ಆ್ಯಪ್ನಗರ

ನೆರೆ ಸಂತಸ್ತರಿಗೆ ದೇಣಿಗೆ

ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಭರದಲ್ಲಿಸೌಂಡ್‌ ಸಿಸ್ಟಮ್‌ಗಳಿಗೆ ಮಾಡುವ ದುಂದುವೆಚ್ಚವನ್ನು ನಮ್ಮದೇ ಪಕ್ಕದ ಜಿಲ್ಲೆಗಳಲ್ಲಿಸಂಕಷ್ಟದಲ್ಲಿರುವ ನೆರೆ ಸಂತಸ್ತರಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುವ ಕೆಲಸವಾಗಬೇಕು ಎಂದು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಹೇಳಿದರು.

Vijaya Karnataka 28 Aug 2019, 5:00 am
ಸಿಂಧನೂರು: ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಭರದಲ್ಲಿಸೌಂಡ್‌ ಸಿಸ್ಟಮ್‌ಗಳಿಗೆ ಮಾಡುವ ದುಂದುವೆಚ್ಚವನ್ನು ನಮ್ಮದೇ ಪಕ್ಕದ ಜಿಲ್ಲೆಗಳಲ್ಲಿಸಂಕಷ್ಟದಲ್ಲಿರುವ ನೆರೆ ಸಂತಸ್ತರಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುವ ಕೆಲಸವಾಗಬೇಕು ಎಂದು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಹೇಳಿದರು.
Vijaya Karnataka Web donations to flood effected peoples
ನೆರೆ ಸಂತಸ್ತರಿಗೆ ದೇಣಿಗೆ


ನಗರದ ಎಪಿಎಂಸಿಯಲ್ಲಿರುವ ಪೊಲೀಸ್‌ ಠಾಣೆಯಲ್ಲಿಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಮಂಗಳವಾರ ನಡೆದ ಪೂರ್ವಭಾವಿ ಶಾಂತಿಸಭೆಯಲ್ಲಿಅವರು ಮಾತನಾಡಿದರು. ನಾವೆಲ್ಲರೂ ಸಂಭ್ರಮ ಪಡುವ ವಾತಾವರಣ ಈಗಿಲ್ಲ. ಇತ್ತೀಚಿಗೆ ಭಾರಿ ಮಳೆ ಸುರಿದು ಕೆಲವೆಡೆ ನೆರೆ ಬಂದಿದೆ. ಜನರು ಮನೆಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹವ ಬಗ್ಗೆ ಕಾಳಜಿ ತೋರಬೇಕು. ಹಬ್ಬಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ಬದಲು, ಸರಳ ರೀತಿ ಆಚರಣೆಗೆ ಮುಂದಾಗಬೇಕು ಎಂದರು. ಶಾಂತಿ ಕದಡುವ ಕೆಲಸ ಮಾಡಿದರೆ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.

ಪೌರಾಯುಕ್ತ ಆರ್‌.ವಿರೂಪಾಕ್ಷಮೂರ್ತಿ ಮಾತನಾಡಿ, ಗಣೇಶ ಹಬ್ಬದ ಸಮಯದಲ್ಲಿಊಟದ ತಟ್ಟೆ, ಲೋಟಾಗಳಿಗೆ ಪ್ಲ್ಯಾಸ್ಟಿಕ್‌ ಬಳಕೆ ಮಾಡಬಾರದು. ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಡಸ್ಟ್‌ಬಿನ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಗಣೇಶ ವಿಸರ್ಜನೆಗೆ ಹಳ್ಳದಲ್ಲಿವ್ಯವಸ್ಥೆ ಮಾಡಲಾಗುವುದು ಎಂದರು. ಸಿಪಿಐ ಬಾಲಚಂದ್ರ ಲಕ್ಕಮ್‌ ಮಾತನಾಡಿದರು.

ಸಭೆಯಲ್ಲಿಮುಖಂಡರಾದ ಹೆಚ್‌.ಎನ್‌.ಬಡಿಗೇರ, ಎಂ.ಡಿ.ನದೀಮುಲ್ಲಾಸೇರಿ ಇತರರು ಮಾತನಾಡಿದರು. ಶಿರಸ್ತೇದಾರ ಅಂಬಾದಾಸ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ