ಆ್ಯಪ್ನಗರ

ತಡೆಗೋಡೆ ನೆಲಸಮಗೊಳಿಸಲು ಒತ್ತಾಯ

ನಗರದ ಒಪೆಕ್‌ ಆಸ್ಪತ್ರೆ ಬಳಿ ನಿರ್ಮಿಸಲಾಗಿರುವ ತಡೆಗೋಡೆಯನ್ನು ನೆಲಸಮಗೊಳಿಸಬೇಕೆಂದು ಒತ್ತಾಯಿಸಿ ಎಲ್‌ಬಿಎಸ್‌ ನಗರದ ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Vijaya Karnataka 10 Jul 2019, 3:10 pm
ರಾಯಚೂರು : ನಗರದ ಒಪೆಕ್‌ ಆಸ್ಪತ್ರೆ ಬಳಿ ನಿರ್ಮಿಸಲಾಗಿರುವ ತಡೆಗೋಡೆಯನ್ನು ನೆಲಸಮಗೊಳಿಸಬೇಕೆಂದು ಒತ್ತಾಯಿಸಿ ಎಲ್‌ಬಿಎಸ್‌ ನಗರದ ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
Vijaya Karnataka Web insist on leveling the barrier
ತಡೆಗೋಡೆ ನೆಲಸಮಗೊಳಿಸಲು ಒತ್ತಾಯ


ಎಲ್‌ಬಿಎಸ್‌ ನಗರನಿವಾಸಿಗಳ ಮಕ್ಕಳು ಶಾಲೆಗಳಿಗೆ ಒಪೆಕ್‌ ಆಸ್ಪತ್ರೆ, ವಸತಿ ಗೃಹಗಳಿಂದಲೇ ತೆರಳುತ್ತಾರೆ. ಆದರೆ ತಡೆಗೋಡೆ ನಿರ್ಮಿಸಿರುವ ಹಿನ್ನೆಲೆ ನಡೆದಾಡಲು ತೊಂದರೆಯಾಗುತ್ತಿದೆ. ಸಂಚರಿಸಲು ಮಕ್ಕಳು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ತಡೆಗೋಡೆ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಜತೆಗೆ ಎಲ್‌ಬಿಎಸ್‌ ನಗರದಲ್ಲಿ ಕಳೆದ 20ವರ್ಷಗಳಿಂದ ವಾಸಿಸುತ್ತಿದ್ದರೂ ಮನೆಗಳಿಗೆ ಹಕ್ಕು ಪತ್ರ ವಿತರಿಸಿಲ್ಲ. ಬಡಾವಣೆಯಲ್ಲಿ ಅಗತ್ಯ ಮೂಲಭೂ ಸೌಕರ್ಯ ಕಲ್ಪಿಸದೇ ನಿರ್ಲಕ್ಷ ್ಯವಹಿಸಲಾಗುತ್ತಿದ್ದು, ಅಸ್ವಚ್ಛತೆ ತಾಂಡವವಾಡುತ್ತಿದೆ. ವಸತಿ ಗೃಹದ ಬಳಿ ಬೃಹತ್‌ ಗೋದಾಮುಗಳಿರುವ ಹಿನ್ನೆಲೆಯಲ್ಲಿ ಸೊಳ್ಳೆ ಹಾಗೂ ಕೀಟಗಳ ಹಾವಳಿ ಮಿತಿಮೀರಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ನಿವಾಸಿಗಳು ಡಿಸಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಎಲ್‌ಬಿಎಸ್‌ ನಗರದ ನಿವಾಸಿಗಳಾದ ಲಕ್ಷ್ಮೀದೇವಿ, ಕೆ.ರೇಣುಕಾ, ಭಾಗ್ಯಮ್ಮ, ಸರಸ್ವತಿ, ಗೌರಮ್ಮ, ಪದ್ದಮ್ಮ, ಪಾರ್ವತಿ, ಸೀತಮ್ಮ, ಅಂಬಮ್ಮ ಸೇರಿ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ