ಆ್ಯಪ್ನಗರ

ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸಿ ಹೋಮ

ದೇವದುರ್ಗ ತಾಲೂಕಿನ ವೀರಗೋಟ ಸುಕ್ಷೇತ್ರ ಆದಿಮೌನಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ವರುಣ ಮಹಾಯಾಗ ಬುಧವಾರ ಮಂತ್ರ ಜಯಘೋಷಗಳೊಂದಿಗೆ ಆರಂಭವಾಯಿತು.

Vijaya Karnataka 25 Jul 2019, 5:00 am
ಜಾಲಹಳ್ಳಿ : ದೇವದುರ್ಗ ತಾಲೂಕಿನ ವೀರಗೋಟ ಸುಕ್ಷೇತ್ರ ಆದಿಮೌನಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ವರುಣ ಮಹಾಯಾಗ ಬುಧವಾರ ಮಂತ್ರ ಜಯಘೋಷಗಳೊಂದಿಗೆ ಆರಂಭವಾಯಿತು.
Vijaya Karnataka Web RAC-RCH24JHL01


ಈ ಸಂದರ್ಭ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ವೀರಗೋಟ ಶ್ರೀ ಆದಿಮೌನಲಿಂಗೇಶ್ವರ ಸುಕ್ಷೇತ್ರದ ಶ್ರೀ ಅಡವಿಲಿಂಗ ಮಹಾರಾಜರು, ಯಜ್ಞ, ಯಾಗ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿತ್ಯ ನಡೆಸುವುದರಿಂದ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯ ಎಂದು ಹೇಳಿದರು. ಜಂಬಿಗಿಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೋಮ: ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಹಮ್ಮಿಕೊಂಡಿದ್ದ ಪರ್ಜನ್ಯ ವರುಣ ಯಾಗಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ 108 ಅಗ್ನಿ ಕುಂಡಲಗಳನ್ನು ಸಿದ್ಧಪಡಿಸಲಾಗಿತ್ತು. ಪ್ರತಿ ಕುಂಡಲದಲ್ಲಿ ನಾಲ್ಕು ಜೋಡಿ ದಂಪತಿಗಳು ಪುರೋಹಿತರ ಅನುಕರಣೆಯಲ್ಲಿ ಹೋಮ ನೆರವೇರಿಸಿದರು. ಒಟ್ಟು 432 ಜೋಡಿ ದಂಪತಿಗಳು ಸತತ ಎರಡು ಗಂಟೆಗಳ ಕಾಲ ಹೋಮ ಕೈಗೊಂಡರು. ಬಳ್ಳಾರಿಯ 40 ಹಾಗೂ ಆಂಧ್ರದ 25 ಸೇರಿ ಒಟ್ಟು 65 ಪುರೋಹಿತರು ಮಂತ್ರಘೋಷ ಮೊಳಗಿಸಿದರು. ಹತ್ತಾರು ಮಠದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

ಸಸಿ ವಿತರಣೆ: ಪರ್ಜನ್ಯ ವರುಣ ಯಾಗದಲ್ಲಿ ಭಾಗವಹಿಸಿದ ದಂಪತಿಗಳಿಗೆ ಪರಿಸರ ಜಾಗೃತಿ ಮೂಡಿಸಲು ಪ್ರತಿಯೊಬ್ಬರಿಗೂ ಶ್ರೀ ಅಡವಿಲಿಂಗ ಮಹಾರಾಜರು ಸಸಿಗಳನ್ನು ವಿತರಿಸಿದರು. 5 ದಿನ ನಡೆಯುವ ಕಾರ್ಯಕ್ರಮದಲ್ಲಿ 5000 ಹೆಚ್ಚು ಸಸಿ ವಿತರಣೆ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಮುನ್ನಾದಿನ ದೇವಸ್ಥಾನ ಆವರಣದಲ್ಲಿ 8000 ಸಸಿಗಳನ್ನು ನೆಡಲಾಯಿತು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಸಗರ ಒಕ್ಕಲಿಗರಮಠದ ಶ್ರೀ ಮರಿಮಹಾಂತ ಶಿವಾಚಾರ್ಯ ಸ್ವಾಮೀಜಿ, ಲಕ್ಷಾಂಪುರದ ಶ್ರೀ ಬಸವಲಿಂಗ ದೇವರು, ಮರು ಹುಚ್ಚೇಶ್ವರ ಮಹಾಸ್ವಾಮೀಜಿ, ನಿಲೋಗಲ್‌ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ನವಲಕಲ್‌ ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ