ಆ್ಯಪ್ನಗರ

‘ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಪಾಠ'

ಬಡವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರದ ರಾಜಕಾರಣಿಗಳಿಗೆ ರಾಜಕೀಯವಾಗಿ ಪಾಠ ಕಲಿಸಲು ಸಂಘದ ಸದಸ್ಯರು ಮುಂದಾಗಬೇಕು. ಹೆಲ್ತ್‌ ಕೇರ್‌ ಹಾಗೂ ವೈದ್ಯರ ಹಿತಬಯಸುವ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಪ್ರೋತ್ಸಾಹಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷ ಡಾ.ಎಚ್‌.ರವೀಂದ್ರ ಹೇಳಿದರು.

Vijaya Karnataka Web 9 Apr 2018, 5:00 am
ರಾಯಚೂರು : ಬಡವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರದ ರಾಜಕಾರಣಿಗಳಿಗೆ ರಾಜಕೀಯವಾಗಿ ಪಾಠ ಕಲಿಸಲು ಸಂಘದ ಸದಸ್ಯರು ಮುಂದಾಗಬೇಕು. ಹೆಲ್ತ್‌ ಕೇರ್‌ ಹಾಗೂ ವೈದ್ಯರ ಹಿತಬಯಸುವ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಪ್ರೋತ್ಸಾಹಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷ ಡಾ.ಎಚ್‌.ರವೀಂದ್ರ ಹೇಳಿದರು.
Vijaya Karnataka Web lesson in politics for politicians
‘ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಪಾಠ'


ನಗರದ ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಆಯೋಜಿಸಿದ್ದ ಐಎಂಎ ಬ್ಲಡ್‌ ಬ್ಯಾಂಕ್‌ ನೂತನ ಕಚೇರಿ ಉದ್ಘಾಟನೆ ಹಾಗೂ 290ನೇ ರಾಜ್ಯ ಪರಿಷತ್‌ ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದರು.

ಕೆಪಿಎಂಇ ಕಾಯಿದೆ ವಿರೋಧಿಸಿ ವೈದ್ಯರು ಬೀದಿಗೆ ಬಿದ್ದ ನಂತರ ಸರಕಾರ ಮಾತುಕತೆಗೆ ಕರೆದಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ನಾನಾ ನೀತಿ ರಚನೆಕಾರರಿಗೆ ಹೆಲ್ತ್‌ ಕೇರ್‌ ಬಗ್ಗೆ ಜ್ಞಾನವಿಲ್ಲ. ಬ್ರಿಡ್ಜ್‌ ಕೋರ್ಸ್‌ ಮುಖಾಂತರ ಹಳ್ಳಿಗಳಿಗೆ ವೈದ್ಯರನ್ನು ಕಳಿಸಿ ಸೇವೆ ಒದಗಿಸಲು ನಿರ್ಧರಿಸಿದ ಸರಕಾರದ ಕ್ರಮ ಸರಿಯಲ್ಲ ಎಂದರು.

ರಾಜ್ಯದ ಆಸ್ಪತ್ರೆಗಳಲ್ಲಿ ಒಟ್ಟು 15ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಅವರನ್ನೊಳಗೊಂಡಂತೆ ಅವರ ಕುಟುಂಬಸ್ಥರು ಸೇರಿ ಪ್ರತಿ ವಿಧಾನಸಭಾ ಕ್ಷೇತ್ರದ ಸುಮಾರು 5ಸಾವಿರ ಮತದಾರರಿಗೆ ಮನವರಿಕೆ ಮಾಡಬೇಕು. ನ್ಯಾಷನಲ್‌ ಮೆಡಿಕಲ್‌ ಕೌನ್ಸಿಲ್‌ ಕರಡು ಮಸೂದೆ ವಿರೋಧಿಸುವ ಹಾಗೂ ವೈದ್ಯರ ಹಿತಕಾಪಾಡುವ ಅಭ್ಯರ್ಥಿಗಳಿಗೆ ಬೆಂಬಲಿಸಬೇಕೆಂದರು.

ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರಾಧ್ಯಕ್ಷ ಡಾ.ರವಿ.ವಾಂಖೇಡಕರ್‌ ಕಚೇರಿ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಅಜೆಂಡಾ ಪ್ರೋತ್ಸಾಹಿಸುವ ಪಕ್ಷ ಗಳಿಗೆ ಮಾತ್ರ ನಮ್ಮ ಪ್ರೋತ್ಸಾಹ ಎಂದ ಅವರು, ಹೆಲ್ತ್‌ ಬಜೆಟ್‌ ಶೇ.1.2ರಷ್ಟು ಹೆಚ್ಚಿಸಬೇಕು. ಸಮೂಹ ಮಾಧ್ಯಮ ಬಳಸಿ ಕರಡು ಮಸೂದೆ ವಿರೋಧಿಸಬೇಕು ಎಂದು ಹೇಳಿದರು.

ಡಾ.ವಿನಯ್‌ ಅಗರ್‌ವಾಲ್‌ ಸೇರಿ ಇತರರು ಮಾತನಾಡಿದರು. ತೆಲಂಗಾಣ ಐಎಂಎ ಅಧ್ಯಕ್ಷ ನರಸಿಂಗರೆಡ್ಡಿ, ಪದಾಧಿಕಾರಿಗಳಾದ ಡಾ.ರಾಜೇಶ್‌ ಕಕ್ಕೇರಿ, ಡಾ.ಸಂಜೀವ್‌ ಶೆಟ್ಟಿ, ಡಾ.ನಾಗರಾಜ ಭಾಲ್ಕಿ, ಡಾ.ಜಯಪ್ರಕಾಶ್‌ ಪಾಟೀಲ್‌ ಸೇರಿದಂತೆ ವೈದ್ಯರು ಹಾಗೂ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ