ಆ್ಯಪ್ನಗರ

ಹೈಕೋರ್ಟ್‌ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ನಗರದಲ್ಲಿಸರಕಾರಿ ಕೆರೆ ಜಮೀನು ಸರ್ವೆ ಮಾಡಿ ವರದಿ ಕಳಿಸಲು ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

Vijaya Karnataka 5 Dec 2019, 3:16 pm
ರಾಯಚೂರು: ನಗರದಲ್ಲಿಸರಕಾರಿ ಕೆರೆ ಜಮೀನು ಸರ್ವೆ ಮಾಡಿ ವರದಿ ಕಳಿಸಲು ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
Vijaya Karnataka Web hc orders action against violators
ಹೈಕೋರ್ಟ್‌ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ


ಕಳೆದ ಐದು ವರ್ಷಗಳ ಹಿಂದೆ ನಗರದಲ್ಲಿನ ಸರ್ವೆ ನಂ.33/1ರಲ್ಲಿನ 39 ಎಕರೆ 22 ಗುಂಟೆ ಸರಕಾರದ ಕೆರೆ ಭೂಮಿಯನ್ನು ಹಿಂದಿನ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಪರಿಶೀಲಿಸಿ ಸರಕಾರಿ ಭೂಮಿಯೆಂದು ಪರಿಗಣಿಸಿ ಆದೇಶಿಸಿದ್ದರು. ಆದರೆ ನಗರಸಭೆ ಅಧಿಕಾರಿಗಳು ಭೂಗಳ್ಳರ ಪರವಾಗಿ ಕಾರ್ಯನಿರ್ವಹಿಸಿದ್ದರಿಂದ ಭೂಗಳ್ಳರು ನ್ಯಾಯಾಲಯಕ್ಕೆ ಹೋಗಲು ಅವಕಾಶ ಕಲ್ಪಿಸಿಕೊಟ್ಟಿದ್ದರು.

ಈ ಕುರಿತು ಹೈಕೋರ್ಟ್‌ ಸರ್ವೆ ಕಾರ್ಯ ಮುಗಿಸಿ ವರದಿ ಕೊಡಲು ಸೂಚಿಸಿದ್ದರೂ ಈವರೆಗೆ ಸರ್ವೆ ಕಾರ್ಯ ನಡೆಸದ ಅಧಿಕಾರಿಗಳು ಡಿ.3ರಂದು ಸರ್ವೆ ಕಾರ್ಯಾರಂಭಿಸಿದ್ದಾರೆ. ಸರ್ವೆ ಅಧಿಕಾರಿಗಳು, ತಹಸೀಲ್ದಾರರು ಸೇರಿ ಇತರ ಅಧಿಕಾರಿಗಳು ಸರ್ವೆ ನಡೆಸಿದ್ದು, ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಘಿಸಿ ತಡವಾಗಿ ಸರ್ವೆ ನಡೆಸಿದ್ದಾರೆ. ಸದ್ಯ ನಡೆಸುತ್ತಿರುವ ಸರ್ವೆ ಕಾರ್ಯ ಭೂಗಳ್ಳರ ಪರವಾಗಿ ನಡೆಸಲಾಗುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ.

ಆದ್ದರಿಂದ ಸರ್ವೆಯಲ್ಲಿಪಾರದರ್ಶಕತೆ ಕಾಪಾಡಬೇಕು. ಸರ್ಕಾರದ ಕೆರೆ ಭೂಮಿಯಲ್ಲಿಅಕ್ರಮವಾಗಿ ಕಟ್ಟಿರುವ ಎಲ್ಲಾಕಟ್ಟಡಗಳನ್ನು ತೆರವುಗೊಳಿಸಿ ಬಡಜನರಿಗೆ ಭೂಮಿ ಹಂಚಿಕೆ ಮಾಡಬೇಕು. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಕೆರೆ ಪ್ರದೇಶದಲ್ಲಿಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದು. ಈ ಆದೇಶ ಉಲ್ಲಂಘಿಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಮುಖಂಡರಾದ ಶ್ರೀನಿವಾಸ ಕೊಪ್ಪರ, ನರಸಿಂಹ, ಎಂ.ಮಾರೆಪ್ಪ, ಅಬ್ದುಲ್‌ ಸತ್ತಾರ್‌, ರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ