ಆ್ಯಪ್ನಗರ

18ನೇ ದಿನ ಪೂರೈಸಿದ ನೀರಾವರಿ ಹಂಗಾಮಿ ಕಾರ್ಮಿಕರ ಧರಣಿ

738 ಕಾರ್ಮಿಕರನ್ನು ಬೀದಿಪಾಲು ಮಾಡುವ ಹೊರಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹಿಸಿ, ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು, ನಡೆಸುತ್ತಿರುವ ಧರಣಿ ಬುಧವಾರ 18 ದಿನ ಪೂರೈಸಿದ್ದು, ಆಕ್ರೋಶಗೊಂಡ ಪ್ರತಿಭಟನಾಕಾರರು, ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಿಂದ ಯರಮರಸ್‌ನಲ್ಲಿನ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

Vijaya Karnataka 26 Jul 2018, 5:00 am
ರಾಯಚೂರು : 738 ಕಾರ್ಮಿಕರನ್ನು ಬೀದಿಪಾಲು ಮಾಡುವ ಹೊರಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹಿಸಿ, ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು, ನಡೆಸುತ್ತಿರುವ ಧರಣಿ ಬುಧವಾರ 18 ದಿನ ಪೂರೈಸಿದ್ದು, ಆಕ್ರೋಶಗೊಂಡ ಪ್ರತಿಭಟನಾಕಾರರು, ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಿಂದ ಯರಮರಸ್‌ನಲ್ಲಿನ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
Vijaya Karnataka Web RAC-RCH25HD04


ಈ ಕಾರ್ಮಿಕರು, ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ನೀರಾವರಿ ಕಚೇರಿಯವರೆಗೆ ಕಾಲ್ನಡಿಗೆ ಮೂಲಕ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿದರು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಮಿಕರನ್ನು ಪೊಲೀಸ್‌ ಸಿಬ್ಬಂದಿ ತಡೆಯುವಾಗ ನೂಕುನುಗ್ಗಲು ಉಂಟಾಯಿತು. ಪ್ರತಿಭಟನಾನಿರತರು, ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

''ಕಳೆದ ಇಪ್ಪತ್ತೈದು ವರ್ಷಗಳಿಂದ ತುಂಗಭದ್ರಾ ಎಡದಂಡೆ ನಾಲೆ ನಿರ್ವಹಣೆ ಮಾಡುತ್ತಿರುವ ಯರಮರಸ್‌, ಸಿಂಧನೂರು ಹಾಗೂ ಸಿರವಾರ ವಿಭಾಗದ 738 ಕಾರ್ಮಿಕರನ್ನು ಬೀದಿಗೆ ತಳ್ಳಲು, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ. ಭಾರಿ ನೀರಾವರಿಯಂತಹ ಕಾಯಂ ಸ್ವರೂಪದ ಕೆಲಸವಿದ್ದ ಕಡೆ ಗುತ್ತಿಗೆ ಪದ್ಧತಿಯನ್ನು ಅನ್ವಯಿಸಬಾರದು ಎಂಬ ಕಾನೂನನ್ನು ಅಧಿಕಾರಿಗಳು ಉಲ್ಲಂಘಿಸಿ ಗುತ್ತಿಗೆ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಕಾರ್ಮಿಕರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ಪರಿಗಣಿಸಿ, ಅವರ ಸೇವೆಯನ್ನು ಕಾಯಂಗೊಳಿಸಬೇಕು. ಬಾಕಿ ಕಾರ್ಮಿಕರ ವೇತನ ಪಾವತಿಗೆ ಕ್ರಮಕೈಗೊಳ್ಳಬೇಕು. ಕಳೆದ 15 ವರ್ಷಗಳ ಭವಿಷ್ಯನಿಧಿಯನ್ನು ಕೂಡಲೇ ಪಾವತಿಸಬೇಕು. ಕಾರ್ಮಿಕರ ಸೇವಾ ಹಿರಿತನ, ಉದ್ಯೋಗ ಭದ್ರತೆ ಕಾಪಾಡಬೇಕು'' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ, ಪದಾಧಿಕಾರಿಗಳಾದ ಸಿದ್ದಪ್ಪಗೌಡ, ಕಮಾರ ಪವಾಡರೆಡ್ಡಿ, ರಾಮಣ್ಣ, ಖಾಜಾಸಾಬ್‌, ಬಸನಗೌಡ, ಅಮರೇಗೌಡ, ಈರಣ್ಣ, ಭೀಮರೆಡ್ಡಿ, ವೆಂಕಟೇಶ, ಶಿವರಾಜ, ಬಸವರಾಜ, ಬೀರಪ್ಪ ಸೇರಿ ಹಲವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ