ಆ್ಯಪ್ನಗರ

ದ್ವಿದಳ ಧಾನ್ಯ ಕಟಾವು ಜೋರು !

ಸುತ್ತಲಿನ ನಾನಾ ಗ್ರಾಮಗಳ ರೈತರು ಎರಡು ತಿಂಗಳ ಹಿಂದೆ ಬಿತ್ತಿದ ದ್ವಿದಳ ಧಾನ್ಯಗಳು ಹುಲುಸಾಗಿ ಬೆಳೆದಿದ್ದು, ಕಟಾವು ಕಾರ್ಯ ಭರದಿಂದ ಸಾಗಿದೆ.

ವಿಕ ಸುದ್ದಿಲೋಕ 2 Apr 2016, 4:21 am
ಜಾಲಿಹಾಳ; ಸುತ್ತಲಿನ ನಾನಾ ಗ್ರಾಮಗಳ ರೈತರು ಎರಡು ತಿಂಗಳ ಹಿಂದೆ ಬಿತ್ತಿದ ದ್ವಿದಳ ಧಾನ್ಯಗಳು ಹುಲುಸಾಗಿ ಬೆಳೆದಿದ್ದು, ಕಟಾವು ಕಾರ್ಯ ಭರದಿಂದ ಸಾಗಿದೆ.
Vijaya Karnataka Web harvesting of grain legumes
ದ್ವಿದಳ ಧಾನ್ಯ ಕಟಾವು ಜೋರು !


ಕಳೆದ ವರ್ಷ ಸಮರ್ಪಕ ಮಳೆ ಇಲ್ಲದ ಕಾರಣ ರೈತರು ಭತ್ತ ಮಾತ್ರ ನಾಟಿ ಮಾಡಿ ಒಂದೇ ಬೆಳೆ ಬೆಳೆದರು. ಆಗ ತುಂಗಭದ್ರಾ ಡ್ಯಾಂ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಮಳೆ ಸುರಿದು ಡ್ಯಾಂ ಅಲ್ಪಸ್ವಲ್ಪ ತುಂಬಿತ್ತು. ಎರಡನೇ ಬೆಳೆಗೆ ಭತ್ತ ನಾಟಿ ಮಾಡಲು ತುಂಗಭದ್ರಾ ಡ್ಯಾಮಿನಿಂದ ನೀರು ಬರುವ ನಂಬಿಕೆಯಲ್ಲಿದ್ದರು. ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ರೈತರ ನಂಬಿಕೆ ಹುಸಿಯಾಯಿತು. ನೀರು ಬರುವುದಿಲ್ಲ ಎಂಬ ಸಂಗತಿ ಗೊತ್ತಾದ ನಂತರ ಕೆಲ ಗ್ರಾಮಗಳ ರೈತರು ಜನವರಿ ತಿಂಗಳವರೆಗೆ ಹರಿದ ನೀರು ಬಳಸಿಕೊಂಡು ಭೂಮಿ ತೇವಾಂಶಕ್ಕೆ 1ರಿಂದ 2ತಿಂಗಳಲ್ಲಿ ಬರುವ ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ಪಿಳಿಪಿಸಿರೆ, ಎಳ್ಳು, ಸಾಸಿವೆ, ಜಾನುವಾರುಗಳ ಮೇವಿಗೆ ಸೆಣಬು ಬೆಳೆಯಲು ಮುಂದಾದರು. ಈಗ ದ್ವಿದಳ ಧಾನ್ಯ ಹುಲುಸಾಗಿ ಬೆಳೆದಿದ್ದು ಕಟಾವು ಕಾರ್ಯ ನಡೆದಿದೆ.

ಕೀಟಬಾಧೆಯಿಂದ ರಕ್ಷಣೆ ಮಾಡಿ ಬೆಳೆದ ರೈತರ ಉದ್ದು, ಹೆಸರು ಎಕರೆಗೆ 2ರಿಂದ 3ಕ್ವಿಂಟಾಲ್ ಇಳುವರಿ ಬಂದಿವೆ. ಇನ್ನು ಕೆಲ ಜಾನುವಾರು ಉಳ್ಳ ರೈತರಿಗೆ ಮೇವಿನ ಕೊರತೆಯೂ ನೀಗಿದೆ.

---

ಬೇಸಿಗೆ ಬೆಳೆಗೆ ನೀರಿನ ಕೊರತೆಯಿಂದ ಜನವರಿ ತಿಂಗಳಲ್ಲಿ ಹರಿದ ನೀರು ಬಳಸಿಕೊಂಡು ಮೂರು ಎಕರೆಯಷ್ಟು ಉದ್ದು ಉಗ್ಗಿದ್ದೆ. ಉದ್ದು ಹುಲುಸಾಗಿ ಬೆಳೆದಿದ್ದು ಕಟಾವು ಕಾರ್ಯ ನಡೆಸಿದ್ದೇವೆ.

-ಕೆ.ನರಸಪ್ಪ, ಗೊರೇಬಾಳಕ್ಯಾಂಪ್ ರೈತ.

-------- ಬೇಸಿಗೆ ಬೆಳೆಗೆ ನೀರಿಲ್ಲದ ವಿಷಯ ತಿಳಿದು ಮೂರು ಎಕರೆ ಉದ್ದು , ಮೂರು ಎಕರೆ ಹೆಸರು ಬೆಳೆಯಲು ಮುಂದಾಗಿದ್ದೆವು. ಎಕರೆಗೆ 3ಕ್ವೀಂಟಾಲ್‌ನಷ್ಟು ಬೆಳೆದಿದ್ದೇವೆ. ಈಗ ಉದ್ದಿನ ಬೆಲೆ ಕ್ವಿಂಟಾಲ್‌ಗೆ 10ಸಾವಿರ ರೂ. ಇದೆ. ಉದ್ದು ಬೆಳೆದಿರುವುದು ಖುಷಿ ತಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ