ಆ್ಯಪ್ನಗರ

ಮುಂಗಾರು ಆಶಾಭಾವ, ಕೃಷಿ ಚಟುವಟಿಕೆ ಚುರುಕು

ರಣಬಿಸಿಲಿನ ಮಧ್ಯೆ ಆಗಾಗ ಮೋಡ ಕವಿದ ವಾತಾವರಣ. ಗುಡುಗು, ಸಿಡಿಲಿನ ಅಬ್ಬರದ ನಡುವೆ ಬರುವ ಅಲ್ಪಸ್ವಲ್ಪ ಮಳೆ ಆಶಾಭಾವ ಮೂಡಿಸಿದ್ದು, ಕೃಷಿಕರು ಜಮೀನುಗಳಲ್ಲಿನ ಕಸ ಕಡ್ಡಿ ತೆಗೆದು ಜಮೀನು ಹದಗೊಳಿಸುವ ಚಟುವಟಿಕೆ ಆರಂಭಿಸಿದ್ದಾರೆ.

Vijaya Karnataka 29 May 2019, 5:00 am
ಹಟ್ಟಿಚಿನ್ನದಗಣಿ : ರಣಬಿಸಿಲಿನ ಮಧ್ಯೆ ಆಗಾಗ ಮೋಡ ಕವಿದ ವಾತಾವರಣ. ಗುಡುಗು, ಸಿಡಿಲಿನ ಅಬ್ಬರದ ನಡುವೆ ಬರುವ ಅಲ್ಪಸ್ವಲ್ಪ ಮಳೆ ಆಶಾಭಾವ ಮೂಡಿಸಿದ್ದು, ಕೃಷಿಕರು ಜಮೀನುಗಳಲ್ಲಿನ ಕಸ ಕಡ್ಡಿ ತೆಗೆದು ಜಮೀನು ಹದಗೊಳಿಸುವ ಚಟುವಟಿಕೆ ಆರಂಭಿಸಿದ್ದಾರೆ.
Vijaya Karnataka Web RAC-RCH27HGM P1


ಭೀಕರ ಬರದಿಂದ ತತ್ತರಿಸಿರುವ ರೈತರು ಮತ್ತೆ ಕೃಷಿಯತ್ತ ಮುಖ ಮಾಡಿದ್ದಾರೆ. ಸ್ಥಳೀಯ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ವೀರಾಪುರ, ನಿಲೋಗಲ್‌, ಗೆಜ್ಜಲಗಟ್ಟಾ, ಹಿರೇನಗನೂರು, ಅನ್ವರಿ, ರೋಡಲಬಂಡಾ(ತ), ಯಲಗಟ್ಟಾ, ಮಾಚನೂರು, ಗೌಡೂರು, ಮೇದಿನಾಪುರ ಮೊದಲಾದ ಗ್ರಾಮಗಳಲ್ಲಿ ಮಳೆಯಾಶ್ರಿತ ಬೆಳೆ ಹಾಕಲಾಗುತ್ತದೆ.

ಮಳೆ ಮೇಲೆ ಭರವಸೆ: ಮುಂಗಾರು ಮಳೆ ಆರಂಭದ ಪೂರ್ವದಲ್ಲಿ ರೈತರು ಭೂಮಿಯಲ್ಲಿ ಬೆಳೆದು ನಿಂತ ಗಿಡಗಂಟಿ ಕಡಿದು, ರಂಟೆ-ಕುಂಟೆ ಹೊಡೆದು ಭೂಮಿ ಹದ ಮಾಡಿಕೊಳ್ಳುವುದು ವಾಡಿಕೆ. ಇದೀಗ ಹೊಲಗಳನ್ನು ಸ್ವಚ್ಛಗೊಳಿಸುವತ್ತ ರೈತರು ಗಮನಹರಿಸಿದ್ದಾರೆ. ಕಸ ಕಡ್ಡಿ ಆಯ್ದು ಅದನ್ನು ಸುಟ್ಟು, ತಿಪ್ಪೆಗೊಬ್ಬರ ಹಾಕಿ ಜಮೀನು ಹದಗೊಳಿಸುತ್ತಿದ್ದಾರೆ. ಮುಂಗಾರು ಮಳೆ ಉತ್ತಮವಾಗಿ ಸುರಿದರೆ, ಬಿತ್ತನೆಗೆ ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ರೈತರದ್ದು.

ವಾಣಿಜ್ಯ ಬೆಳೆಗೆ ಆದ್ಯತೆ : ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾದರೆ, ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಎಳ್ಳು, ಸಜ್ಜೆ, ಸೂರ್ಯಪಾನ ಹಾಕಲಾಗುತ್ತದೆ. ಕಳೆದ ಎರಡು ವರ್ಷದಲ್ಲಿ ಮುಂಗಾರು ಮಳೆ ಆರಂಭದಲ್ಲಿ ಭಾರಿ ಭರವಸೆ ಹುಟ್ಟಿಸಿದ್ದರಿಂದ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿಯತ್ತ ರೈತರು ಒಲವು ತೋರಿದ್ದರು. ಮುಂದೆ ಮಳೆ ಬಾರದಿದ್ದರಿಂದ ರೈತರು ಸಂಕಷ್ಟ ಅನುಭವಿಸಬೇಕಾಯಿತು. ಪ್ರಸಕ್ತ ವರ್ಷ ನಿಗದಿತ ಸಮಯಕ್ಕೆ ಮಳೆ ಬಂದರೆ, ತೊಗರಿ ಹಾಗೂ ಹತ್ತಿ ಹಾಕಲು ರೈತರು ಸಿದ್ಧರಾಗುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ