ಆ್ಯಪ್ನಗರ

ಬಸ್‌ ತಂಗುದಾಣ ನಿರ್ಮಾಣಕ್ಕೆ ಒತ್ತಾಯ

ನಗರದ ಗಂಗಾವತಿ ರಸ್ತೆಯ ತುಂಗಭದ್ರಾ ಎಡದಂಡೆ ಕಾಲುವೆ ಹತ್ತಿರ ಹುತಾತ್ಮ ಯೋಧ ಏರ್‌ ಮಾರ್ಷಲ್‌ ಕೆ.ನರೇಶ ಅವರ ಸ್ಮರಣಾರ್ಥ ನಿರ್ಮಿಸಿದ್ದ ಬಸ್‌ ತಂಗುದಾಣವನ್ನು ಈ ಹಿಂದೆ ನೆಲಸಮಗೊಳಿಸಿದ್ದು, ಮರು ನಿರ್ಮಾಣ ಮಾಡಬೇಕು. ಜತೆಗೆ, ಬಸ್‌ ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘದಿಂದ ಸೋಮವಾರ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 18 Feb 2020, 3:25 pm
ಸಿಂಧನೂರು: ನಗರದ ಗಂಗಾವತಿ ರಸ್ತೆಯ ತುಂಗಭದ್ರಾ ಎಡದಂಡೆ ಕಾಲುವೆ ಹತ್ತಿರ ಹುತಾತ್ಮ ಯೋಧ ಏರ್‌ ಮಾರ್ಷಲ್‌ ಕೆ.ನರೇಶ ಅವರ ಸ್ಮರಣಾರ್ಥ ನಿರ್ಮಿಸಿದ್ದ ಬಸ್‌ ತಂಗುದಾಣವನ್ನು ಈ ಹಿಂದೆ ನೆಲಸಮಗೊಳಿಸಿದ್ದು, ಮರು ನಿರ್ಮಾಣ ಮಾಡಬೇಕು. ಜತೆಗೆ, ಬಸ್‌ ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘದಿಂದ ಸೋಮವಾರ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web insist on construction of bus stand
ಬಸ್‌ ತಂಗುದಾಣ ನಿರ್ಮಾಣಕ್ಕೆ ಒತ್ತಾಯ


ರಾಮಕಿಶೋರ ಕಾಲೊನಿ ವ್ಯಾಪ್ತಿಯಲ್ಲಿ1990ರಲ್ಲಿಬಸ್‌ ತಂಗುದಾಣ ನಿರ್ಮಿಸಲಾಗಿತ್ತು. ಸಿಂಧನೂರಿನಿಂದ ಗಂಗಾವತಿವರೆಗಿನ ಟೋಲ್‌ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿಗುತ್ತಿಗೆದಾರರು ಬಸ್‌ ತಂಗುದಾಣವನ್ನು ನೆಲಸಮಗೊಳಿಸಿದ್ದಾರೆ. ಆದರೆ, ಮರು ನಿರ್ಮಾಣಕ್ಕೆ ಅವರು ಮುಂದಾಗಿಲ್ಲ. ಕಂಪನಿಯವರು ಕಾನೂನುಬಾಹಿರವಾಗಿ ಬಸ್‌ ತಂಗುದಾಣ ಬೀಳಿಸಿದ್ದು, ಕೂಡಲೇ ಅದನ್ನು ಮರು ನಿರ್ಮಾಣ ಮಾಡಬೇಕು. ಬಸ್‌ ತಂಗುದಾಣದಿಂದ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಹಾಗೆಯೇ ಈ ಮೊದಲು ಬಸ್‌ ತಂಗುದಾಣ ಇದ್ದ ಸ್ಥಳದಲ್ಲಿಯೇ ಬಸ್‌ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ಸಂಘದ ಅಧ್ಯಕ್ಷ ಓಂಕಾರ ಜಿ.ಎಂ., ಮಾಜಿ ಯೋಧ ಜೆ.ಸಿ.ಪೂಜಾರ್‌, ರಘು, ವಿನಯಕುಮಾರ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ