ಆ್ಯಪ್ನಗರ

ಮಕ್ಕಳಿಂದ ಡೋಣಿ ಪೂಜೆ

ತಾಲೂಕಿನ ಬಲ್ಲಟಗಿ ಗ್ರಾಮದ ಜಡಿ ಸ್ವಾಮಿಗಳ ಮಠದಲ್ಲಿಮಳೆಗಾಗಿ ಶಾಲಾ ಮಕ್ಕಳಿಂದ ಡೋಣಿ ಪೂಜೆ ಮಾಡಿಸಲಾಯಿತು.

Vijaya Karnataka 18 Sep 2019, 3:42 pm
ಸಿರವಾರ: ತಾಲೂಕಿನ ಬಲ್ಲಟಗಿ ಗ್ರಾಮದ ಜಡಿ ಸ್ವಾಮಿಗಳ ಮಠದಲ್ಲಿಮಳೆಗಾಗಿ ಶಾಲಾ ಮಕ್ಕಳಿಂದ ಡೋಣಿ ಪೂಜೆ ಮಾಡಿಸಲಾಯಿತು.
Vijaya Karnataka Web doni worship by children
ಮಕ್ಕಳಿಂದ ಡೋಣಿ ಪೂಜೆ


ಶ್ರೀಮಠದಲ್ಲಿಡೋಣಿ ಪೂಜೆ ಮಾಡುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಮಳೆಗಾಲ ಮುಗಿಯುವ ಹಂತ ತಲುಪಿದೆ. ಇದರಿಂದ ವರುಣನ ಕೃಪೆ ಕೋರಿ ಶ್ರೀಮಠದ ಬಸವಲಿಂಗಯ್ಯ ತಾತ, ಗುರುಬಸವ ತಾತನವರು ಗುರುವಾರ ಶಾಲೆಯ ಮಕ್ಕಳು ಮತ್ತು ಮುಖಂಡರು ಆಹಾರ ಬಾವಿಗೆ ತೆರಳಿ ಗಂಗಾ ಜಲ ತಂದರು. ಶ್ರೀಮಠದ ಡೋಣಿಯಲ್ಲಿತಾತನವರು ಮತ್ತು ಮಕ್ಕಳು ಪೂಜೆ ಸಲ್ಲಿಸಿ ವರುಣನಿಗಾಗಿ ಪ್ರಾರ್ಥಿಸಿದರು. ಮಲ್ಲಣ್ಣ ಸಾಹುಕಾರ, ಮುದುಕಪ್ಪ ಸಾಹುಕಾರ, ಮಹಾದೇವಪ್ಪ ದಿನ್ನಿ, ಬಸವನಗೌಡ, ಶರಣಪ್ಪ, ಮಲ್ಲೇಶ, ಅಮರೇಶ ಕಾಮರೆಡ್ಡಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ