ಆ್ಯಪ್ನಗರ

ಕಾಪೌಂಡ್‌ ನಿರ್ಮಾಣ ಮಾಡದೇ ಹಣ ಎತ್ತುವಳಿ

ತಾಲೂಕಿನ ಹಿರೇಬೂದೂರು ಗ್ರಾಮದ ಸಮುದಾಯ ಭವನಕ್ಕೆ ಕಾಂಪೌಂಡ್‌ ನಿರ್ಮಿಸದೇ ಹಣ ಎತ್ತುವಳಿ ಮಾಡಿರುವ ಪ್ರಕರಣ, ಮಾಹಿತಿ ಹಕ್ಕು ಕಾರ್ಯಕರ್ತ ಖಾಸೀಂಸಾಬ್‌ ಎಳ್ಳಿಮನಿ ಅವರು ಪಡೆದ ದಾಖಲೆಗಳಿಂದ ಬೆಳಕಿಗೆ ಬಂದಿದೆ.

Vijaya Karnataka 27 Jul 2018, 5:00 am
ದೇವದುರ್ಗ : ತಾಲೂಕಿನ ಹಿರೇಬೂದೂರು ಗ್ರಾಮದ ಸಮುದಾಯ ಭವನಕ್ಕೆ ಕಾಂಪೌಂಡ್‌ ನಿರ್ಮಿಸದೇ ಹಣ ಎತ್ತುವಳಿ ಮಾಡಿರುವ ಪ್ರಕರಣ, ಮಾಹಿತಿ ಹಕ್ಕು ಕಾರ್ಯಕರ್ತ ಖಾಸೀಂಸಾಬ್‌ ಎಳ್ಳಿಮನಿ ಅವರು ಪಡೆದ ದಾಖಲೆಗಳಿಂದ ಬೆಳಕಿಗೆ ಬಂದಿದೆ.
Vijaya Karnataka Web RAC-RCH26DEO02


2014ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಹಿರೇಬೂದೂರು ಗ್ರಾಮದ ಸಮುದಾಯ ಭವನಕ್ಕೆ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ ಎಂದು 88,218 ರೂ. ಅನುದಾನ ಬಳಸಲಾಗಿದೆ. ಕಾಮಗಾರಿಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ ಮಂಜೂರಾತಿ ಪಡೆಯಲಾಗಿದೆ. 2014, ಜ.18ರಂದು ಪ್ರಾರಂಭವಾಗಿದೆ ಎನ್ನಲಾದ ಕಾಮಗಾರಿಯಲ್ಲಿ 507 ಮಾನವದಿನಗಳು ಎಂದು ನಮೂದಿಸಲಾಗಿದೆ. ಸಿಮೆಂಟ್‌, ಕಲ್ಲು, ಉಸುಕು, ಕಬ್ಬಿಣ ಸೇರಿ ಇತರ ವಸ್ತುಗಳ ಖರ್ಚಿನ ವಿವಿರವನ್ನೂ ದಾಖಲೆಯಲ್ಲಿ ವಿವರಿಸಲಾಗಿದೆ. ಯೋಜನೆ ಅನುದಾನವನ್ನು ಮಸರಕಲ್‌ ಗ್ರಾಮದ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ.

ಆದರೆ, ಅಸಲಿಗೆ ಹಿರೇಬೂದೂರು ಗ್ರಾಮದ ಸಮುದಾಯ ಭವನಕ್ಕೆ ಇದುವರೆಗೂ ಕಾಂಪೌಂಡ್‌ ನಿರ್ಮಿಸಲಾಗಿಲ್ಲ. ಆದರೂ ನರೇಗಾ ಯೋಜನೆಯಡಿ ಅನುದಾನ ಬಳಕೆ ಆಗಿರುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ. ಯೋಜನೆಯ ಅನುದಾನ ದುರುಪಯೋಗವಾಗಿರುವ ಶಂಕೆ ದಟ್ಟವಾಗಿದೆ. ಈ ಕುರಿತು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು ಎಂದು ಆರ್‌ಟಿಐ ಕಾರ್ಯಕರ್ತ ಖಾಸೀಂಸಾಬ್‌ ಎಳ್ಳಿಮನೆ ಅವರು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರಿಗೆ ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ