ಆ್ಯಪ್ನಗರ

ಸರ್ವಿಸ್‌ ರಸ್ತೆಗೆ ಗೇಟ್‌ ಅಳವಡಿಕೆ: ಸಂಚಾರಕ್ಕೆ ತೊಂದರೆ

ರಾಂಪುರ ಏತ ನೀರಾವರಿ ಯೋಜನೆಯ ವಿತರಣಾ ಕಾಲುವೆಯ ಸರ್ವಿಸ್‌ ರಸ್ತೆಗೆ ಅಡ್ಡಲಾಗಿ ಗೇಟ್‌ ನಿರ್ಮಿಸಿರುವ ಪರಿಣಾಮ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ಸಂಶಯಕ್ಕೆ ಕಾರಣವಾಗಿದೆ.

Vijaya Karnataka 19 Aug 2018, 5:00 am
ಲಿಂಗಸುಗೂರು : ರಾಂಪುರ ಏತ ನೀರಾವರಿ ಯೋಜನೆಯ ವಿತರಣಾ ಕಾಲುವೆಯ ಸರ್ವಿಸ್‌ ರಸ್ತೆಗೆ ಅಡ್ಡಲಾಗಿ ಗೇಟ್‌ ನಿರ್ಮಿಸಿರುವ ಪರಿಣಾಮ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ಸಂಶಯಕ್ಕೆ ಕಾರಣವಾಗಿದೆ.
Vijaya Karnataka Web RAC-RCH18LNG01


ಸಮೀಪದ ಜಾಗೀರನಂದಿಹಾಳ ಗ್ರಾಮದ ಬಳಿಯ 4ನೇ ವಿತರಣಾ ಕಾಲುವೆಯ ಸರ್ವಿಸ್‌ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಗೇಟ್‌ ಅಳವಡಿಸಿದ್ದಾರೆ. ಕಚ್ಚಾ ರಸ್ತೆಯಾಗಿರುವ ಪರಿಣಾಮ ನಾನಾ ಈ ರಸ್ತೆಯಲ್ಲಿ ಯಾರು ಓಡಾಡಬಾರದು ಎಂಬ ಉದ್ದೇಶದಿಂದ ರೈತರಿಗೆ ಅನುಕೂಲವಾಗು ಸರ್ವಿಸ್‌ ರಸ್ತೆ ಬಂದ್‌ಆಗಿದೆ. ಕಾಲುವೆ ನಿರ್ಮಾಣದ ವೇಳೆ ಕೃಷ್ಣಾ ಭಾಗ್ಯ ಜಲ ನಿಗಮ ಸ್ವಾಧೀನ ಪಡಿಸಿಕೊಂಡರೂ ಈ ಜಾಗದಲ್ಲಿ ಗೇಟ್‌ ಅಳವಡಿಸಲಾಗಿದೆ. ಕಾಲುವೆ ಸುತ್ತಲಿನ ರೈತರು ಇದೇ ರಸ್ತೆ ಉಪಯೋಗಿಸಿಕೊಂಡು ತಮ್ಮ ಜಮೀನುಗಳಿಗೆ ಹೋಗುತ್ತಾರೆ. ಆದರೆ, ಈಗ ಗೇಟ್‌ ಅಳವಡಿಸಿರುವ ಪರಿಣಾಮ ಪರದಾಡುತ್ತಿದ್ದಾರೆ.

ಜಾಗೀರನಂದಿಹಾಳ ಗ್ರಾಮದಿಂದ ಹಿರೇಜಾವೂರಿಗೆ ತೆರಳುವ ಮಾರ್ಗದಲ್ಲಿ 4ನೇ ವಿತರಣಾ ನಾಲೆಯ ಪಕ್ಕದಲ್ಲಿ ರೈತರ ಜಮೀನು ಇದೆ. ತಮ್ಮ ತೋಟದ ಜಮೀನಿನ ಕಡೆ ಯಾರೂ ಸುಳಿಯಬಾರದು ಎಂಬ ಕಾರಣಕ್ಕೆ ಅಂಧಾ ದರ್ಬಾರ್‌ ನಡೆಸಿದ್ದಾರೆ. ರಸ್ತೆಯಲ್ಲಿ ಗೇಟ್‌ ಯಾಕೆ ನಿರ್ಮಾಣ ಮಾಡಲಾಗಿದೆ ಎಂದು ಕೇಳಿದವರಿಗೆ, ನನ್ನ ಜಮೀನಿನಲ್ಲಿ ಕೆನಾಲ್‌ ನಿರ್ಮಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ಅನಧಿಕೃತ ನೀರು ಬಳಕೆ: ರಾಂಪುರ ಹಾಗೂ ನಾರಾಯಣಪುರ ಬಲದಂಡೆ ವಿತರಣಾ ನಾಲೆಗೆ ಬಳಿ ನೀರು ನಿಲ್ಲಿಸಿ ಪಂಪ್‌ಸೆಟ್‌ಗಳ ಮೂಲಕ ತಮ್ಮ ಜಮೀನುಗಳಿಗೆ ಪಡೆಯುತ್ತಿದ್ದಾರೆ. ಅಲ್ಲದೇ ಸಾರ್ವಜನಿಕ ರಸ್ತೆಗೆ ಗೇಟ್‌ ಅಳವಡಿಕೆ ಕೂಡ ಮಾಡಲಾಗಿದೆ. ಇಷ್ಟೊಂದು ಅಕ್ರಮ ಇಲ್ಲಿ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ.


------

ಜಾಗೀರನಂದಿಹಾಳ ಹತ್ತಿರ ರಾಂಪುರ ಕಾಲುವೆಯ ಸರ್ವಿಸ್‌ ರಸ್ತೆಗೆ ಗೇಟ್‌ ಅಳವಡಿಸಿರುವ ಬಗ್ಗೆ ನನ್ನ ಗಮನಕ್ಕಿಲ್ಲ. ತಕ್ಷಣ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.

- ಶ್ರೀಹರ್ಷ, ಎಇಇ ರಾಂಪುರ ಯೋಜನಾಧಿಕಾರಿ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ