ಆ್ಯಪ್ನಗರ

ಸಾಲಮನ್ನಾಕ್ಕೆ ಒತ್ತಾಯಿಸಿ ಹೆದ್ದಾರಿ ಬಂದ್‌

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಹಾಗೂ ಗ್ರಾಮೀಣ ಪ್ರದೇಶದ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಪ್ಯಾಕೇಜ್‌ ನೀಡಲು ಒತ್ತಾಯಿಸಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಬಂದ್‌ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಮುದಗಲ್‌ ಪಟ್ಟಣದಲ್ಲಿ ಬೆಳಗ್ಗೆ ಸಾಂಕೇತಿಕವಾಗಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಘೋಷಣೆ ಕೂಗಲಾಯಿತು.

Vijaya Karnataka 23 Jul 2018, 5:00 am
ಮುದಗಲ್‌ : ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಹಾಗೂ ಗ್ರಾಮೀಣ ಪ್ರದೇಶದ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಪ್ಯಾಕೇಜ್‌ ನೀಡಲು ಒತ್ತಾಯಿಸಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಬಂದ್‌ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಮುದಗಲ್‌ ಪಟ್ಟಣದಲ್ಲಿ ಬೆಳಗ್ಗೆ ಸಾಂಕೇತಿಕವಾಗಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಘೋಷಣೆ ಕೂಗಲಾಯಿತು.
Vijaya Karnataka Web RAC-RCH22MDL01


ಕರ್ನಾಟಕ ರಾಜ್ಯ ರೈತ ಸಂಘ, ಸಾಲ ಮನ್ನಾ ಮಾಡಲು ವಿಶೇಷ ಪ್ಯಾಕೇಜ್‌ಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಿಟ್ನಾಳ್‌ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ರೈತರು ಭಾಗವಹಿಸುತ್ತಿದ್ದು, ಬಂದ್‌ಗೆ ಹೋಗುವ ಮುನ್ನ ಪಟ್ಟಣದಲ್ಲಿ ನೂರಾರು ರೈತರು ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಘೋಷಣೆ ಕೂಗಿದರು.

ಈ ಸಮಯದಲ್ಲಿ ರೈತ ಸಂಘದ ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ನೂರಾರು ರೈತರು ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪತ್ರಿಕೆ ಮಾತನಾಡಿದರು. ಬೆಳೆ ಸಾಲ ಮನ್ನಾ ಮಾಡುವಲ್ಲಿ ಸರಕಾರದ ಕರಾರು, ದ್ವಂದ್ವ ನಿಲುವು ಕೈಬಿಟ್ಟು ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಡಾ: ಸ್ವಾಮಿನಾಥನ್‌ ವರದಿ ಜಾರಿಗೆ ಮಾಡಬೇಕು. ಸಾಲ ಮನ್ನಾ ನಂತರ ರೈತರಿಗೆ, ಕಾರ್ಮಿಕರಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸರಳ ಹೊಸ ರೀತಿಯ ಸಾಲ ನೀಡಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಕೈಗೊಂಡಿದ್ದೇವೆ. ಅದರಂತೆ ಸಾಂಕೇತಿಕವಾಗಿ ಪಟ್ಟಣದಲ್ಲಿಯೂ ರಾಜ್ಯ ಹೆದ್ದಾರಿಯನ್ನು ರೈತರು ಮಾಡಿದ್ದೇವೆ ಎಂದು ಹೇಳಿದರು.

ವೀರನÜಗೌಡ ಹಟ್ಟಿ, ಬಸನಗೌಡ, ಮಲ್ಲಣ್ಣ ಮಟ್ಟೂರ, ಚಂದಾವಲಿಸಾಬ್‌, ಲಿಂಗಪ್ಪ ಗೌಡನಭಾವಿ ಸೇರಿ ಮುಂತಾದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ