ಆ್ಯಪ್ನಗರ

ರಾಯಚೂರು: ನಾನಾ ಕಡೆ ರಾತ್ರಿ ಮಳೆಗೆ ನಲುಗಿದ ಬೆಳೆ, ಜನಜೀವನ ಅಸ್ತವ್ಯಸ್ತ

ರಾಯಚೂರು ತಾಲೂಕಿನ ಇಡಪನೂರು ಗ್ರಾಮದಲ್ಲಿ ಹಳ್ಳದ ನೀರು ಹೊಕ್ಕಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು ಸ್ಥಳಾಂತರಗೊಂಡರು. ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಹಳ್ಳದ ನೀರು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಸಂಭವಿಸಿದೆ.

Vijaya Karnataka Web 19 Sep 2020, 12:55 pm
ರಾಯಚೂರು: ಜಿಲ್ಲೆಯ ನಾನಾ ಕಡೆ ಧಾರಾಕಾರ ಮಳೆ. ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳಗಳು. ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
Vijaya Karnataka Web ಜೆಸ್ಕಾಂ ಜಲಾವೃತ
ಜೆಸ್ಕಾಂ ಜಲಾವೃತ


ತಲಮಾರಿ, ಇಡಪನೂರು, ಬುರ್ದಿಪಾಡ ಗ್ರಾಮಗಳಲ್ಲಿ ಹಳ್ಳದ ನೀರು ನುಗ್ಗಿದೆ. ಹೊಲಗಳಿಗೆ ಹಳ್ಳದ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹತ್ತಿ, ಭತ್ತಕ್ಕೆ ಅಪಾರ ಹಾನಿ ಉಂಟಾಗಿದೆ.

ರಾಯಚೂರು ತಾಲೂಕಿನ ಜೇಗರಕಲ್‌ನಲ್ಲಿ 112.2 ಮಿಮೀ ಮಳೆಯಾಗಿದೆ.

ಬೆಳೆ ಹಾನಿ


ರಾಯಚೂರು ನಗರದಲ್ಲಿಯೂ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಶಾಲೆಗಳ ಆವರಣದಲ್ಲಿ ನೀರು ಸಂಗ್ರಹವಾಗಿದೆ. ರಾಯಚೂರು ನಗರದಲ್ಲಿ 83 ಮಿಮೀ ಮಳೆಯಾಗಿದೆ. ಜೆಸ್ಕಾಂ ಕಚೇರಿಗೂ ನೀರು ನುಗ್ಗಿ ಸಿಬ್ಬಂದಿ ಸಾಕಷ್ಟು ಪರದಾಡಿದರು.

ರಾಯಚೂರು ತಾಲೂಕಿನ ಇಡಪನೂರು ಗ್ರಾಮದಲ್ಲಿ ಹಳ್ಳದ ನೀರು ಹೊಕ್ಕಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು ಸ್ಥಳಾಂತರಗೊಂಡರು.

ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಹಳ್ಳದ ನೀರು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಸಂಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ