ಗುರುಗುಂಟಾ ಬಂದ್ : ಮೂರು ದಿನಗಳಲ್ಲಿನೀರು ಪೂರೈ
ಕೃಷ್ಣಾ ನದಿಯಿಂದ ರಾಯದುರ್ಗ, ಗುರುಗುಂಟಾ, ಕೋಠಾ ಹಾಗೂ ಹಟ್ಟಿ ಪಟ್ಟಣಕ್ಕೆ ಪೂರೈಕೆಯಾಗುವ ನೀರು ಕಳೆದ 2 ತಿಂಗಳಿಂದ ಸ್ಥಗಿತವಾಗಿದ್ದು, ನೀರು ಪೂರೈಸಿದ ಅಧಿಕಾರಿಗಳ ಧೋರಣೆ ಖಂಡಿಸಿ ಕನ್ನಡ ಸೇನೆ ಕರ್ನಾಟಕ ಹಾಗೂ ಇತರೆ ಸಂಘಟನೆಗಳು ಸೋಮವಾರ ಗುರುಗುಂಟಾ ಬಂದ್ಮಾಡಿ ಪ್ರತಿಭಟನೆ ನಡೆಸಿದವು.
Vijaya Karnataka 18 Sep 2019, 5:00 am
ಹಟ್ಟಿಚಿನ್ನದಗಣಿ: ಕೃಷ್ಣಾ ನದಿಯಿಂದ ರಾಯದುರ್ಗ, ಗುರುಗುಂಟಾ, ಕೋಠಾ ಹಾಗೂ ಹಟ್ಟಿ ಪಟ್ಟಣಕ್ಕೆ ಪೂರೈಕೆಯಾಗುವ ನೀರು ಕಳೆದ 2 ತಿಂಗಳಿಂದ ಸ್ಥಗಿತವಾಗಿದ್ದು, ನೀರು ಪೂರೈಸಿದ ಅಧಿಕಾರಿಗಳ ಧೋರಣೆ ಖಂಡಿಸಿ ಕನ್ನಡ ಸೇನೆ ಕರ್ನಾಟಕ ಹಾಗೂ ಇತರೆ ಸಂಘಟನೆಗಳು ಸೋಮವಾರ ಗುರುಗುಂಟಾ ಬಂದ್ಮಾಡಿ ಪ್ರತಿಭಟನೆ ನಡೆಸಿದವು.
18 ಕೋಟಿ ರೂಪಾಯಿಗಳ ವೆಚ್ಚದಲ್ಲಿಬಹುಗ್ರಾಮಗಳ ಕುಡಿವ ನೀರಿನ ಯೋಜನೆ ಕೈಗೊಳ್ಳಲಾಗಿದೆ. ಕಾಮಗಾರಿ ನಿರ್ವಹಿಸಿದ ಅಮರಗುಂಡಪ್ಪ ಮೇಟಿ ಎಂಬ ಗುತ್ತೇದಾರ, ಕಳಪೆ ಕಾಮಗಾರಿ ನಿರ್ವಹಿಸಿದ ಪರಿಣಾಮ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲವೆಂದು ಪ್ರತಿಭಟನಾಕಾರರು ದೂರಿದರು.
ಎಚ್ಚರಿಕೆ:ಅವೈಜ್ಞಾನಿಕವಾಗಿ ನದಿದಡದಲ್ಲಿಜಾಕ್ವೆಲ್ ನಿರ್ಮಿಸಿದ ಪರಿಣಾಮ ನದಿಯಲ್ಲಿನೀರು ಬಂದ್ ತಕ್ಷಣ ಮೋಟಾರುಗಳು ಹಾಳಾಗಿ ಪದೇಪದೆ ನೀರು ಪೂರೈಕೆಯಾಗಿ ಯೋಜನೆ ವ್ಯಾಪ್ತಿಯ ಗ್ರಾಮಗಳ ಜನರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಕೂಡಲೇ ದುರಸ್ತಿಗೊಳಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಿದರು.
ಭರವಸೆ:ಜಿ.ಪಂ. ಲಿಂಗಸುಗೂರು ವಿಭಾಗದ ಎಇಇ ಶ್ರೀಮಂತ ಮಿಣಜಿಗಿ ಮಾತನಾಡಿ, ನದಿಯಲ್ಲಿಪ್ರವಾಹ ಬಂದಿದ್ದರಿಂದ ಇದುವರೆಗೂ ದುರಸ್ತಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದೀಗ ಬೇರೆ ಮೋಟಾರ್ಗಳನ್ನು ತರಿಸಿ ಮೂರು ದಿನದೋಳಗೆ ನೀರು ಪೂರೈಕೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿ.ಪಂ.ಸಿಇಒಗೆ ಬರೆದ ಮನವಿ ಪತ್ರವನ್ನು ತಾ.ಪಂ. ಇಒ ಪ್ರಕಾಶ ವಡ್ಡರ್ ಸ್ವೀಕರಿಸಿ, ಮುಂದಿನ ಕ್ರಮಕ್ಕಾಗಿ ಸಿಇಒಗೆ ಕಳಿಸಿಕೊಡುವುದಾಗಿ ತಿಳಿಸಿದರು.
ಗುರುಗುಂಟಾ ಸಂಸ್ಥಾನದ ರಾಜಾ ಸೋಮನಾಥ ನಾಯಕ, ನಾನಾ ಸಂಘಟನೆಗಳ ಮುಖಂಡರಾದ ಶರಣೋನಿ ಪವಾರ್, ಅಮರೇಶ ರತ್ಮಗಿರಿ, ನಂದೇಶ ನಾಯಕ, ಹುಲುಗಪ್ಪ ನಾಯಕ, ಎಸ್.ಸೋಮನಾಥ ನಾಯಕ, ಶಿವುಕೆಂಪು, ಬಸವರಾಜ ಕುಂಬಾರ, ಸಲೀಂಬಿಸ್ತಾ, ಆದಪ್ಪ, ಅಮರೇಶ, ಮೈನುದ್ದೀನ್, ಹನುಮಂತ, ಹೇಮಂತ, ಪಂಚಮುಖ ಇತರರಿದ್ದರು.
18 ಕೋಟಿ ರೂಪಾಯಿಗಳ ವೆಚ್ಚದಲ್ಲಿಬಹುಗ್ರಾಮಗಳ ಕುಡಿವ ನೀರಿನ ಯೋಜನೆ ಕೈಗೊಳ್ಳಲಾಗಿದೆ. ಕಾಮಗಾರಿ ನಿರ್ವಹಿಸಿದ ಅಮರಗುಂಡಪ್ಪ ಮೇಟಿ ಎಂಬ ಗುತ್ತೇದಾರ, ಕಳಪೆ ಕಾಮಗಾರಿ ನಿರ್ವಹಿಸಿದ ಪರಿಣಾಮ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲವೆಂದು ಪ್ರತಿಭಟನಾಕಾರರು ದೂರಿದರು.
ಎಚ್ಚರಿಕೆ:ಅವೈಜ್ಞಾನಿಕವಾಗಿ ನದಿದಡದಲ್ಲಿಜಾಕ್ವೆಲ್ ನಿರ್ಮಿಸಿದ ಪರಿಣಾಮ ನದಿಯಲ್ಲಿನೀರು ಬಂದ್ ತಕ್ಷಣ ಮೋಟಾರುಗಳು ಹಾಳಾಗಿ ಪದೇಪದೆ ನೀರು ಪೂರೈಕೆಯಾಗಿ ಯೋಜನೆ ವ್ಯಾಪ್ತಿಯ ಗ್ರಾಮಗಳ ಜನರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಕೂಡಲೇ ದುರಸ್ತಿಗೊಳಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಿದರು.
ಭರವಸೆ:ಜಿ.ಪಂ. ಲಿಂಗಸುಗೂರು ವಿಭಾಗದ ಎಇಇ ಶ್ರೀಮಂತ ಮಿಣಜಿಗಿ ಮಾತನಾಡಿ, ನದಿಯಲ್ಲಿಪ್ರವಾಹ ಬಂದಿದ್ದರಿಂದ ಇದುವರೆಗೂ ದುರಸ್ತಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದೀಗ ಬೇರೆ ಮೋಟಾರ್ಗಳನ್ನು ತರಿಸಿ ಮೂರು ದಿನದೋಳಗೆ ನೀರು ಪೂರೈಕೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿ.ಪಂ.ಸಿಇಒಗೆ ಬರೆದ ಮನವಿ ಪತ್ರವನ್ನು ತಾ.ಪಂ. ಇಒ ಪ್ರಕಾಶ ವಡ್ಡರ್ ಸ್ವೀಕರಿಸಿ, ಮುಂದಿನ ಕ್ರಮಕ್ಕಾಗಿ ಸಿಇಒಗೆ ಕಳಿಸಿಕೊಡುವುದಾಗಿ ತಿಳಿಸಿದರು.
ಗುರುಗುಂಟಾ ಸಂಸ್ಥಾನದ ರಾಜಾ ಸೋಮನಾಥ ನಾಯಕ, ನಾನಾ ಸಂಘಟನೆಗಳ ಮುಖಂಡರಾದ ಶರಣೋನಿ ಪವಾರ್, ಅಮರೇಶ ರತ್ಮಗಿರಿ, ನಂದೇಶ ನಾಯಕ, ಹುಲುಗಪ್ಪ ನಾಯಕ, ಎಸ್.ಸೋಮನಾಥ ನಾಯಕ, ಶಿವುಕೆಂಪು, ಬಸವರಾಜ ಕುಂಬಾರ, ಸಲೀಂಬಿಸ್ತಾ, ಆದಪ್ಪ, ಅಮರೇಶ, ಮೈನುದ್ದೀನ್, ಹನುಮಂತ, ಹೇಮಂತ, ಪಂಚಮುಖ ಇತರರಿದ್ದರು.