ಆ್ಯಪ್ನಗರ

ಗೂಡಂಗಡಿ ತೆರವಿಗೆ ಮುಖ್ಯಾಧಿಕಾರಿ ತಾಕೀತು !

ಪುರಸಭೆ ಮುಂಭಾಗದ ಮುಖ್ಯ ರಸ್ತೆಗೆ ಹೊಂದಿಕೊಂಡು ಇರುವ ನೀರಿನ ಮೇಲ್ತೊಟ್ಟಿ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಕೂಡಲೇ ಮೇಲ್ತೊಟ್ಟಿಯ ಸುತ್ತಮುತ್ತಲಿನ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಗುರುವಾರ ತಾಕೀತು ಮಾಡಿದರು.

Vijaya Karnataka 12 Jul 2019, 2:43 pm
ಮುದಗಲ್‌ : ಪುರಸಭೆ ಮುಂಭಾಗದ ಮುಖ್ಯ ರಸ್ತೆಗೆ ಹೊಂದಿಕೊಂಡು ಇರುವ ನೀರಿನ ಮೇಲ್ತೊಟ್ಟಿ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಕೂಡಲೇ ಮೇಲ್ತೊಟ್ಟಿಯ ಸುತ್ತಮುತ್ತಲಿನ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಗುರುವಾರ ತಾಕೀತು ಮಾಡಿದರು. ಈಗಾಗಲೇ ಪುರಸಭೆ ಮುಂಭಾಗದಲ್ಲಿನ ಎಲ್ಲ ಅಂಗಡಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ತಿಂಗಳುಗಳೇ ಗತಿಸಿವೆ. ಕಾಲಾವಕಾಶ ಕೋರಿ ಅಂಗಡಿಗಳ ತೆರವಿಗೆ ಸಮಯ ನೀಡಲಾಗಿತ್ತು. ಶನಿವಾರ ಮತ್ತು ಭಾನುವಾರದೊಳಗೆ ಅಂಗಡಿಗಳ ತೆರವಿಗೆ ಮುಂದಾಗದಿದ್ದಲ್ಲಿ ಸೋಮವಾರ ಸಂಜೆಯಿಂದಲೇ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಿ.ಎಸ್‌.ಐ ದೊಡ್ಡಪ್ಪ ಜೆ, ಪುರಸಭೆ, ಪೊಲೀಸ್‌ ಸಿಬ್ಬಂದಿ ಇದ್ದರು.
Vijaya Karnataka Web evacuate small shop
ಗೂಡಂಗಡಿ ತೆರವಿಗೆ ಮುಖ್ಯಾಧಿಕಾರಿ ತಾಕೀತು !



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ