ಇಂದಿನಿಂದ ಶ್ರೀಸುಜಯೀಂದ್ರತೀರ್ಥರ ಜನ್ಮ ಶತಮಾನೋತ್ಸವ
ಮಂತ್ರಾಲಯದ ಶ್ರೀರಾಘವೇಂದ್ರಮಠದ ಪೂರ್ವಪೀಠಾಧಿಪತಿ ಶ್ರೀಸುಜಯೀಂದ್ರತೀರ್ಥರ ಜನ್ಮ ಶತಮಾನೋತ್ಸವದ ನಿಮಿತ್ತ ನಗರದಲ್ಲಿ ಡಿ.8 ರಿಂದ ಮೂರು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ರಾಯಚೂರು ಶಾಖೆಯ ವಿಚಾರಣಕರ್ತ ನರಸಿಂಗರಾವ್ ದೇಶಪಾಂಡೆ ಹೇಳಿದರು.
Vijaya Karnataka 8 Dec 2018, 12:00 am
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಮಠದ ಪೂರ್ವಪೀಠಾಧಿಪತಿ ಶ್ರೀಸುಜಯೀಂದ್ರತೀರ್ಥರ ಜನ್ಮ ಶತಮಾನೋತ್ಸವದ ನಿಮಿತ್ತ ನಗರದಲ್ಲಿ ಡಿ.8 ರಿಂದ ಮೂರು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ರಾಯಚೂರು ಶಾಖೆಯ ವಿಚಾರಣಕರ್ತ ನರಸಿಂಗರಾವ್ ದೇಶಪಾಂಡೆ ಹೇಳಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.8ರಂದು ನಗರಕ್ಕೆ ಆಗಮಿಸಲಿರುವ ಶ್ರೀಸುಬುಧೇಂದ್ರತೀರ್ಥರು ನಂತರ ಪೂರ್ವಪೀಠಾಧಿಪತಿ ಶ್ರೀಸುಜಯೀಂದ್ರತೀರ್ಥರ ಜನ್ಮಶತಮಾನೋತ್ಸವದ ನಿಮಿತ್ತ ಆಯೋಜಿಸಿರುವ ಭಾವಚಿತ್ರದ ಭವ್ಯ ಶೋಭಾಯಾತ್ರೆಯ ಸಾನ್ನಿಧ್ಯ ವಹಿಸಲಿದ್ದಾರೆ. ಶೋಭಾಯಾತ್ರೆಯು ಇಲ್ಲಿನ ಜವಾಹರ ನಗರದ ರಾಘವೇಂದ್ರಸ್ವಾಮಿಗಳ ಮಠದಿಂದ ಕೋಟೆಯ ಮುಂಗ್ಲಿ ಮುಖ್ಯಪ್ರಾಣ ದೇಗುಲದವರೆಗೆ ನಡೆಯಲಿದೆ.
ನಂತರ ಮುಂಗ್ಲಿ ಮುಖ್ಯಪ್ರಾಣ ದೇವರ ದೇವಸ್ಥಾನದಲ್ಲಿ ಶ್ರೀಗಳು ಕಾರ್ತಿಕ ದೀಪೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಆನಂತರದಲ್ಲಿ ತೊಟ್ಟಿಲೋತ್ಸವ ಕೈಗೊಳ್ಳಲಿದ್ದಾರೆ. ಡಿ.9ರಂದು ಬೆಳಗ್ಗೆ 7.30ಕ್ಕೆ ಸಾವಿತ್ರಿ ಕಾಲೊನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀಗಳ ಪಾದಪೂಜೆ ಮತ್ತು ಭಕ್ತರ ಮನೆಗಳಲ್ಲೂ ಪಾದಪೂಜೆ ನೆರವೇರಿಸಲಿದ್ದಾರೆ.
ಡಿ.10 ರಂದು ಬೆಳಗ್ಗೆ 7.45ಕ್ಕೆ ಪಾದಪೂಜೆಗೆ ಅವಕಾಶ ಕಲ್ಪಿಸಲಾಗಿದ್ದು, ಆನಂತರ ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಲಿದ್ದಾರೆ. ಪ್ರತಿ ದಿನ ಸಂಜೆ 5.30ರಿಂದ ಪ್ರವಚನ ಜವಾಹರ ನಗರದ ಮಠದಲ್ಲಿ ನಡೆಯಲಿದೆ. ಡಿ.11ರಂದು ಬೆಳಗ್ಗೆ ಗಾಜಗಾರಪೇಟೆ ಸುತ್ತಲಿನ ಪ್ರದೇಶದ ಭಕ್ತರ ಮನೆಗಳಲ್ಲಿ ಶ್ರೀಗಳ ಪಾದಪೂಜೆ ನಡೆಯಲಿದ್ದು, ನಂತರ ಬೆಳಗ್ಗೆ 11.45ಕ್ಕೆ ರಾಯರ ಮಠದಲ್ಲಿ ಸಂಸ್ಥಾನ ಪೂಜೆ ಕೈಗೊಳ್ಳಲಿದ್ದಾರೆ. ನಂತರ ಸಂಜೆ 7 ರಿಂದ ರಾತ್ರಿ 9 ರವರೆಗೆ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿರುವ ಸರೋವರದಲ್ಲಿ ತೆಪ್ಪೋತ್ಸವ ಹಾಗೂ ದೀಪಾಲಂಕಾರ ಉತ್ಸವ ನಡೆಯಲಿದೆ ಎಂದರು.
ಶ್ರೀರಾಘವೇಂದ್ರಸ್ವಾಮಿಗಳ ಮಠದ ಸ್ಥಳೀಯ ಶಾಖೆಯ ವ್ಯವಸ್ಥಾಪಕ ನರಹರಿ ಆಚಾರ್ಯ ಸೇರಿದಂತೆ ಅನೇಕರಿದ್ದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.8ರಂದು ನಗರಕ್ಕೆ ಆಗಮಿಸಲಿರುವ ಶ್ರೀಸುಬುಧೇಂದ್ರತೀರ್ಥರು ನಂತರ ಪೂರ್ವಪೀಠಾಧಿಪತಿ ಶ್ರೀಸುಜಯೀಂದ್ರತೀರ್ಥರ ಜನ್ಮಶತಮಾನೋತ್ಸವದ ನಿಮಿತ್ತ ಆಯೋಜಿಸಿರುವ ಭಾವಚಿತ್ರದ ಭವ್ಯ ಶೋಭಾಯಾತ್ರೆಯ ಸಾನ್ನಿಧ್ಯ ವಹಿಸಲಿದ್ದಾರೆ. ಶೋಭಾಯಾತ್ರೆಯು ಇಲ್ಲಿನ ಜವಾಹರ ನಗರದ ರಾಘವೇಂದ್ರಸ್ವಾಮಿಗಳ ಮಠದಿಂದ ಕೋಟೆಯ ಮುಂಗ್ಲಿ ಮುಖ್ಯಪ್ರಾಣ ದೇಗುಲದವರೆಗೆ ನಡೆಯಲಿದೆ.
ನಂತರ ಮುಂಗ್ಲಿ ಮುಖ್ಯಪ್ರಾಣ ದೇವರ ದೇವಸ್ಥಾನದಲ್ಲಿ ಶ್ರೀಗಳು ಕಾರ್ತಿಕ ದೀಪೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಆನಂತರದಲ್ಲಿ ತೊಟ್ಟಿಲೋತ್ಸವ ಕೈಗೊಳ್ಳಲಿದ್ದಾರೆ. ಡಿ.9ರಂದು ಬೆಳಗ್ಗೆ 7.30ಕ್ಕೆ ಸಾವಿತ್ರಿ ಕಾಲೊನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀಗಳ ಪಾದಪೂಜೆ ಮತ್ತು ಭಕ್ತರ ಮನೆಗಳಲ್ಲೂ ಪಾದಪೂಜೆ ನೆರವೇರಿಸಲಿದ್ದಾರೆ.
ಡಿ.10 ರಂದು ಬೆಳಗ್ಗೆ 7.45ಕ್ಕೆ ಪಾದಪೂಜೆಗೆ ಅವಕಾಶ ಕಲ್ಪಿಸಲಾಗಿದ್ದು, ಆನಂತರ ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಲಿದ್ದಾರೆ. ಪ್ರತಿ ದಿನ ಸಂಜೆ 5.30ರಿಂದ ಪ್ರವಚನ ಜವಾಹರ ನಗರದ ಮಠದಲ್ಲಿ ನಡೆಯಲಿದೆ. ಡಿ.11ರಂದು ಬೆಳಗ್ಗೆ ಗಾಜಗಾರಪೇಟೆ ಸುತ್ತಲಿನ ಪ್ರದೇಶದ ಭಕ್ತರ ಮನೆಗಳಲ್ಲಿ ಶ್ರೀಗಳ ಪಾದಪೂಜೆ ನಡೆಯಲಿದ್ದು, ನಂತರ ಬೆಳಗ್ಗೆ 11.45ಕ್ಕೆ ರಾಯರ ಮಠದಲ್ಲಿ ಸಂಸ್ಥಾನ ಪೂಜೆ ಕೈಗೊಳ್ಳಲಿದ್ದಾರೆ. ನಂತರ ಸಂಜೆ 7 ರಿಂದ ರಾತ್ರಿ 9 ರವರೆಗೆ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿರುವ ಸರೋವರದಲ್ಲಿ ತೆಪ್ಪೋತ್ಸವ ಹಾಗೂ ದೀಪಾಲಂಕಾರ ಉತ್ಸವ ನಡೆಯಲಿದೆ ಎಂದರು.
ಶ್ರೀರಾಘವೇಂದ್ರಸ್ವಾಮಿಗಳ ಮಠದ ಸ್ಥಳೀಯ ಶಾಖೆಯ ವ್ಯವಸ್ಥಾಪಕ ನರಹರಿ ಆಚಾರ್ಯ ಸೇರಿದಂತೆ ಅನೇಕರಿದ್ದರು.