ಆ್ಯಪ್ನಗರ

ಸಸಿ ಹಚ್ಚಿ ನೀರು ಹಾಕುವುದು ಮರೆತ ಸಿಬ್ಬಂದಿ

ತಾಲೂಕಿನ ಕಲಮಂಗಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಒಂದು ವಾರದಿಂದ ಹಿಂದೆ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಸಸಿ ನೆಟ್ಟಿದ್ದು, ಇದೀಗ ನೀರು ಹಾಕದೆ ಇರುವುದರಿಂದ ಒಣಗಿ ಹೋಗಿವೆ.

Vijaya Karnataka 20 Jun 2019, 5:00 am
ಸಿಂಧನೂರು : ತಾಲೂಕಿನ ಕಲಮಂಗಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಒಂದು ವಾರದಿಂದ ಹಿಂದೆ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಸಸಿ ನೆಟ್ಟಿದ್ದು, ಇದೀಗ ನೀರು ಹಾಕದೆ ಇರುವುದರಿಂದ ಒಣಗಿ ಹೋಗಿವೆ.
Vijaya Karnataka Web forgotten staff to water the sapling
ಸಸಿ ಹಚ್ಚಿ ನೀರು ಹಾಕುವುದು ಮರೆತ ಸಿಬ್ಬಂದಿ


ಉದ್ಯೋಗಖಾತ್ರಿ ಯೋಜನೆಯಡಿ 100 ಸಸಿಗಳನ್ನು ಮೈದಾನದಲ್ಲಿ ನೆಡಲಾಗಿದೆ. ಸಸಿ ನೆಟ್ಟ ಮೇಲೆ ಒಮ್ಮೆಯೂ ನೀರು ಹಾಕಿಲ್ಲ. ಹೀಗಾಗಿ ಬಹುತೇಕ ಸಸಿಗಳು ಒಣಗಿ ಹೋಗುವಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಅಕಾರಿಗಳ ಗಮನಕ್ಕೆ ತಂದಿದ್ದು, ಟ್ಯಾಂಕರ್‌ ನೀರು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಆದರೆ ನೀರು ಹಾಕುವ ಮೊದಲೇ ಎಲ್ಲವೂ ಬಿಸಿಲಿಗೆ ಬಾಡಿ ಹೋಗಿವೆ.

ಪರಿಸರ ಸಂರಕ್ಷ ಣೆ ಉದ್ದೇಶದೊಂದಿಗೆ ಸರಕಾರ ಅರಣ್ಯೀಕರಣಕ್ಕೆ ಸಾಕಷ್ಟು ಅನುದಾನ ಒದಗಿಸುತ್ತಿದೆ. ಆದರೆ ನಿರೀಕ್ಷಿತ ಕೆಲಸ ಆಗುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ. ಇನ್ನಾದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕಾಟಾಚಾರಕ್ಕೆ ಸಸಿಗಳನ್ನು ನೆಟ್ಟು ಹಾಗೆಯೇ ಬಿಡುವ ಬದಲು ಅವುಗಳ ಸಂರಕ್ಷ ಣೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಜನರ ಮನವಿಯಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ