ಆ್ಯಪ್ನಗರ

ನಕಲಿ ವರ್ಗಾವಣೆ ಪತ್ರ ನೀಡಿಕೆ, ಮುಖ್ಯಗುರು ಅಮಾನತು

ನಕಲಿ ವರ್ಗಾವಣೆ ಪ್ರಮಾಣಪತ್ರ ನೀಡಿರುವ ಹಿನ್ನ್ನೆಲೆಯಲ್ಲಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸಯ್ಯ ಅವರನ್ನು ಲಿಂಗಸುಗೂರು ಬಿಇಒ ಅಶೋಕ ಸಿಂದಗಿ ಅವರು ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.

Vijaya Karnataka 12 Jul 2019, 2:36 pm
ನಾಗರಹಾಳ : ನಕಲಿ ವರ್ಗಾವಣೆ ಪ್ರಮಾಣಪತ್ರ ನೀಡಿರುವ ಹಿನ್ನ್ನೆಲೆಯಲ್ಲಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸಯ್ಯ ಅವರನ್ನು ಲಿಂಗಸುಗೂರು ಬಿಇಒ ಅಶೋಕ ಸಿಂದಗಿ ಅವರು ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.
Vijaya Karnataka Web issue fake transfer deed suspension of chief
ನಕಲಿ ವರ್ಗಾವಣೆ ಪತ್ರ ನೀಡಿಕೆ, ಮುಖ್ಯಗುರು ಅಮಾನತು


ನಾಲ್ಕನೇ ತರಗತಿ ಪಾಸಾಗಿದ್ದ ಗ್ರಾಮದ ರೇಣುಕಾ ಲೋಕಪ್ಪ ಎಂಬುವವರಿಗೆ ಅಂಗನವಾಡಿ ಸಹಾಯಕಿ ಹುದ್ದೆಗಾಗಿ 5 ನೇ ತರಗತಿ ತೇರ್ಗಡೆ ವರ್ಗಾವಣೆ ಪತ್ರ ಬೇಕಾಗಿತ್ತು. ಇವರಿಗೆ, ಮುಖ್ಯಗುರು ಬಸಯ್ಯ 5ನೇ ತರಗತಿ ತೇರ್ಗಡೆ ಹೊಂದಿದ್ದಾರೆ ಎಂದು ನಕಲಿ ವರ್ಗಾವಣೆ ಪ್ರಮಾಣಪತ್ರ ನೀಡಿದ್ದರು. ಇದರ ಆಧಾರದ ಮೇಲೆ ಅಂಗನವಾಡಿ ಸಹಾಯಕಿ ಹುದ್ದೆಗೆ ರೇಣುಕಾ ಅವರು ಆಯ್ಕೆಯಾಗಿದ್ದು, ಗ್ರಾಮಸ್ಥರು ಬಿಇಒ ಅವರಿಗೆ ದೂರು ನೀಡಿದ್ದರು. ದೂರನ್ನಾಧರಿಸಿದ ಲಿಂಗಸುಗೂರು ಬಿಇಒ ಅಶೋಕ ಸಿಂದಗಿ ಮುಖ್ಯಗುರು ಬಸಯ್ಯ ಅವರನ್ನು ಅಮಾನತು ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ