ಆ್ಯಪ್ನಗರ

ಆರ್‌ಟಿಪಿಎಸ್‌ನಲ್ಲಿಬೆಲ್ಟ್‌ಗೆ ಸಿಲುಕಿ ಕಾರ್ಮಿಕ ಸಾವು

ಶಕ್ತಿನಗರದ ಆರ್‌ಟಿಪಿಎಸ್‌ನ ಕಲ್ಲಿದ್ದಲು ಸಾಗಣೆ ಘಟಕದಲ್ಲಿಗುರುವಾರ ತಡರಾತ್ರಿ ಬೆಲ್ಟ್‌ಗೆ ಸಿಲುಕಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

Vijaya Karnataka 16 Nov 2019, 3:11 pm
ರಾಯಚೂರು: ಶಕ್ತಿನಗರದ ಆರ್‌ಟಿಪಿಎಸ್‌ನ ಕಲ್ಲಿದ್ದಲು ಸಾಗಣೆ ಘಟಕದಲ್ಲಿಗುರುವಾರ ತಡರಾತ್ರಿ ಬೆಲ್ಟ್‌ಗೆ ಸಿಲುಕಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
Vijaya Karnataka Web labor deaths due to belt in rtps
ಆರ್‌ಟಿಪಿಎಸ್‌ನಲ್ಲಿಬೆಲ್ಟ್‌ಗೆ ಸಿಲುಕಿ ಕಾರ್ಮಿಕ ಸಾವು


ಒಡಿಶಾ ರಾಜ್ಯ ಅಂಗೋಲ ಜಿಲ್ಲೆಯ ಬನವಾಲ್‌ಪತ್‌ ಗ್ರಾಮದ ದೀಪಕ್‌ ನಾಯಕ (27) ಮೃತರು. ಈ ಕಾರ್ಮಿಕ, ಘಟಕಗಳಿಗೆ ಕಲ್ಲಿದ್ದಲು ಸಾಗಣೆಮಾಡುವ ಬೆಲ್ಟ್‌ ಬಳಿ ಕೆಲಸ ಮಾಡುತ್ತಿದ್ದರು. ಕಲ್ಲಿದ್ದಲಿನ ಜತೆಗೆ ಕಲ್ಲೊಂದು ಬೆಲ್ಟ್‌ ಮೇಲೆ ಯಂತ್ರದತ್ತ ಸಾಗುವುದನ್ನು ತಡೆಯುವ ಪ್ರಯತ್ನದಲ್ಲಿಅವರು ಆಯತಪ್ಪಿ ಬೆಲ್ಟ್‌ ಮೇಲೆ ಬಿದ್ದಿದ್ದಾರೆ. ಬೆಲ್ಟ್‌ ಮೂಲಕ ಕಲ್ಲಿದ್ದಲು ನಿರ್ವಹಣೆ ಘಟಕ-1ರ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲೆಮೃತಪಟ್ಟಿದ್ದಾರೆ. ಶಕ್ತಿನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ