ಮಸ್ಕಿ; ಸಮೀಪದ ಹಾಲಾಪುರ ಗ್ರಾಮದಲ್ಲಿ ಕಳೆದ 20 ದಿನಗಳಿಂದ ಶುದ್ಧ ಕುಡಿವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸ್ಥಳೀಯ ಅಧಿಕಾರಿಗಳು ನಿರತರಾಗಿದ್ದರಿಂದ ಗ್ರಾಮಸ್ಥರು ಜೀವಜಲಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹಳ್ಳ, ಕಾಲುವೆ, ಬಾವಿ, ಕೆರೆಗಳು ಬತ್ತಿ ಹೋಗಿವೆ. ಬೇಸಿಗೆ ಆರಂಭದ ಮುನ್ನವೇ ಇಂತಹ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಮುಂದೆ ಏನು ಗತಿ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಮನೆಯ ಒಬ್ಬ ಸದಸ್ಯ ಕೆಲಸ ಕಾರ್ಯ ಬಿಟ್ಟು ಸಂಜೆವರೆಗೆ ಸೈಕಲ್, ಎತ್ತಿನ ಗಾಡಿ, ಬೈಕ್, ಕಾಲ್ನಡಿಗೆ ಮೂಲಕ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಓವರ್ ಟ್ಯಾಂಕರ್ಗಳನ್ನು ನಿರ್ಮಿಸಿದರೂ ಅವುಗಳಿಗೆ ನೀರು ಪೂರೈಸಲು ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೊಳವೆ ಬಾವಿ ಇದ್ದರೂ ಫ್ಲ್ಲೋರೈಡ್ಯುಕ್ತ ನೀರನ್ನೇ ಆಶ್ರಯಿಸಬೇಕಾಗಿದೆ. ಗ್ರಾಮದ ಜನರು ಈ ನೀರನ್ನು ಕುಡಿಯುವುದರಿಂದ ಕಾಲು, ಕೈ, ನೋವುಗಳು ಉಂಟಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ನೀರು ಬಾರದೇ ಹಳ್ಳಕ್ಕೆ ತೆರಳಿ ಒರತೆಗಳಲ್ಲಿ ಸಿಗುವ ನೀರನ್ನು ಹೊತ್ತು ತರಬೇಕು. ಪ್ರತಿದಿನ ಜೀವಜಲಕ್ಕಾಗಿ ಅಲೆದಾಟ ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
---
ಯಾರಿಗೆ ವೋಟು ಹಾಕಿದರೂ ಏನ್ ಮಾಡಿದ್ರೂ ಅಷ್ಟ. ಮುಂಜಾನೆಯಿಂದ ಸಂಜೆವರೆಗೆ ಎಲ್ಲಿ ನೀರು ಸಿಗುತ್ತೋ ಅಲ್ಲಿಗೆ ಹೋಗಿ ಕುಡಿಯಾಕ ನೀರು ತರಬೇಕು. ನಲ್ಲಿ ಹಾಕಿಸಿದಾರ. ಆದ್ರ ಅದರೊಳಗ ನೀರು ಬರಲ್ಲ. ಚುನಾವಣೆ ಬಂದಾಗಷ್ಟೇ ಅವರು ಭರವಸೆ ಕೊಡ್ತಾರ.
-ಚಂದಮ್ಮ ಗ್ರಾಮಸ್ಥೆ
---
ಹಾಲಾಪುರ ಗ್ರಾಮದಲ್ಲಿ ನೀರಿನ ಅಂಶ ಕಡಿಮೆ ಇದೆ. ಬೇಸಿಗೆಯಲ್ಲಿ ನೀರಿನ ತೊಂದರೆಯಾಗಬಾರದು ಎಂದು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ನಂತರ ಜೆ.ಇ ಅವರಿಗೆ ಹೇಳಿದಾಗ ಚುನಾವಣೆಯಲ್ಲಿ ಬ್ಯುಸಿ ಇದ್ದೇನೆ ಎಂದು ಹೇಳಿದ್ದಾರೆ. ಹಾಗಾಗಿ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕ್ರಮ ಕೈಗೊಳ್ಳಬಹುದು.
-ಶರಣಗೌಡ, ಹಾಲಾಪುರ ಪಿಡಿಒ
ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸ್ಥಳೀಯ ಅಧಿಕಾರಿಗಳು ನಿರತರಾಗಿದ್ದರಿಂದ ಗ್ರಾಮಸ್ಥರು ಜೀವಜಲಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹಳ್ಳ, ಕಾಲುವೆ, ಬಾವಿ, ಕೆರೆಗಳು ಬತ್ತಿ ಹೋಗಿವೆ. ಬೇಸಿಗೆ ಆರಂಭದ ಮುನ್ನವೇ ಇಂತಹ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಮುಂದೆ ಏನು ಗತಿ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಮನೆಯ ಒಬ್ಬ ಸದಸ್ಯ ಕೆಲಸ ಕಾರ್ಯ ಬಿಟ್ಟು ಸಂಜೆವರೆಗೆ ಸೈಕಲ್, ಎತ್ತಿನ ಗಾಡಿ, ಬೈಕ್, ಕಾಲ್ನಡಿಗೆ ಮೂಲಕ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಓವರ್ ಟ್ಯಾಂಕರ್ಗಳನ್ನು ನಿರ್ಮಿಸಿದರೂ ಅವುಗಳಿಗೆ ನೀರು ಪೂರೈಸಲು ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೊಳವೆ ಬಾವಿ ಇದ್ದರೂ ಫ್ಲ್ಲೋರೈಡ್ಯುಕ್ತ ನೀರನ್ನೇ ಆಶ್ರಯಿಸಬೇಕಾಗಿದೆ. ಗ್ರಾಮದ ಜನರು ಈ ನೀರನ್ನು ಕುಡಿಯುವುದರಿಂದ ಕಾಲು, ಕೈ, ನೋವುಗಳು ಉಂಟಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ನೀರು ಬಾರದೇ ಹಳ್ಳಕ್ಕೆ ತೆರಳಿ ಒರತೆಗಳಲ್ಲಿ ಸಿಗುವ ನೀರನ್ನು ಹೊತ್ತು ತರಬೇಕು. ಪ್ರತಿದಿನ ಜೀವಜಲಕ್ಕಾಗಿ ಅಲೆದಾಟ ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
---
ಯಾರಿಗೆ ವೋಟು ಹಾಕಿದರೂ ಏನ್ ಮಾಡಿದ್ರೂ ಅಷ್ಟ. ಮುಂಜಾನೆಯಿಂದ ಸಂಜೆವರೆಗೆ ಎಲ್ಲಿ ನೀರು ಸಿಗುತ್ತೋ ಅಲ್ಲಿಗೆ ಹೋಗಿ ಕುಡಿಯಾಕ ನೀರು ತರಬೇಕು. ನಲ್ಲಿ ಹಾಕಿಸಿದಾರ. ಆದ್ರ ಅದರೊಳಗ ನೀರು ಬರಲ್ಲ. ಚುನಾವಣೆ ಬಂದಾಗಷ್ಟೇ ಅವರು ಭರವಸೆ ಕೊಡ್ತಾರ.
-ಚಂದಮ್ಮ ಗ್ರಾಮಸ್ಥೆ
---
ಹಾಲಾಪುರ ಗ್ರಾಮದಲ್ಲಿ ನೀರಿನ ಅಂಶ ಕಡಿಮೆ ಇದೆ. ಬೇಸಿಗೆಯಲ್ಲಿ ನೀರಿನ ತೊಂದರೆಯಾಗಬಾರದು ಎಂದು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ನಂತರ ಜೆ.ಇ ಅವರಿಗೆ ಹೇಳಿದಾಗ ಚುನಾವಣೆಯಲ್ಲಿ ಬ್ಯುಸಿ ಇದ್ದೇನೆ ಎಂದು ಹೇಳಿದ್ದಾರೆ. ಹಾಗಾಗಿ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕ್ರಮ ಕೈಗೊಳ್ಳಬಹುದು.
-ಶರಣಗೌಡ, ಹಾಲಾಪುರ ಪಿಡಿಒ