ವಾರಬಂಧಿ ಕೈಬಿಡಲು ರೈತರ ಆಗ್ರಹ
ನಾರಾಯಣಪುರ ಬಲದಂಡೆ ನಾಲೆಯಲ್ಲಿ ಜಾರಿಮಾಡಿರುವ ಅವೈಜ್ಞಾನಿಕ ವಾರಬಂದಿ ಪದ್ಧತಿ ಕೈಬಿಡುವಂತೆ ಆಗ್ರಹಿಸಿ, ಗುರುಗುಂಟಾ ಭಾಗದ ರೈತರು, ಸಹಾಯಕ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Vijaya Karnataka 19 Sep 2018, 5:00 am
ಲಿಂಗಸುಗೂರು : ನಾರಾಯಣಪುರ ಬಲದಂಡೆ ನಾಲೆಯಲ್ಲಿ ಜಾರಿಮಾಡಿರುವ ಅವೈಜ್ಞಾನಿಕ ವಾರಬಂದಿ ಪದ್ಧತಿ ಕೈಬಿಡುವಂತೆ ಆಗ್ರಹಿಸಿ, ಗುರುಗುಂಟಾ ಭಾಗದ ರೈತರು, ಸಹಾಯಕ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಾರಾಯಣಪುರ ಬಲದಂಡೆ ನಾಲೆಯ ನೀರನ್ನು ನಂಬಿ, ಗುರುಗುಂಟಾ ಹೋಬಳಿಯ ರೈತರು ಭತ್ತ, ಮೆಣಸಿನಕಾಯಿ, ತೊಗರಿ, ಹತ್ತಿ ಸೇರಿ ನಾನಾ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಕೆಬಿಜೆಎನ್ಎಲ್ ಅಧಿಕಾರಿಗಳು, ತಿಂಗಳಲ್ಲಿ ಮೊದಲ 12 ದಿನ ನೀರು ಸ್ಥಗಿತಗೊಳಿಸಿ, ನಂತರ 14 ದಿನ ನಾಲೆಗೆ ನೀರು ಹರಿಸುವ ವಾರಬಂದಿ ಪದ್ಧತಿಯಂತೆ ನೀರು ಹರಿಸುತ್ತಿದ್ದಾರೆ. ಇದರಿಂದ ಕೊನೆಯಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಸಿಗದೇ ಬೆಳೆಗಳು ಒಣಗುತ್ತಿವೆ. ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಅವೈಜ್ಞಾನಿಕ ವಾರಬಂದಿ ಪದ್ಧತಿ ಕೈಬಿಟ್ಟು ರೈತರ ಜಮೀನುಗಳಿಗೆ ನೀರು ದೊರೆಯುವಂತೆ ಕ್ರಮಕೈಗೊಳ್ಳಬೇಕು. ವಿಫಲವಾದಲ್ಲಿ ಸೆ.30ರಂದು ರಾಷ್ಟ್ರೀಯ ಹೆದ್ದಾರಿ(150ಎ) ಸಂಚಾರ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋವಿಂದ ನಾಯಕ, ತಿರುಪತಿ ನಾಯಕ, ಬಸಪ್ಪ, ಲಕ್ಷ್ಮಿನಾರಾಯಣ ಚೌದ್ರಿ, ಖಾಸಿಂಸಾಬ್, ತಿಪ್ಪಣ್ಣ ನಾಯಕ, ಲಾಲ್ಸಾಬ್, ನೀಲಕಂಠ, ಹನುಮಂತ, ಅಮರೇಶ ನಾಯಕ, ಹನುಮಂತ ತುಂಬಳಕಾರ್, ಸುಬ್ಬರಾವ್ ರೆಡ್ಡಿ, ಹನುಮಂತ ಗಡ್ಡಿ ಹಾಗೂ ಇತರರಿದ್ದರು.
ನಾರಾಯಣಪುರ ಬಲದಂಡೆ ನಾಲೆಯ ನೀರನ್ನು ನಂಬಿ, ಗುರುಗುಂಟಾ ಹೋಬಳಿಯ ರೈತರು ಭತ್ತ, ಮೆಣಸಿನಕಾಯಿ, ತೊಗರಿ, ಹತ್ತಿ ಸೇರಿ ನಾನಾ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಕೆಬಿಜೆಎನ್ಎಲ್ ಅಧಿಕಾರಿಗಳು, ತಿಂಗಳಲ್ಲಿ ಮೊದಲ 12 ದಿನ ನೀರು ಸ್ಥಗಿತಗೊಳಿಸಿ, ನಂತರ 14 ದಿನ ನಾಲೆಗೆ ನೀರು ಹರಿಸುವ ವಾರಬಂದಿ ಪದ್ಧತಿಯಂತೆ ನೀರು ಹರಿಸುತ್ತಿದ್ದಾರೆ. ಇದರಿಂದ ಕೊನೆಯಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಸಿಗದೇ ಬೆಳೆಗಳು ಒಣಗುತ್ತಿವೆ. ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಅವೈಜ್ಞಾನಿಕ ವಾರಬಂದಿ ಪದ್ಧತಿ ಕೈಬಿಟ್ಟು ರೈತರ ಜಮೀನುಗಳಿಗೆ ನೀರು ದೊರೆಯುವಂತೆ ಕ್ರಮಕೈಗೊಳ್ಳಬೇಕು. ವಿಫಲವಾದಲ್ಲಿ ಸೆ.30ರಂದು ರಾಷ್ಟ್ರೀಯ ಹೆದ್ದಾರಿ(150ಎ) ಸಂಚಾರ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋವಿಂದ ನಾಯಕ, ತಿರುಪತಿ ನಾಯಕ, ಬಸಪ್ಪ, ಲಕ್ಷ್ಮಿನಾರಾಯಣ ಚೌದ್ರಿ, ಖಾಸಿಂಸಾಬ್, ತಿಪ್ಪಣ್ಣ ನಾಯಕ, ಲಾಲ್ಸಾಬ್, ನೀಲಕಂಠ, ಹನುಮಂತ, ಅಮರೇಶ ನಾಯಕ, ಹನುಮಂತ ತುಂಬಳಕಾರ್, ಸುಬ್ಬರಾವ್ ರೆಡ್ಡಿ, ಹನುಮಂತ ಗಡ್ಡಿ ಹಾಗೂ ಇತರರಿದ್ದರು.