


ನಗರದಲ್ಲಿ ಬುಧವಾರ ಸಂಜೆ ಕ್ರಾಫ್ಟ್‌ ಹಾಲ್‌ ನಲ್ಲಿ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ರಾಜಕೀಯ ಪಕ್ಷಗಳಿಗೆ ಮತ್ತು ಮಾಧ್ಯಮದವರಿಗೆ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಸಾಕಷ್ಟು ದೂರುಗಳು ರಾಜಕೀಯ ಪಕ್ಷಗಳಿಂದ ಕೇಳಿಬಂದ ಹಿನ್ನೆಲೆ ಈ ರೀತಿಯ ಕಾರ್ಯನಿರ್ವಹಣೆಯ ಮಾಹಿತಿ ನೀಡಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಮತಯಂತ್ರಗಳ ಜತೆಗೆ ಈ ಬಾರಿ ಮತದಾನ ಪ್ರಕ್ರಿಯೆ ಮತ್ತಷ್ಟು ಖಚಿತಪಡಿಸಲು ವಿವಿ ಪ್ಯಾಟ್‌ ಎಂಬ ಯಂತ್ರ ಬಳಕೆ ಮಾಡುತ್ತಿದ್ದು ಇದರಲ್ಲಿ ಮತದಾರರು ತಾವು ಯಾವ ವ್ಯಕ್ತಿ, ಪಕ್ಷಕ್ಕೆ ಮತ ಚಲಾಯಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಬಿಇಎಲ್‌ ಕಂಪನಿಯ ಎಂಜಿನಿಯರ್‌ ನಿತಿನ್‌ ಮತಯಂತ್ರದ ಕಾರ್ಯನಿರ್ವಹಣೆಯ ಬಗ್ಗೆ ನೆರೆದವರಿಗೆ ಮಾಹಿತಿ ನೀಡಿ ಮತಯಂತ್ರ, ಕಂಟ್ರೋಲ್‌ ಯೂನಿಟ್‌ ಮತ್ತು ವಿವಿ ಪ್ಯಾಟ್‌ ಗಳನ್ನು ಜೋಡಿಸಿ ಮತದಾನ ಮಾಡಿದಾಗ ಮತ ಚಲಾವಣೆಯ ಬಗ್ಗೆ ಮಾಹಿತಿ ದಾಖಲಾಗುವ ಪರಿಯನ್ನು ಪ್ರದರ್ಶಿಸಿದರು. ಚುನಾವಣೆ ವೇಳೆ ಜಿಲ್ಲೆಯಲ್ಲಿ ಅಗತ್ಯ ಸಂಖ್ಯೆಯ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಅವುಗಳು ದುರಸ್ತಿಗೀಡಾದಲ್ಲಿ ಅವುಗಳನ್ನು ತುರ್ತಾಗಿ ಬದಲಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ದುರಸ್ತಿ ಕೈಗೊಳ್ಳಲು ಅಗತ್ಯ ಸಂಖ್ಯೆಯ ಎಂಜಿನಿಯರುಗಳನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.

ಈ ಸಂದರ್ಭ ಜಿಪಂ ಸಿಇಒ ಅಭಿರಾಂ ಶಂಕರ್‌, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ