ಆ್ಯಪ್ನಗರ

ಬಿಸಿಲಿನ ತಾಪ: ರಾಯಚೂರಿನಲ್ಲಿ ನರೇಗಾ ಕಾರ್ಮಿಕ ಸಾವು?

ಕಾಮಗಾರಿ ಸ್ಥಳದಲ್ಲೇ ಹೋರಾಟ. ಬೇಸಿಗೆ ಹಿನ್ನೆಲೆ ಸ್ಥಳದಲ್ಲಿ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಕೆಲಸ ನಿರ್ವಹಿಸುವ ಕೆಲಸದ ಅವಧಿ ಬೇಸಿಗೆ ಹಿನ್ನೆಲೆ‌ ಸರಕಾರದಿಂದ ಕಡಿತವಿಲ್ಲ ಹಾಗಾಗಿ ಕಾರ್ಮಿಕನ ಸಾವು ಸಂಭವಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Vijaya Karnataka Web 27 Feb 2019, 4:22 pm
ರಾಯಚೂರು: ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಬಿಸಿಲಿನ ತಾಪ ತಾಳದೆ ಮೃತಪಟ್ಟಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ
Vijaya Karnataka Web ಕಾರ್ಮಿಕ ಸಾವು
ಕಾರ್ಮಿಕ ಸಾವು


ರಾಯಚೂರು ತಾಲೂಕಿನ ಬಿಚ್ಚಾಲಿ ಪಂಚಾಯಿತಿ ವ್ಯಾಪ್ತಿಯ ಯದ್ಲಾಪೂರು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಬಿರುಬಿಸಿಲಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಬುಡ್ಡೆಯಲ್ಲಪ್ಪ (55) ಮೃತಪಟ್ಟಿದ್ದಾರೆ.

ನರೇಗಾ ಯೋಜನೆಯಡಿ ಕೆಲಸ ಮಾಡುವಾಗ ಮೃತ ಪಟ್ಟಿದ್ದಾರೆ. ಬಿಸಿಲಿನ ತಾಪದಿಂದಲೇ ಸಾವು ಸಂಭವಿಸಿದೆ ಎಂದು ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.

ಕಾರ್ಮಿಕ ಬುಡ್ಡಯಲ್ಲಪ್ಪಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಆಗ್ರಹಿಸಿ ಕೆಲವು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾಮಗಾರಿ ಸ್ಥಳದಲ್ಲೇ ಹೋರಾಟ. ಬೇಸಿಗೆ ಹಿನ್ನೆಲೆ ಸ್ಥಳದಲ್ಲಿ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಕೆಲಸ ನಿರ್ವಹಿಸುವ ಕೆಲಸದ ಅವಧಿ ಬೇಸಿಗೆ ಹಿನ್ನೆಲೆ‌ ಸರಕಾರದಿಂದ ಕಡಿತವಿಲ್ಲ ಹಾಗಾಗಿ ಕಾರ್ಮಿಕನ ಸಾವು ಸಂಭವಿಸಿದೆ. ಕೂಡಲೇ ಸೂಕ್ತ ಪರಿಹಾರ ಒದಗಿಸಿ, ಸೌಲಭ್ಯಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ