ಆ್ಯಪ್ನಗರ

ಮೂಲಭೂತ ಸೌಕರ್ಯ

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ತಹಸಿಲ್‌ ಕಚೇರಿ ಎದುರು ಧರಣಿ ನಡೆಸಲಾಯಿತು.

Vijaya Karnataka 29 Aug 2019, 5:00 am
ಸಿಂಧನೂರು: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ತಹಸಿಲ್‌ ಕಚೇರಿ ಎದುರು ಧರಣಿ ನಡೆಸಲಾಯಿತು.
Vijaya Karnataka Web news/raichur/infrastructure
ಮೂಲಭೂತ ಸೌಕರ್ಯ


ಸರಕಾರಿ ಆಸ್ಪತ್ರೆಯಲ್ಲಿರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ತುರ್ತು ನಿಗಾಘಟಕವನ್ನು ಆರಂಭಿಸುವುದು. ಆಸ್ಪತ್ರೆಗಳಲ್ಲಿರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿತಾರತಮ್ಯ ಧೋರಣೆ ಆಗದಂತೆ ಎಚ್ಚರವಹಿಸುವುದು. ಕುಡಿವ ನೀರು, ವಿದ್ಯುತ್‌, ಜನರೇಟರ್‌ ಸಮಸ್ಯೆಯಾಗದಂತೆ ಹೆಚ್ಚಿನ ನಿಗಾವಹಿಸಬೇಕು. ಖಾಸಗಿ ಮೆಡಿಕಲ್‌ಗಳಲ್ಲಿಔಷಧಿಧಗಳನ್ನು ತರುವಂತೆ ಚೀಟಿ ಬರೆದುಕೊಡುವುದನ್ನು ನಿಲ್ಲಿಸಬೇಕು. ಆಸ್ಪತ್ರೆಯಲ್ಲಿಶುಶ್ರೂಷಕಿಯರು ಮತ್ತು ಇನ್ನಿತರ ಸಿಬ್ಬಂದಿಗಳ ಕೊರತೆ ಇದ್ದರೆ ತಕ್ಷಣ ಸರಿಪಡಿಸಿಕೊಳ್ಳಬೇಕು. ಆಸ್ಪತ್ರೆ ಒಳಗಡೆ ಮತ್ತು ಹೊರಗಡೆ ಸ್ವಚ್ಛತೆಗೆ ಒತ್ತು ನೀಡಬೇಕು. ಒಳರೋಗಿಗಳಿಗೆ ಮಲಗುವ ಹಾಸಿಗೆಯನ್ನು ದಿನನಿತ್ಯ ಬದಲಾವಣೆ ಮಾಡಬೇಕು. ಜನೌಷಧ ಕೇಂದ್ರಗಳಲ್ಲಿಖಾಸಗಿ ಮೆಡಿಸಿನ್‌ಗಳನ್ನು ಮಾರಾಟ ಮಾಡುವ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸೇರಿ ಹಲವು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.

ಸಂಘದ ವಿಭಾಗೀಯ ಅಧ್ಯಕ್ಷ ಮರಿಸ್ವಾಮಿ ತುರುವಿಹಾಳ, ಜಿಲ್ಲಾಗೌರವಾಧ್ಯಕ್ಷ ಬಸವರಾಜ ಕಂದಗಲ್‌, ವಿಭಾಗೀಯ ಉಪಾಧ್ಯಕ್ಷ ಕಂಠೆಪ್ಪ ರೈತನಗರಕ್ಯಾಂಪ್‌, ಜಿಲ್ಲಾಉಪಾಧ್ಯಕ್ಷ ಬಸವರಾಜ ಬುಕ್ಕನಹಟ್ಟಿ, ತಾಲೂಕ ಅಧ್ಯಕ್ಷ ಚಿಕ್ಕೊರೆಪ್ಪ ತುರುವಿಹಾಳ, ನಾಗರಾಜ ಗೋಮರ್ಸಿ, ಮಹಾದೇವಪ್ಪ ಗಿಣಿವಾರ ಸೇರಿ ಹಲವರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ