ಆ್ಯಪ್ನಗರ

ಸೌಲಭ್ಯ ಕಡಿತ ವಿರೋಧಿಸಿ ನಿರಶನ

ಹೊಸ ಸಂಬಳ ಒಪ್ಪಂದ ಜಾರಿಯಲ್ಲಿಆಗಿರುವ ವಿಳಂಬ ಧೋರಣೆ ಹಾಗೂ ಹಾಲಿ ಸೌಲಭ್ಯ ಕಡಿತ ವಿರೋಧಿಸಿ ಗುರುವಾರ ಬೆಳಗ್ಗೆಯಿಂದ ಶುಕ್ರವಾರದವರೆಗೆ ಕ್ಯಾಂಪ್‌ ಬಸ್‌ನಿಲ್ದಾಣದಲ್ಲಿನಿರಶನ ...

Vijaya Karnataka 9 Jan 2020, 3:16 pm
ಹಟ್ಟಿಚಿನ್ನದಗಣಿ: ಹೊಸ ಸಂಬಳ ಒಪ್ಪಂದ ಜಾರಿಯಲ್ಲಿಆಗಿರುವ ವಿಳಂಬ ಧೋರಣೆ ಹಾಗೂ ಹಾಲಿ ಸೌಲಭ್ಯ ಕಡಿತ ವಿರೋಧಿಸಿ ಗುರುವಾರ ಬೆಳಗ್ಗೆಯಿಂದ ಶುಕ್ರವಾರದವರೆಗೆ ಕ್ಯಾಂಪ್‌ ಬಸ್‌ನಿಲ್ದಾಣದಲ್ಲಿನಿರಶನ ನಡೆಸಲಾಗುವುದು ಎಂದು ಎಐಟಿಯುಸಿಯ ಸ್ಥಳೀಯ ಘಟಕದ ಅಧ್ಯಕ್ಷ ಶಾಂತಪ್ಪ ಅನ್ವರಿ ತಿಳಿಸಿದ್ದಾರೆ.
Vijaya Karnataka Web frustrated by opposition to facility cuts
ಸೌಲಭ್ಯ ಕಡಿತ ವಿರೋಧಿಸಿ ನಿರಶನ


2016ರ ಏಪ್ರಿಲ್‌ನಿಂದ ಜಾರಿಯಾಗಬೇಕಾದ ಹೊಸ ಸಂಬಳ ಒಪ್ಪಂದವು 4 ವರ್ಷ ಕಳೆದರೂ ಅನುಷ್ಠಾನ ಕಂಡಿಲ್ಲ. ಕಾರ್ಮಿಕರು ಈ ಹಿಂದೆ ಸಾಕಷ್ಟು ಹೋರಾಟ ಮಾಡಿ ಪಡೆದ ಸೌಲಭ್ಯಗಳಿಗೂ ಕತ್ತರಿ ಬೀಳುತ್ತಿದೆ. ಸೀಮೆ ಎಣ್ಣೆ ಭತ್ಯೆ, ಮನೆ ಬಾಡಿಗೆ ಭತ್ಯೆ, ಮನರಂಜನೆ ಭತ್ಯೆ, ಅಡುಗೆ ಅನಿಲದ ಭತ್ಯೆಗಳನ್ನು ಕಡಿತಮಾಡಲು ಆಡಳಿತವರ್ಗ ಮುಂದಾಗಿದ್ದನ್ನು ವಿರೋಧಿಸಿ ನಿರಶನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ