ಆ್ಯಪ್ನಗರ

'ಅನ್ನಭಾಗ್ಯ' ಅಕ್ಕಿ ಅಕ್ರಮ ಸಂಗ್ರಹ ಪತ್ತೆ

ರಾಯಚೂರು ನಗರದ ಗದ್ವಾಲ ರಸ್ತೆಯಲ್ಲಿಯ ರೈಸ್ ಮಿಲ್‌ನಲ್ಲಿ ಸಂಗ್ರಹಿಸಿದ್ದ ಅನ್ನಭಾಗ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಭಂಗಿ ನರಸರಡ್ಡಿ ಎಂಬುವವರಿಗೆ ಸೇರಿದ ರೈಸ್‌ ಮಿಸ್‌ ಮೇಲೆ ದಾಳಿ ನಡೆದಿದ್ದು, ಈ ಸಂಬಂಧ ಕೇಸ್ ದಾಖಲಾಗಿದೆ.

Vijaya Karnataka Web 11 Sep 2018, 1:09 pm
ರಾಯಚೂರು: ನಗರದ ಗದ್ವಾಲ ರಸ್ತೆಯಲ್ಲಿಯ ರೈಸ್ ಮಿಲ್‌ನಲ್ಲಿ ಸಂಗ್ರಹಿಸಿದ್ದ ಅನ್ನಭಾಗ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಭಂಗಿ ನರಸರಡ್ಡಿ ಎಂಬುವವರಿಗೆ ಸೇರಿದ ರೈಸ್‌ ಮಿಸ್‌ ಮೇಲೆ ದಾಳಿ ನಡೆದಿದ್ದು, ಈ ಸಂಬಂಧ ಕೇಸ್ ದಾಖಲಾಗಿದೆ.
Vijaya Karnataka Web anna bhagya rice


ನರಸಿಂಹ ರೈಸ್ ಮಿಲ್‌ನಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಈ ಕುರಿತು ಮಾಹಿತಿ ತಿಳಿದುಬಂದ ಬಳಿಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಭಾರಿ ಉಪನಿರ್ದೇಶಕ ಎನ್. ಅಮರಣ್ಣ ಹಾಗೂ ಇನ್ಸ್‌ಪೆಕ್ಟರ್ ವೆಂಕಣ್ಣ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ಸುಮಾರು 650 ಬ್ಯಾಗ್ ಅಕ್ಕಿಯನ್ನು ಸಹ ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಕುರಿತು ರಾಯಚೂರಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ