ಆ್ಯಪ್ನಗರ

ಓದುವ ಹಠಕ್ಕೆ ಬಿದ್ದ ಪುತ್ರಿಯನ್ನು ಕೊಂದ ತಂದೆ

ಕೊಪ್ಪಳ ಜಿಲ್ಲೆ ಕನಕಗಿರಿ ನಿವಾಸಿ ನಂದಿನಿ (20) ಮೃತರು. ತಂದೆ ನಾರಾಯಣರೆಡ್ಡಿ (45) ಕೊಲೆ ಮಾಡಿದ ಆರೋಪಿ.

Vijaya Karnataka 3 Apr 2019, 12:12 pm
ಮಸ್ಕಿ: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಓದುತ್ತೇನೆಂದು ಮನೆ ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದ ಮಗಳನ್ನು ತಂದೆಯೇ ಬೆಂಕಿ ಹಚ್ಚಿ ಕೊಂದ
Vijaya Karnataka Web Sets Fire.

ಘಟನೆ ಇತ್ತೀಚೆಗೆ ನಡೆದಿದೆ.

ಕೊಪ್ಪಳ ಜಿಲ್ಲೆ ಕನಕಗಿರಿ ನಿವಾಸಿ ನಂದಿನಿ (20) ಮೃತರು. ತಂದೆ ನಾರಾಯಣರೆಡ್ಡಿ (45) ಕೊಲೆ ಮಾಡಿದ ಆರೋಪಿ. ತಾಲೂಕಿನ ತುಂಗಭದ್ರಾ ಎಡದಂಡೆ ನಾಲೆಯ 55ನೇ
ಉಪಕಾಲುವೆ ಹತ್ತಿರ ಸುಟ್ಟ ರೀತಿಯಲ್ಲಿ ಸೋಮವಾರ ಬೆಳಗ್ಗೆ ಶವ ಪತ್ತೆಯಾಗಿದೆ.

ಕಳೆದ ವರ್ಷವೇ ಪಿಯುಸಿಯನ್ನು ಮುಗಿಸಿದ್ದ ವಿದ್ಯಾರ್ಥಿನಿ ಬಿಎಸ್ಸಿಗೆ ಸೇರುವುದಕ್ಕೆ ಬಯಸಿದ್ದಳು. ಆದರೆ, ನಾರಾಯಣರೆಡ್ಡಿ ಒಪ್ಪಿರಲಿಲ್ಲ. ಜತೆಗೆ, ಮನೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಓದುವ ಹಂಬಲದೊಂದಿಗೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸುಂಕನೂರು ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದಳು. ವಿಷಯ ತಿಳಿದು
ಬೆನ್ನತ್ತಿಕೊಂಡು ಬಂದ ತಂದೆ ರಾಯಚೂರಿಗೆ ತೆರಳಿ ಬಿಎಸ್ಸಿ ಓದುವುದಕ್ಕೆ ಅರ್ಜಿ ತರೋಣವೆಂದು ಕರೆದುಕೊಂಡು ಹೋಗಿದ್ದಾನೆ. ಇದೇ ವೇಳೆ ಮಗಳ ಮೈಮೇಲೆ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಘಟನೆಗೆ ಸಂಬಂಧಿಸಿ ನಂದಿನಿ ತಾಯಿ ಶಾಂತಿ ಅವರು ನೀಡಿದ ದೂರಿನ ಅನ್ವಯ ಬಳಗಾನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ