ಆ್ಯಪ್ನಗರ

ತುಂಗಭದ್ರಾ-ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಭೀತಿ, ಗ್ರಾಮ ಮುಳುಗುವ ಆತಂಕದಲ್ಲಿ ಜನತೆ

ಉತ್ತರ ಕರ್ನಾಟಕದಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಮತ್ತೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಕೃಷ್ಣಾನದಿ ಮತ್ತು ತುಂಗಭದ್ರಾ ನದಿಯಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ.

Vijaya Karnataka Web 22 Oct 2019, 10:47 am
Vijaya Karnataka Web raichuru rain

ರಾಯಚೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ ಜನ ಹೈರಾಣವಾಗಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ತೀರದ ಗ್ರಾಮಗಳು ಮುಳುಗಡೆಯಾಗುವ ಭೀತಿಯಲ್ಲಿವೆ.

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ 12 ವರ್ಷದ ಬಾಲಕ

ತುಂಗಭದ್ರಾ ನದಿ ಪ್ರವಾಹದ ಪರಿಣಾಮ ಪ್ರಸಿದ್ಧ ಧಾರ್ಮಿಕ ಕೇಂದ್ರ ಬಿಚ್ಚಾಲೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಸಂಜೆ ವೇಳೆಗೆ ಬಿಚ್ಚಾಲೆಯಲ್ಲಿರುವ ರಾಘವೇಂದ್ರ ತೀರ್ಥರು ತಪಸ್ಸು ಮಾಡಿದ್ದ ಜಪದಕಟ್ಟೆ ಬೃಂದಾವನ ಸ್ಥಳ ಜಲಾವೃತಗೊಳ್ಳುವ ಸಾಧ್ಯತೆ ಇದೆ.

ಅಬ್ಬರದ ಮಳೆ, ಕಣ್ಣೀರ ಹೊಳೆ: ನೂರಾರು ಮನೆಗಳು ಜಖಂ, ಅಪಾರ ಬೆಳೆ ಹಾನಿ, ಇನ್ನು 3 ದಿನ ವರುಣಾಘಾತ

ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಳ ಕಂಡಿದೆ. ಎರಡು ಲಕ್ಷ ಕ್ಯುಸೆಕ್ ಗೂ ಹೆಚ್ಚಿನ ಪ್ರಮಾಣದ ನೀರು ನಾರಾಯಣಪುರ ಜಲಾಶಯದಿಂದ ನದಿಗೆ ಹರಿಯ ಬಿಟ್ಟಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ಬಳಿಯ ಹೂವಿನಹೆಡಗಿ ಸೇತುವೆ ಹತ್ತಿರ ನೀರು ಉಕ್ಕಿ ಹರಿಯುತ್ರಿದೆ. ಪರಿಣಾಮ ದೇವದುರ್ಗ-ಕಲಬುರಗಿ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿದೆ. ನದಿ ತೀರದಲ್ಲಿ ಅಳವಡಿಸಿದ್ದ ನೀರೆತ್ತುವ ಮೋಟಾರ್ ಪಂಪ್ ಅನ್ನು ರೈತರು ಸ್ಥಳಾಂತರಿಸಿದ್ದಾರೆ.

ಅರ್ಧ ರಾಜ್ಯಕ್ಕೆ ಜಲಾಘಾತ: ಮುಂಗಾರಿಂದ ಕಂಗೆಟ್ಟಿದ್ದ ಉತ್ತರಕ್ಕೆ ಮತ್ತೆ ಹಿಂಗಾರಿನ ಹೊಡೆತ

ಕೃಷ್ಣಾ ನದಿ ಪ್ರವಾಹಕ್ಕೆ ಲಿಂಗನಸೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳು ಮುಳುಗುವ ಆತಂಕ ಎದುರಾಗಿದೆ. ಹೀಗಾಗಿ ರಾಯಚೂರಿನ ದೇವದುರ್ಗದ ನದಿ ತೀರದ ಚಿಂಚೋಡಿ ಗ್ರಾಮದಲ್ಲಿ ತುರ್ತು ಸ್ಥಿತಿ ಎದುರಿಸಲು ಯಾಂತ್ರೀಕೃತ ಬೋಟ್ ತರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ