ಆ್ಯಪ್ನಗರ

'ಮಾಹಿತಿ ನೀಡಿ ಮೋಸ ಹೋಗದಿರಿ'

ಸಾರ್ವಜನಿಕರಿಗೆ ಬ್ಯಾಂಕಿನ ಕಡೆಯಿಂದ ಕರೆ ಮಾಡುತ್ತಿದ್ದೇವೆ ಎಂದು ಮೋಸದ ಜಾಲ ಬೀಸಿ, ನಿಮ್ಮ ಖಾತೆಯ ಎಟಿಎಂ ಮಾಹಿತಿ ಪಡೆದುಕೊಂಡು, ಹಣ ದೋಚುವ ಅಪರಿಚಿತ ವ್ಯಕ್ತಿಗಳ ಕರೆಗಳಿಗೆ ಮಾರುಹೋಗಿ ಮೋಸ ಹೋಗದಿರಿ ಎಂದು ರಾಯಚೂರು ಜಿಲ್ಲಾಪೋಲಿಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಹೇಳಿದರು.

Vijaya Karnataka 8 Oct 2019, 3:16 pm
ಗಬ್ಬೂರು: ಸಾರ್ವಜನಿಕರಿಗೆ ಬ್ಯಾಂಕಿನ ಕಡೆಯಿಂದ ಕರೆ ಮಾಡುತ್ತಿದ್ದೇವೆ ಎಂದು ಮೋಸದ ಜಾಲ ಬೀಸಿ, ನಿಮ್ಮ ಖಾತೆಯ ಎಟಿಎಂ ಮಾಹಿತಿ ಪಡೆದುಕೊಂಡು, ಹಣ ದೋಚುವ ಅಪರಿಚಿತ ವ್ಯಕ್ತಿಗಳ ಕರೆಗಳಿಗೆ ಮಾರುಹೋಗಿ ಮೋಸ ಹೋಗದಿರಿ ಎಂದು ರಾಯಚೂರು ಜಿಲ್ಲಾಪೋಲಿಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಹೇಳಿದರು.
Vijaya Karnataka Web dont cheat with information
'ಮಾಹಿತಿ ನೀಡಿ ಮೋಸ ಹೋಗದಿರಿ'


ಅವರು ಶುಕ್ರವಾರ ಸಂಜೆ ಗಬ್ಬೂರು ಗ್ರಾಮದ ಶ್ರೀ ಬೂದಿಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹಾಗೂ ಜಿಲ್ಲಾಪೊಲೀಸ್‌ ಸೈಬರ್‌ ಕ್ರೈಮ್‌ ವಿಭಾಗದ ಸಹಯೋಗದಲ್ಲಿಹಮ್ಮಿಕೊಂಡಿದ್ದ ಎಟಿಎಂ ಕಾರ್ಡ್‌ ದುರ್ಬಳಕೆ ಬಗ್ಗೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿನನಿತ್ಯ ಹಲವಾರು ಜನರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ನಿಮ್ಮ ಎಟಿಎಂ ಕಾರ್ಡ ಬಾಕ್‌್ಲಆಗಿದೆ, ನಿಮ್ಮ ಎಟಿಎಂ ಕಾರ್ಡ ನಂ ಹೇಳಿ ಎಂದು ಹಲವಾರು ಜನರು ಜಿಲ್ಲೆಯಲ್ಲಿಮೋಸಹೋಗಿದ್ದಾರೆ. ಅದರಂತೆ ತಾವುಗಳು ಕರೆ ಮಾಡಿದ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಖಾತೆಯ ಮಾಹಿತಿಯನ್ನು ಹಂಚಿಕೆಕೊಳ್ಳಬೇಡಿ ಎಂದು ಹೇಳಿದರು.

ರಾಯಚೂರು ಜಿಲ್ಲೆಯಲ್ಲಿನೆಡೆದ ಸೈಬರ್‌ ಕ್ರೆತ್ರೖಮ್‌ಗಳ ಬಗ್ಗೆ ಜಿಲ್ಲಾಸೈಬರ್‌ ಕ್ರೆತ್ರೖಮ್‌ ಪೋಲಿಸ್‌ ಅಧಿಕಾರಿ ಆರ್‌.ಎಮ್‌.ನದಾಫ್‌ ಅವರು ಸಾರ್ವಜನಿಕರಿಗೆ ಸೈಬರ್‌ ಕ್ರೆತ್ರೖಮ್‌ಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೂದಿಬಸವೇಶ್ವರ ಮಠದ ಬೂದಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕರಾದ ಕೆ.ಕೆ.ಕೊಟ್ರೇಶ, ಹಿರಿಯ ಪ್ರಬಂಧಕ ವೇಣುಗೋಪಾಲ, ಪ್ರಾಣೇಶ ಮುತಾಲಿಕ, ಬ್ಯಾಂಕ್‌ ಐಟಿ ಸಂಯೋಜಕ ಈಶ್ವರ ಚಂದ್ರಕಾಂತ್‌, ಗಬ್ಬೂರು ಗ್ರಾಮೀಣ ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕ ಎಂ.ಬಿ.ಮಹೇಶ, ಶಿವರಾಜ ಬಿ.ಎಲ್‌, ಮುಖಂಡರಾದ ಶರಣಪ್ಪಗೌಡ ಕೊರವಿ, ನಾನಾ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ