ಆ್ಯಪ್ನಗರ

ಅಕ್ರಮ ಮರಳು ಸಂಗ್ರಹ: ಕಂದಾಯ ಅಧಿಕಾರಿಗಳು ಮೌನ!

ಪಟ್ಟಣ ಸಮೀಪದ ತುಂಗಾಭದ್ರ ಎಡದಂಡೆ ಮುಖ್ಯ ನಾಲೆಯ 54ನೇ ಉಪ ಕಾಲುವೆಯ ಹತ್ತಿರ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.

Vijaya Karnataka 26 May 2019, 5:00 am
ಮಸ್ಕಿ : ಪಟ್ಟಣ ಸಮೀಪದ ತುಂಗಾಭದ್ರ ಎಡದಂಡೆ ಮುಖ್ಯ ನಾಲೆಯ 54ನೇ ಉಪ ಕಾಲುವೆಯ ಹತ್ತಿರ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.
Vijaya Karnataka Web illegal sand collection revenue officials silence
ಅಕ್ರಮ ಮರಳು ಸಂಗ್ರಹ: ಕಂದಾಯ ಅಧಿಕಾರಿಗಳು ಮೌನ!


ಕಳೆದ ಮೂರ್ನಾಲ್ಕು ತಿಂಗಳ ಹಿಂದೆ 54ನೇ ಉಪ ಕಾಲುವೆಯ ಸೇತುವೆ ಕುಸಿದ್ದಿದ್ದು, ಸೇತುವೆ ನಿರ್ಮಾಣಕ್ಕೆ ನೀರಾವರಿ ಇಲಾಖೆಯಿಂದ ಈಗಾಗಲೇ 1 ಕೋಟಿ ರೂ. ಅಧಿಕ ಹಣ ಬಿಡುಗಡೆಯಾಗಿದ್ದು, ಮುನಿರಬಾದ್‌ ಮೂಲಕದ ಗುತ್ತೇದಾರರಿಗೆ ಸೇತುವೆ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಸೇತುವೆ ನಿರ್ಮಾಣದ ಕಾಮಗಾರಿ ಚಾಲನೆ ಮಾಡಲಾಗಿದ್ದು, ಆದರೆ ಬೇಸಿಗೆಯಲ್ಲಿ ಕುಡಿವ ಸಲುವಾಗಿ ನಾಲೆಗೆ ನೀರು ಹರಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಆದರೆ ಪುನಃ ಸೇತುವೆ ಕಾಮಗಾರಿ ಪ್ರಾರಂಭಿಸುತ್ತಿರುವುದರಿಂದ ಸೇತುವೆ ನಿರ್ಮಿಸಲು 10 ರಿಂದ 15 ಟ್ರಿಪ್‌ಗಳಷ್ಟು ಅಕ್ರಮವಾಗಿ ಮರಳನ್ನು ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ.

ಸರಕಾರಕ್ಕೆ ಯಾವುದೇ ರಾಜಧನ (ರಾಯಲ್ಟಿ) ಕಟ್ಟದೇ ಅಕ್ರಮವಾಗಿ ಮರಳು ಸಂಗ್ರಹ ಮಾಡಿರುವ ಬಗ್ಗೆ ಕಂದಾಯ ನೀರಿಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಗಮನಕ್ಕೂ ಇದ್ದರೂ ಕ್ರಮಕ್ಕೆ ಮುಂದಾಗದಿರುವುದರಿಂದ ಹಲವು ಅನುಮಾನಗಳಿಗೆ ಹಾದಿ ಮಾಡಿಕೊಟ್ಟಿದೆ.

ಕೂಡಲೇ ತಾಲೂಕು ದಂಡಾಧಿಕಾರಿಗಳು ಸೇತುವೆ ನಿರ್ಮಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಬೇಕು. ಸರಕಾರಕ್ಕೆ ರಾಜಧನ ಕಟ್ಟದೇ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ಜಪ್ತಿ ಮಾಡಿಕೊಂಡು ಪರೋಕ್ಷ ವಾಗಿ ಮರಳು ಸಂಗ್ರಹಕ್ಕೆ ಸಹಕರಿಸುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೇರನಾಳ ಗ್ರಾಮಸ್ಥ ಬಸವರಾಜ ಒತ್ತಾಯಿಸಿದ್ದಾರೆ.
------

ಇಷ್ಟು ದಿನ ಎಲೆಕ್ಷ ನ್‌ ಡ್ಯೂಟಿಯಲ್ಲಿದ್ದರಿಂದ ಈ ಬಗ್ಗೆ ಗಮನ ನೀಡಿಲ್ಲ. ಸದ್ಯ ಗ್ರಾಮ ಲೆಕ್ಕಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸುತ್ತೇನೆ. ಮುಂದಿನ ದಿನಗಳಲ್ಲಿ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ. ದಾಖಲಾತಿಗಳಿಲ್ಲದಿದ್ದರೆ ಮರಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.

-ಮಂಜುನಾಥ ಕಂದಾಯ ನೀರಿಕ್ಷ ಕರು ಗುಡದೂರು ಹೋಬಳಿ.

----
ಉಸುಕಿನ ರಾಯಲ್ಟಿ ಕಟ್ಟಿದ ಚೀಟಿ ಸಧ್ಯ ನಮ್ಮ ನಮ್‌ ಕಡೆ ಇಲ್ಲ. ಉಸುಕು ಹಾಕಿದವರ ಕಡೆ ಇವೆ. ಆಮೇಲೆ ತಂದು ಕೋಡುತ್ತೇವೆಂದು ಹೇಳಿದ್ದಾರೆ.

-ಅಜ್ಮೀರ್‌, ಸೇತುವೆ ಕಾಮಗಾರಿ ನಿರ್ವಹಣೆ ಮಾಡುವವರು.



ಆರ್‌ಸಿಎಚ್‌25ಎಂಎಸ್‌ಕೆ01

ಮಸ್ಕಿ ಪಟ್ಟಣದ ಸಮೀಪದ ತುಂಗಾಭದ್ರ ಎಡದಂಡೆ ಮುಖ್ಯ ನಾಲೆಯ 54ನೇ ಉಪ ಕಾಲುವೆ ಬಳಿ ಅಕ್ರಮವಾಗಿ ಮರಳು ಸಂಗ್ರಹಿಸಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ