ಕವಿತಾಳ : ಪಟ್ಟಣದ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷ ಕರ ದಿನಾಚರಣೆ ಬುಧವಾರ ನಡೆಯಿತು. ಮುಖ್ಯಗುರು ಎಚ್.ಮಲ್ಲಪ್ಪ ಹಾಗೂ ಶಿಕ್ಷ ಕರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು. ನಾನಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಾಲಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನ್ಯಾಶಾಲೆ, ಅಂಬೇಡ್ಕರ್ ಶಾಲೆ, ನವಚೇತನ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಶಿಕ್ಷ ಕರಾದ ಶರಣಪ್ಪ, ಶಿವನಗೌಡ, ಹಮೀದ್, ಹನುಮಂತಪ್ಪ, ಜಿ.ಎಸ್.ಸುಂಕದ್, ಸಂತೋಷ, ಪ್ರಕಾಶ, ಶಾಲಿನಿ.ಕೆ, ಈರಮ್ಮ ಬರಗಿ, ಬಿ.ಎ.ಕರಿಂಸಾಬ್, ರಾಮಣ್ಣ, ಶಿವಕುಮಾರ ಮ್ಯಾಗಳಮನಿ, ಅಶೋಕ ಹಿರೇಮಠ, ಬಸವರಾಜ, ಇರ್ಫಾನ್, ವಿಜಯರಾಜ ಸೇರಿ ಇತರರು ಇದ್ದರು.
ಕವಿತಾಳ ಶಿಕ್ಷಕರ ದಿನಾಚರಣೆ
ಪಟ್ಟಣದ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷ ಕರ ದಿನಾಚರಣೆ ಬುಧವಾರ ನಡೆಯಿತು. ಮುಖ್ಯಗುರು ಎಚ್.ಮಲ್ಲಪ್ಪ ಹಾಗೂ ಶಿಕ್ಷ ಕರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು.
Vijaya Karnataka 6 Sep 2018, 5:00 am