ಆ್ಯಪ್ನಗರ

ಎಂಜಿನ್‌ನಲ್ಲಿ ಬೆಂಕಿ: ಸಿಮೆಂಟ್ ಲಾರಿಭಸ್ಮ

ಗುರುಗುಂಟಾ ಬಳಿಯ ಲೆಕಿಮಿಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ, ಸಿಮೆಂಟ್ ತುಂಬಿದ ಲಾರಿಯ ಎಂಜಿನ್‌ನಲ್ಲಿ ಚಾಲನೆ ಸಂದರ್ಭದಲ್ಲೇ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣ ಸುಟ್ಟುಹೋಗಿದೆ.

Vijaya Karnataka 19 Dec 2018, 12:00 am
ಹಟ್ಟಿಚಿನ್ನದಗಣಿ (ರಾಯಚೂರು): ಗುರುಗುಂಟಾ ಬಳಿಯ ಲೆಕಿಮಿಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ, ಸಿಮೆಂಟ್ ತುಂಬಿದ ಲಾರಿಯ ಎಂಜಿನ್‌ನಲ್ಲಿ ಚಾಲನೆ ಸಂದರ್ಭದಲ್ಲೇ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣ ಸುಟ್ಟುಹೋಗಿದೆ.
Vijaya Karnataka Web RAC-RCH18HGM P3


ವಾಡಿಯಿಂದ ಸಿಮೆಂಟ್ ಲೋಡ್ ಹೊತ್ತು ಹುಬ್ಬಳ್ಳಿ ಕಡೆ ಹೊರಟಿದ್ದ ಈ ಲಾರಿಯ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಹಿಂದೆ ಬರುತ್ತಿದ್ದ ಮತ್ತೊಂದು ಲಾರಿಯ ಚಾಲಕರು ಇದನ್ನು ಗಮನಿಸಿ, ಮುಂದಿನ ಲಾರಿ ಚಾಲಕರಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಷ್ಟರಲ್ಲೇ ಲಾರಿ ಎಂಜಿನ್ ಮುಂಭಾಗ, ಟೈರ್‌ಗಳಿಗೂ ಬೆಂಕಿ ತಗುಲಿ ಟೈರ್‌ಗಳು ಸ್ಫೋಟಗೊಂಡಿವೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಲಾರಿ ಸಮೀಪದಲ್ಲಿದ್ದ ಭತ್ತದ ಹುಲ್ಲಿನ ಬಣವೆಗೆ ಬೆಂಕಿಯ ಕಿಡಿ ತಾಗಿದೆ. ಅಭಲಯ್ಯ ಅವರಿಗೆ ಸೇರಿದ ಭತ್ತದ ಹುಲ್ಲಿನ ಬಣವೆ ಸುಟ್ಟಿದೆ. ಲಾರಿ ಚಾಲಕ ಆದಪ್ಪ ಹಾಗೂ ಅಭಲಯ್ಯ ನೀಡಿದ ದೂರು ಆಧರಿಸಿ, ಎರಡು ಪ್ರತ್ಯೇಕ ಪ್ರಕರಣಗಳು ಸ್ಥಳೀಯ ಠಾಣೆಯಲ್ಲಿ ದಾಖಲಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ