ಆ್ಯಪ್ನಗರ

ಅಂತಾರಾಜ್ಯ ಕಳ್ಳತನ ಬಂಧನ

ರಾಯಚೂರು ಜಿಲ್ಲಾದ್ಯಂತ ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಮಾನ್ವಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Vijaya Karnataka 3 Nov 2018, 12:00 am
ಮಾನ್ವಿ: ರಾಯಚೂರು ಜಿಲ್ಲಾದ್ಯಂತ ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಮಾನ್ವಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Vijaya Karnataka Web RAC-RCH02MNV3


ಕಳ್ಳತನ ಬಂಧನದ ಕುರಿತು ಸಿಪಿಐ ಚಂದ್ರಶೇಖರ ನಾಯಕ ಮಾಹಿತಿ ಒದಗಿಸಿದರು. ಮಹಾರಾಷ್ಟ್ರದ ರಾಜ್ಯದ ಸಾಂಗ್ಲಿ ಜಿಲ್ಲೆಯ ಕಿರಣ(24) ತಂ.ದಯಾನಂದ ಕಾಳೆ ಬಂಧಿತ. ಮಾನ್ವಿ ಪಟ್ಟಣ ಸೇರಿದಂತೆ ಸಿರವಾರ, ಸಿಂಧನೂರು, ರಾಯಚೂರು ಪೊಲೀಸ್ ಠಾಣೆ ವ್ಯಾಪ್ತಿಯ 5 ಮನೆಗಳಲ್ಲಿ ಕಳ್ಳತನವಾಗಿತ್ತು. ಈ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ.್ದ ಬಂಧಿತನಿಂದ 6.70 ಲಕ್ಷ ರೂ.ಮೌಲ್ಯದ 21 ತೊಲ ಬಂಗಾರ, 20 ತೊಲ ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ ಎಂದರು. ಪಿಎಸ್‌ಐ ರಂಗಪ್ಪ ದೊಡ್ಡಮನಿ, ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ, ಹುಸೇನ್ ಬಾಷಾ, ಪ್ರಕಾಶ, ಅಫ್ಜಲ್ ಸಾಬ್, ಬಸವನಗೌಡ, ರೆಹಮಾನ್, ರಾಮಕಷ್ಣ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ