ಆ್ಯಪ್ನಗರ

ಡಿಕೆಶಿ ಪ್ರಾಮಾಣಿಕರಾಗಿದ್ದರೆ ಸೀತೆಯಷ್ಟು ಪವಿತ್ರವಾಗಿ ಕೇಸ್‌ನಿಂದ ಹೊರಬರಲಿ: ಈಶ್ವರಪ್ಪ ಸವಾಲು

ಈ ಹಿಂದೆ ಡಿ.ಕೆ.ಶಿವಕುಮಾರ್‌ ಅವರ ಮನೆ ಮೇಲೆ ದಾಳಿ ನಡೆದಾಗ ಹವಾಲಾ ಹಣ ಸಿಕ್ಕಿದೆ. ಈಗಾಗಲೇ ಡಿ.ಕೆ.ಶಿವಕುಮಾರ್‌ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

Vijaya Karnataka Web 7 Oct 2020, 6:52 pm
ರಾಯಚೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಾಮಾಣಿಕರಾಗಿದ್ದರೆ ಸೀತೆಯಷ್ಟು ಪವಿತ್ರವಾಗಿ ಕೇಸ್‌ನಿಂದ ಹೊರಬರಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸವಾಲು ಹಾಕಿದ್ದಾರೆ.
Vijaya Karnataka Web if dk shivakumar is honest get out of the case as sita says minister ks eshwarappa on cbi raid
ಡಿಕೆಶಿ ಪ್ರಾಮಾಣಿಕರಾಗಿದ್ದರೆ ಸೀತೆಯಷ್ಟು ಪವಿತ್ರವಾಗಿ ಕೇಸ್‌ನಿಂದ ಹೊರಬರಲಿ: ಈಶ್ವರಪ್ಪ ಸವಾಲು


ರಾಯಚೂರಿನಲ್ಲಿ‌ ಮಾತನಾಡಿದ ಅವರು, ಈ ಹಿಂದೆ ಶಿವಕುಮಾರ್‌ ಅವರ ಮನೆ ಮೇಲೆ ದಾಳಿ ನಡೆದಾಗ ಹವಾಲಾ ಹಣ ಸಿಕ್ಕಿದೆ. ಹಲವು ದಾಖಲೆಗಳು ಸಿಕ್ಕಿದ್ದರಿಂದ ಈಗಾಗಲೇ ಡಿ.ಕೆ.ಶಿವಕುಮಾರ್‌ ಜೈಲಿಗೆ ಹೋಗಿ ಬಂದಿದ್ದಾರೆ. ಡಿಕೆಶಿ ಪ್ರಾಮಾಣಿಕರಾಗಿದ್ದರೆ ಕಾನೂನಾತ್ಮಕವಾಗಿ ಕೇಸ್‌ನಿಂದ ಹೊರಬರಲಿ ಎಂದರು.

ಇನ್ನು, ಸ್ವಾತಂತ್ರ್ಯ ಬಂದಾಗಿನಿಂದಲೂ ಕುರುಬರಿಗೆ ಎಸ್‌ಟಿ ಮೀಸಲು ನೀಡುವ ವಿಚಾರ ಚರ್ಚೆ ನಡೆಯುತ್ತಿದೆ. ವಾಲ್ಮೀಕಿ ಸಮಾಜಕ್ಕೆನೀಡಿದ ಮೀಸಲಾತಿಯನ್ನು ಕುರುಬರು ಕಸಿದು ಕೊಳ್ಳುವುದಿಲ್ಲ. ಹಿಂದುಳಿದ ಯಾವ ಸಮಾಜಕ್ಕೆ ಎಸ್‌ಟಿ ನೀಡಬೇಕೆಂದರೂ ನನ್ನ ಬೆಂಬಲವಿದೆ. ಕುರುಬ ಸಮಾಜಕ್ಕೆ ಮೀಸಲಾತಿ ಹೋರಾಟಕ್ಕೆ ನಾನು ನೇತೃತ್ವ ವಹಿಸಿಲ್ಲ. ಸ್ವಾಮೀಜಿಗಳು ಕರೆದಿದ್ದಾರೆ ಹೋಗಿದ್ದೇನೆ ಎಂದು ಹೇಳಿದರು.

ಸಿಬಿಐ ದಾಳಿ ನಡೆಸಿ ಚುನಾವಣೆ ಗೆಲ್ಲುವ ಅನಿವಾರ್ಯತೆ ಬಿಜೆಪಿಗಿಲ್ಲ..! ಜಯ ನಮ್ಮದೇ ಎಂದ ಶೆಟ್ಟರ್‌

ಮಾಸ್ಕ್‌ನ ಮಹತ್ವ ತಿಳಿಸಲು ದಂಡ ಹೆಚ್ಚಿಗೆ ಮಾಡಲಾಗಿತ್ತು. ಆದರೆ, ಜನರು ದಂಡ ಇಳಿಕೆಗೆ ಆಗ್ರಹಿಸಿದರು. ಆದ್ದರಿಂದ, ದಂಡ ಇಳಿಸಲಾಗಿದೆ. 250 ರೂ. ದಂಡ ನೀಡೋದಕ್ಕಿಂತ ಜೀವ ಮುಖ್ಯ ಎಂಬುದು ತಿಳಿಸುವುದು ಸರಕಾರದ ಉದ್ದೇಶ. ಮಾಸ್ಕ್‌ ಬಗ್ಗೆ ಜಾಗೃತಿ ಮೂಡಿಸಲು ಸರಕಾರ ಮುಂದಾಗಿದೆ ಎಂದು ಹೇಳಿದರು.

ಚುನಾವಣೆ ವೇಳೆ ಬಿಜೆಪಿಯ ಇಂತಹ ಗೊಡ್ಡು ಬೆದರಿಕೆಗಳಿಗೆ ಕುಗ್ಗಲ್ಲ: ಡಿ.ಕೆ.ಸುರೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ