ಆ್ಯಪ್ನಗರ

ನಿಲೋಗಲ್‌ ಗ್ರಾಮಕ್ಕೆ ಕಾಶಿ ಶ್ರೀಗಳು ಭೇಟಿ

ಎಂಥದೇ ಕಷ್ಟ ಬಂದರೂ ರೈತರು ಧೃತಿಗೆಡದೇ ಎದುರಿಸುವ ಛಾತಿ ಹೊಂದಬೇಕೆಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

Vijaya Karnataka 22 Aug 2018, 5:00 am
ಹಟ್ಟಿಚಿನ್ನದಗಣಿ : ಎಂಥದೇ ಕಷ್ಟ ಬಂದರೂ ರೈತರು ಧೃತಿಗೆಡದೇ ಎದುರಿಸುವ ಛಾತಿ ಹೊಂದಬೇಕೆಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
Vijaya Karnataka Web RAC-RCH21HGM P1


ಸಮೀಪದ ನಿಲೋಗಲ್‌ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ 'ಜಗದ್ಗುರುಗಳ ನಡೆ ರೈತರ ಕಡೆ' ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ''ಒಂದು ವರ್ಷ ಬೆಳೆ ನಷ್ಟವಾದರೆ ಮತ್ತೊಂದು ವರ್ಷ ಬೆಳೆದು ಸಾಲ ತೀರಿಸುವೆವು ಎಂಬ ಧೈರ್ಯ ಮಾಡಬೇಕು. ಅದು ಬಿಟ್ಟು ಆತ್ಯಹತ್ಯೆಯಂಥ ಕೃತ್ಯಕ್ಕೆ ಯಾವ ರೈತರು ಇಳಿಯಬಾರದು. ಇದರಿಂದ ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ರೈತರು ಕಷ್ಟಕ್ಕೆ ಅಂಜಿ ಖಿನ್ನತೆಗೆ ಒಳಗಾಗಬಾರದು. ಕಾಶಿ ಪೀಠ ಸದಾ ರೈತರ ಪರವಾಗಿರಲಿದೆ'' ಎಂದು ಅಭಯ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ಜಗದ್ಗುರುಗಳನ್ನು ಗ್ರಾಮಸ್ಥರು ನಿಲೋಗಲ್‌ ಕ್ರಾಸ್‌ನಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಎತ್ತಿನ ಬಂಡಿಯಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಮಹಿಳೆಯರು ಕುಂಭ ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಮರೇಶ್ವರ ಗುರು ಅಭಿನವ ಗಜದಂಡ ಶ್ರೀಗಳು, ಮುಖಂಡರಾದ ಉಮಾಪತಿ ಶಿವರೆಡ್ಡಿ, ಶರಣಪ್ಪ ಹಾಲಾಪುರ, ವಿರೂಪಾಕ್ಷ ಹಾಲಾಪುರ, ಜಂಬಣ್ಣ ಮಂಚಾಲಿ, ರವೀಂದ್ರಸ್ವಾಮಿ ಸಾಲಿಮಠ, ಬಸವರಾಜ ಭೋವಿ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ