ಆ್ಯಪ್ನಗರ

‘ನಾನು ಸಿದ್ರಾಮಣ್ಣನ ಪಕ್ಕಾ ಅಭಿಮಾನಿ’

''ನಾನು, ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಕ್ಕಾ ಅಭಿಮಾನಿ'' ಎನ್ನುವ ಮೂಲಕ ದೇವದುರ್ಗ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಅಚ್ಚರಿ ಮೂಡಿಸಿದರು.

Vijaya Karnataka 16 Nov 2019, 3:55 pm
ದೇವದುರ್ಗ (ರಾಯಚೂರು): ''ನಾನು, ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಕ್ಕಾ ಅಭಿಮಾನಿ'' ಎನ್ನುವ ಮೂಲಕ ದೇವದುರ್ಗ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಅಚ್ಚರಿ ಮೂಡಿಸಿದರು.
Vijaya Karnataka Web i put sidramanna and fan
‘ನಾನು ಸಿದ್ರಾಮಣ್ಣನ ಪಕ್ಕಾ ಅಭಿಮಾನಿ’


ಸ್ಥಳೀಯ ಸಾರ್ವಜನಿಕ ಕ್ಲಬ್‌ ಮೈದಾನದಲ್ಲಿತಾಲೂಕಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು. ''ಸಿದ್ದರಾಮಯ್ಯನವರಂಥ ಮಹಾನಾಯಕನ್ನು ಪಡೆದ ಕುರುಬ ಸಮಾಜ ಧನ್ಯ. ಅವರ ರಾಜಕೀಯ ಶೈಲಿ ಎಲ್ಲರಿಗೂ ಮಾದರಿ. ನಾನು ಸಿದ್ರಾಮಣ್ಣನ ಪಕ್ಕಾ ಅಭಿಮಾನಿ'' ಎಂದು ಹೇಳಿದ್ದಲ್ಲದೇ ಸಿದ್ದರಾಮಯ್ಯ ಅವರ ರಾಜಕೀಯ ಜೀವನ, ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿತಾ.ಪಂ. ಅಧ್ಯಕ್ಷ ಹನುಮಂತ ಮಿಯ್ಯಾಪುರ, ತಹಸೀಲ್ದಾರ್‌ ಶ್ರುತಿ ಕೆ., ಇಒ ಹಾಲಸಿದ್ದಪ್ಪ ಪೂಜೇರಿ, ಬಿಇಒ ಎಸ್‌.ಎಂ.ಹತ್ತಿ, ಸಿಪಿಐ ಲೋಕೇಶ, ಶಿವಣ್ಣ ಪೂಜಾರಿ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ