ಲಿಂಗಸುಗೂರು : ತಾಲೂಕಿನ ಸುಕ್ಷೇತ್ರ ಅಮರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ ನಿಮಿತ್ತ ಬುಧವಾರ ರಾತ್ರಿ, ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಅಮರೇಶ್ವರ ಲಿಂಗಕ್ಕೆ ರುದ್ರಾಭಿಷೇಕ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಂಜೆ ಅಮರೇಶ್ವರ ಅಭಿನವ ಗುರುಗಜದಂಡ ಶ್ರೀಗಳ ನೇತೃತ್ವದಲ್ಲಿ ಗುರು ಮಳೆಸ್ವಾಮಿ ಕತೃಗದ್ದುಗೆ ಪ್ರದಕ್ಷಿಣೆ, ಬಳಿಕ ಪುರವಂತಿಗೆಯೊಂದಿಗೆ ವೀಳ್ಯದೆಲೆ ಚಟ್ಟು ಮೆರವಣಿಗೆ ಸಮೇತ ಆಗಮಿಸಿ ಅಮರೇಶ್ವರ ದೇವರಿಗೆ ಸಮರ್ಪಿಸಲಾಯಿತು.
ನಂತರ ರಾತ್ರಿ ಆಕಾಶ (ಬುಟ್ಟಿ) ದೀಪ ಬಿಡಲಾಯಿತು. ಕಾರ್ತಿಕ ದೀಪೋತ್ಸವ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಹಣತೆಯಿಂದ ದೀಪ ಹಚ್ಚಲಾಗಿತ್ತು. ಅದರಲ್ಲಿ ಭಕ್ತರೊಬ್ಬರು 'ಟೀಮ್ ಮೋದಿ' ಎಂದು ದೀಪಗಳಲ್ಲಿ ಬರೆದ ಅಕ್ಷ ರಗಳು ಗಮನ ಸೆಳೆದವು.
ಅಮರೇಶ್ವರ ಲಿಂಗಕ್ಕೆ ರುದ್ರಾಭಿಷೇಕ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಂಜೆ ಅಮರೇಶ್ವರ ಅಭಿನವ ಗುರುಗಜದಂಡ ಶ್ರೀಗಳ ನೇತೃತ್ವದಲ್ಲಿ ಗುರು ಮಳೆಸ್ವಾಮಿ ಕತೃಗದ್ದುಗೆ ಪ್ರದಕ್ಷಿಣೆ, ಬಳಿಕ ಪುರವಂತಿಗೆಯೊಂದಿಗೆ ವೀಳ್ಯದೆಲೆ ಚಟ್ಟು ಮೆರವಣಿಗೆ ಸಮೇತ ಆಗಮಿಸಿ ಅಮರೇಶ್ವರ ದೇವರಿಗೆ ಸಮರ್ಪಿಸಲಾಯಿತು.
ನಂತರ ರಾತ್ರಿ ಆಕಾಶ (ಬುಟ್ಟಿ) ದೀಪ ಬಿಡಲಾಯಿತು. ಕಾರ್ತಿಕ ದೀಪೋತ್ಸವ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಹಣತೆಯಿಂದ ದೀಪ ಹಚ್ಚಲಾಗಿತ್ತು. ಅದರಲ್ಲಿ ಭಕ್ತರೊಬ್ಬರು 'ಟೀಮ್ ಮೋದಿ' ಎಂದು ದೀಪಗಳಲ್ಲಿ ಬರೆದ ಅಕ್ಷ ರಗಳು ಗಮನ ಸೆಳೆದವು.