ಆ್ಯಪ್ನಗರ

ಅನ್ಯ ವಿದ್ಯಾರ್ಥಿಗಳಿಗೂ ಜಿಟಿಟಿಸಿ ತರಬೇತಿ : ಸುಬೋಧ್‌ ಯಾದವ್‌

ಜಿಲ್ಲೆಯಲ್ಲಿಏಕೈಕ ಜಿಟಿಟಿಸಿ ಕಾಲೇಜು ಆಗಿದೆ. ಇಲ್ಲಿಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇನ್ನಿತರ ತಾಂತ್ರಿಕ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೂ ಜಿಟಿಟಿಸಿ ತರಬೇತಿ ನೀಡುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಹೇಳಿದರು.

Vijaya Karnataka 13 Dec 2019, 3:23 pm
ಲಿಂಗಸುಗೂರು: ಜಿಲ್ಲೆಯಲ್ಲಿಏಕೈಕ ಜಿಟಿಟಿಸಿ ಕಾಲೇಜು ಆಗಿದೆ. ಇಲ್ಲಿಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇನ್ನಿತರ ತಾಂತ್ರಿಕ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೂ ಜಿಟಿಟಿಸಿ ತರಬೇತಿ ನೀಡುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಹೇಳಿದರು.
Vijaya Karnataka Web gttc training for foreign students subodh yadav
ಅನ್ಯ ವಿದ್ಯಾರ್ಥಿಗಳಿಗೂ ಜಿಟಿಟಿಸಿ ತರಬೇತಿ : ಸುಬೋಧ್‌ ಯಾದವ್‌


ಪಟ್ಟಣದ ಗುರುವಾರ ಜಿಟಿಟಿಸಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯಲ್ಲೇ ಏಕೈಕ ಸರಕಾರಿ ಉಪಕರಣ ತರಬೇತಿ ಕೇಂದ್ರವಾಗಿದೆ. ಇಲ್ಲಿತರಬೇತಿ ಪಡೆಯುವ ಸಂಖ್ಯೆ ಗಣನೀಯವಾಗಿ ಕುಸಿದಿದೆ. ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಲು ಆಗದಿದ್ದರೆ ಸರಕಾರವೇ ಭರಿಸಲು ಸಿದ್ಧವಿದೆ. ಈ ಬಗ್ಗೆ ಅರಿವು ಮೂಡಿಸುವಂತೆ ಪ್ರಾಚಾರ್ಯ ರಾಜುಕುಮಾರ ಅವರಿಗೆ ಸೂಚಿಸಿದರು. ಈ ಕೇಂದ್ರವನ್ನು ವ್ಯವಸ್ಥಿತವಾಗಿ ನಡೆಸಲು ಇಲ್ಲಿನ ವಿದ್ಯಾರ್ಥಿಗಳಿಗೆ ಅಲ್ಲದೆ ಸುತ್ತಮುತ್ತಲಿನ ಐಟಿಐ, ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಗಳಿಗೂ ಜಿಟಿಟಿಸಿ ತರಬೇತಿ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಸಭೆಯಲ್ಲಿನಡೆಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ವೆಂಕಟೇಶಕುಮಾರ್‌, ಸಹಾಯಕ ಆಯುಕ್ತ ಡಾ.ದಿಲೀಶ್‌ ಶಶಿ, ಜಿಟಿಟಿಸಿ ಜಂಟಿ ನಿರ್ದೇಶಕ ಮಹ್ಮದ್‌ ಇರ್ಫಾನ್‌ ಹಾಗೂ ಇನ್ನಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ