ಆ್ಯಪ್ನಗರ

ಪ್ರವಾಹ ಹೆಚ್ಚಳ, ಜಮೀನಿಗೆ ನುಗ್ಗಿದ ನೀರು

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 3.11 ಲಕ್ಷ ಕ್ಯೂಸೆಕ್‌ ಅಧಿಕ ನೀರು ಹರಿಬಿಟ್ಟಿರುವುದರಿಂದ ಗೂಗಲ್‌ ಗ್ರಾಮದ ಅಲ್ಲಮ ಪ್ರಭುಲಿಂಗೇಶ್ವರ ದೇವಸ್ಥಾನದ ಸುತ್ತ ನೀರು ಸುತ್ತುವರಿದಿದೆ.

Vijaya Karnataka 25 Oct 2019, 2:48 pm
ಗಬ್ಬೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 3.11 ಲಕ್ಷ ಕ್ಯೂಸೆಕ್‌ ಅಧಿಕ ನೀರು ಹರಿಬಿಟ್ಟಿರುವುದರಿಂದ ಗೂಗಲ್‌ ಗ್ರಾಮದ ಅಲ್ಲಮ ಪ್ರಭುಲಿಂಗೇಶ್ವರ ದೇವಸ್ಥಾನದ ಸುತ್ತ ನೀರು ಸುತ್ತುವರಿದಿದೆ.
Vijaya Karnataka Web increased flooding water rushing to the farm
ಪ್ರವಾಹ ಹೆಚ್ಚಳ, ಜಮೀನಿಗೆ ನುಗ್ಗಿದ ನೀರು


ದೇವಸ್ಥಾನದ ಹಾಗೂ ಹತ್ತಿರವಿರುವ ಹೋಟೆಲ್‌ಗಳಿಗೆ ನೀರು ನುಗ್ಗಿದೆ. ಬೆಳಗಾವಿ, ಬಾಗಲಕೋಟ ಜಿಲ್ಲೆಯಲ್ಲಿಅಧಿಕ ಪ್ರಮಾಣದ ಮಳೆಯಾಗುತ್ತಿರುವುದರಿಂದ ಇಂದು ರಾತ್ರಿ 4 ಲಕ್ಷ ಕ್ಯೂಸೆಕ್‌ ಅಧಿಕ ಪ್ರಮಾಣದ ನೀರು ಹರಿಸಲಾಗುವುದು ಎಂದು ಜಲಾಶಯ ಅಧಿಕಾರಿಗಳು ತಿಳಿಸಿದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಮಿಲಿಟರಿ ಸೇನೆ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ, ನದಿದಂಡೆಯ ಗ್ರಾಮಗಳಲ್ಲಿಮುಜಾಗ್ರತೆ ಕ್ರಮವಾಗಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.

ನುಗ್ಗಿದ ನೀರು : ಕೃಷ್ಣಾ ನದಿ ಸಮೀಪದ ಹಿರೇರಾಯಕುಂಪಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿ ಭತ್ತ ಮತ್ತು ಹತ್ತಿ ಬೆಳೆ ನಾಶವಾಗಿದೆ. ಇಂದು ಸಹ ಹೆಚ್ಚಿನ ಪ್ರಮಾಣ ನೀರು ಹರಿಸುತ್ತಿರುವ ಹಿನ್ನೆಲೆ ನದಿ ದಂಡೆಯ ಜಮೀನುಗಳಿಗೆ ನೀರು ಬರುವ ಸಾಧ್ಯತೆ ಇದ್ದು, ನದಿ ಸಮೀಪ ತೆರಳದಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ