ಆ್ಯಪ್ನಗರ

‘ಸ್ಫರ್ಧೆ ವಿಚಾರ ರಾಯರಿಗೆ ಬಿಟ್ಟಿರುವೆ’

ಬದುಕಿನ ಬಹುತೇಕ ಸಂಕಷ್ಟದ ದಿನಗಳಲ್ಲಿ ಮಂತ್ರಾಲಯದ ರಾಯರನ್ನು ಸ್ಮರಿಸಿದ್ದೇನೆ. ರಾಯರೇ ನಮ್ಮ ಎಲ್ಲ ಸಂಕಷ್ಟ ದೂರ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ವಿಚಾರ ಮಂತ್ರಾಲಯದ ರಾಯರೇ ನಿರ್ಧರಿಸುವರು ಎಂದು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದರು.

Vijaya Karnataka 22 Dec 2017, 7:42 am
ರಾಯಚೂರು: ಬದುಕಿನ ಬಹುತೇಕ ಸಂಕಷ್ಟದ ದಿನಗಳಲ್ಲಿ ಮಂತ್ರಾಲಯದ ರಾಯರನ್ನು ಸ್ಮರಿಸಿದ್ದೇನೆ. ರಾಯರೇ ನಮ್ಮ ಎಲ್ಲ ಸಂಕಷ್ಟ ದೂರ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ವಿಚಾರ ಮಂತ್ರಾಲಯದ ರಾಯರೇ ನಿರ್ಧರಿಸುವರು ಎಂದು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದರು.
Vijaya Karnataka Web gali janardhan reddy vist to mantralaya
‘ಸ್ಫರ್ಧೆ ವಿಚಾರ ರಾಯರಿಗೆ ಬಿಟ್ಟಿರುವೆ’


ಅವರು ಮಂತ್ರಾಲಯದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವುದು ನಮ್ಮ ತಂದೆ, ತಾಯಿ ಕಾಲದಿಂದಲೂ ನಡೆದುಬಂದಿದೆ. ಅದೇ ರೀತಿ ನಾವು ಭೇಟಿ ನೀಡಿದ್ದೇವೆ. ಸಂಕಷ್ಟದಲ್ಲಿದ್ದಾಗ ಮಂತ್ರಾಲಯದ ರಾಯರನ್ನು ಸ್ಮರಿಸಿದ್ದೆ. ಅವರ ಹಾಡು ಹಾಡಿರುವೆ. ಸಂಕಷ್ಟಗಳು ಕಳೆದಿವೆ. ಹೀಗಾಗಿ ದರ್ಶನಕ್ಕಾಗಿ ಬಂದಿರುವೆ ಎಂದರು.

ಸಕ್ರಿಯ ರಾಜಕಾರಣವಿಲ್ಲ: ದೇವಸ್ಥಾನಗಳಿಗೆ ಭೇಟಿ ನೀಡುವುದರ ಹಿಂದೆ ಯಾವ ಉದ್ದೇಶವೂ ಇಲ್ಲ. ದೇವಸ್ಥಾನಗಳಿಗೆ ದಾನ ನೀಡಿದರೆ, ಅದನ್ನು ದೊಡ್ಡದಾಗಿ ಮಾಡಲಾಗುತ್ತದೆ. ಉದಾರತೆಯನ್ನು ಒಳ್ಳೆಯ ದೃಷ್ಟಿಯಿಂದ ನೋಡಬೇಕು. ದೇವರ ಸೇವೆಗೆ ಸಲ್ಲಿಸಿದ್ದು, ಮುಡಿಪು ಎಂದೆನಿಸುತ್ತದೆ ಎಂದರು. ರಾಜ್ಯದಲ್ಲಿ ನಡೆಯಲಿರುವ ಚುನಾವಣೆ ವೇಳೆ ಕಣಕ್ಕಿಳಿಯುವುದಿಲ್ಲ. ಸಕ್ರಿಯ ರಾಜಕೀಯದಲ್ಲೂ ತೊಡಗುವುದಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತನಾಗಿಯೇ ಮುಂದುವರಿಯುವೆ. ಸಂದರ್ಭ ಬಂದಾಗ ನಿರ್ಧಾರ ಪ್ರಕಟಿಸುವೆ ಎಂದರು.

ಸಮಾಲೋಚನೆ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಪತ್ನಿ ಅರುಣಾ ಲಕ್ಷ್ಮಿ ಅವರೊಂದಿಗೆ ಮಂತ್ರಾಲಯ ಶ್ರೀಕ್ಷೇತ್ರಕ್ಕೆ ಬುಧವಾರ ರಾತ್ರಿ ಆಗಮಿಸಿ ವಾಸ್ತವ್ಯ ಮಾಡಿದರು. ಗುರುವಾರ ಬೆಳಗ್ಗೆ ಶ್ರೀರಾಘವೇಂದ್ರಸ್ವಾಮಿಗಳ ಮೂಲಬೃಂದಾವನದ ದರ್ಶನ ಪಡೆದರು. ನಂತರ ಅವರು ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರನ್ನು ಕಂಡು ಸಮಾಲೋಚನೆ ನಡೆಸಿದರು. ಮಂತ್ರಾಲಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುವುದಾಗಿ ಶ್ರೀಗಳಿಗೆ ಭರವಸೆ ನೀಡಿದ ರೆಡ್ಡಿ ಅವರನ್ನು ಶ್ರೀಗಳು ಈ ವೇಳೆ ಸತ್ಕರಿಸಿದರು. ಗೋಶಾಲೆಯಲ್ಲಿ ರೆಡ್ಡಿ ದಂಪತಿ ಗೋಪೂಜೆ ನೆರವೇರಿಸಿದರು. ಶ್ರೀಮಠದ ಸಹಾಯಕ ವ್ಯವಸ್ಥಾಪಕ ಐ.ಪಿ.ನರಸಿಂಹಮೂರ್ತಿ ಸೇರಿದಂತೆ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ