ಆ್ಯಪ್ನಗರ

ವಿಮಾ ಮೊತ್ತ ಜಮೆಗೆ ರೈತರ ಮನವಿ

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 2016-17ನೇ ಸಾಲಿನ ಹಿಂಗಾರು ಬೆಳೆಯ ವಿಮೆ ಮೊತ್ತವನ್ನು ತಮ್ಮ ಖಾತೆಗೆ ಜಮೆ ಮಾಡುವಂತೆ ಮಾನ್ವಿ ತಾಲೂಕಿನ ಪಾಮನಕಲ್ಲೂರು ಹೋಬಳಿಯ 23 ಗ್ರಾಮಗಳ ರೈತರು, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

Vijaya Karnataka 20 Sep 2018, 5:00 am
ರಾಯಚೂರು : ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 2016-17ನೇ ಸಾಲಿನ ಹಿಂಗಾರು ಬೆಳೆಯ ವಿಮೆ ಮೊತ್ತವನ್ನು ತಮ್ಮ ಖಾತೆಗೆ ಜಮೆ ಮಾಡುವಂತೆ ಮಾನ್ವಿ ತಾಲೂಕಿನ ಪಾಮನಕಲ್ಲೂರು ಹೋಬಳಿಯ 23 ಗ್ರಾಮಗಳ ರೈತರು, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
Vijaya Karnataka Web RAC-RCH19HD02


2016-17ರಲ್ಲಿ ಫಸಲ್‌ ಬಿಮಾ ಯೋಜನೆಯಡಿ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ವಟಗಲ್‌, ಇರಕಲ್‌, ಬೆಂಚಮರಡಿ, ಚಿಲ್ಕರಾಗಿ, ಹರವಾಪುರ, ಹಿಲಾಲಪುರ, ಬಸಾಪುರ ಸೇರಿ 23ಹಳ್ಳಿಗಳ ರೈತರು ವಿಮಾ ಕಂಪನಿಗೆ ಪ್ರೀಮಿಯಂ ಹಣ ತುಂಬಿದ್ದಾರೆ. ಆದರೆ ಇಂದಿಗೂ ಯಾವ ರೈತರ ಖಾತೆಗೂ ವಿಮಾ ಮೊತ್ತ ಜಮೆಯಾಗಿಲ್ಲ.

ಪ್ರಸಕ್ತ ವರ್ಷ ಮತ್ತೆ ರೈತರು ಬರಗಾಲಕ್ಕೆ ತುತ್ತಾಗಿದ್ದಾರೆ. ತಮ್ಮ ಅಳಲನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ವಿಮೆ ಮೊತ್ತವನ್ನು ರೈತರ ಬ್ಯಾಂಕ್‌ ಖಾತೆಗೆ ಪಾವತಿಸಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಎನ್‌ಆರ್‌ಬಿಸಿ 5ಎ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ, ವಿಜಯಕುಮಾರ ಚಿಲ್ಕರಾಗಿ, ಮಹಾದೇವಪ್ಪಗೌಡ, ಮಲ್ಲರಡ್ಡೆಪ್ಪ, ರುದ್ರಪ್ಪ, ಬೀರಪ್ಪ, ಈರಣ್ಣ, ಶಿವರಾಜ, ನಿಂಗಣ್ಣ, ಅಂಬಪ್ಪ, ರಾಮಣ್ಣ, ಅಮರಪ್ಪ, ಅಮರೇಗೌಡ, ಮಹಾಂತಪ್ಪ, ರಾಮಚಂದ್ರಪ್ಪ, ಮಾನಪ್ಪ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ