ಆ್ಯಪ್ನಗರ

ಸದ್ಭಾವನಾ ಪಾದಯಾತ್ರೆ ಆರಂಭ

ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರ ದ್ವಾದಶ ಗುರು ಪಟ್ಟಾಧಿಕಾರ ಕಾರ್ಯಕ್ರಮದ ನಿಮಿತ್ತ ಗುರುವಾರ ನಗರದಲ್ಲಿ ಸದ್ಭಾವನಾ ಪಾದಯಾತ್ರೆ ಆರಂಭಗೊಂಡಿತು.

Vijaya Karnataka 12 Jul 2019, 3:23 pm
ಸಿಂಧನೂರು : ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರ ದ್ವಾದಶ ಗುರು ಪಟ್ಟಾಧಿಕಾರ ಕಾರ್ಯಕ್ರಮದ ನಿಮಿತ್ತ ಗುರುವಾರ ನಗರದಲ್ಲಿ ಸದ್ಭಾವನಾ ಪಾದಯಾತ್ರೆ ಆರಂಭಗೊಂಡಿತು.
Vijaya Karnataka Web hike to the start of sadbhavana
ಸದ್ಭಾವನಾ ಪಾದಯಾತ್ರೆ ಆರಂಭ


ಆಂಜನೇಯ ದೇವಸ್ಥಾನದಿಂದ ಸೋಮನಾಥ ಶಿವಾಚಾರ್ಯರ ನೇತೃತ್ವದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಒಂದರಿಂದ ಐದನೇ ವಾರ್ಡಿನವರೆಗೆ ಪಾದಯಾತ್ರೆ ನಡೆಸಿದ ಶ್ರೀಗಳು, ಪ್ರತಿಯೊಬ್ಬರಿಗೆ ಪರಿಸರ ಜಾಗೃತಿ, ಸ್ವಚ್ಛತೆ ಹಾಗೂ ದುಶ್ಚಟಗಳಿಂದ ದೂರವಿರುವಂತೆ ಮನವರಿಕೆ ಮಾಡಿಕೊಟ್ಟರು. ನಾರಾಯಣಪ್ಪ ಮಾಡಶಿರವಾರ ನೇತೃತ್ವದ ಭಜನಾ ತಂಡದವರು ತತ್ತ್ವಪದಗಳನ್ನು ಹಾಡುತ್ತಾ ಪಾದಯಾತ್ರೆಗೆ ಮೆರುಗು ನೀಡಿದರು.

ಪ್ರವಚನಕಾರ ಅನ್ನದಾನೇಶ್ವರ ಶಾಸ್ತ್ರಿಗಳು ಗುಡೂರು, ತುರುವಿಹಾಳ ಪುರವರಮಠದ ಅಮರಗುಂಡ ಶಿವಾಚಾರ್ಯ ಮಹಾಸ್ವಾಮೀಜಿ, ಸಿರಗುಪ್ಪದ ಬಸವಭೂಷಣ ಸ್ವಾಮೀಜಿ, ಅಮರಯ್ಯಸ್ವಾಮಿ ಅಲಬನೂರು, ವೀರೇಂದ್ರ ಪ್ರಸಾದ್‌, ಯೋಗಗುರು ಎಂ.ಭಾಸ್ಕರ್‌, ತೋಂಟದಾರ್ಯ ಸಿದ್ಧಾಂತಿಮಠ, ರವಿ ಹಿರೇಮಠ, ರಾಜು ಬಂಡಿ, ಚಂದ್ರಶೇಖರ ಮೇಟಿ, ಕೆ.ಮರಿಯಪ್ಪ, ನಬಿಸಾಬ್‌, ಶರಣಪ್ಪ ಉಪ್ಪಲದೊಡ್ಡಿ, ಬೀರಪ್ಪ ಶಂಭೋಜಿ ಸೇರಿ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ