ಆ್ಯಪ್ನಗರ

ಸಾಹಿತ್ಯ ಸಮ್ಮೇಳನದ ರಾಜಕೀಕರಣ: ಬಿಎಸ್‌ವೈ ಖಂಡನೆ

ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಸೇರಿ ಹಲವು ಸಾಹಿತಿಗಳು ರಾಜಕೀಕರಣಗೊಳಿಸಿದ್ದಾರೆ.

Vijaya Karnataka 27 Nov 2017, 7:25 am
ರಾಯಚೂರು: ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಸೇರಿ ಹಲವು ಸಾಹಿತಿಗಳು ರಾಜಕೀಕರಣಗೊಳಿಸಿದ್ದಾರೆ. ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಚರ್ಚೆ ಬದಲು ರಾಜಕೀಯ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web literary conference
ಸಾಹಿತ್ಯ ಸಮ್ಮೇಳನದ ರಾಜಕೀಕರಣ: ಬಿಎಸ್‌ವೈ ಖಂಡನೆ


ಲಿಂಗಸುಗೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಸಾಹಿತ್ಯ ಸಮ್ಮೇಳನಗಳು ನಾಡಿನ ಏಳಿಗೆ ಬಗ್ಗೆ ಚರ್ಚೆಗೆ ವೇದಿಕೆಯಾಗಬೇಕೇ ವಿನಾ ರಾಜಕೀಯ ವಿಚಾರಗಳ ಪ್ರಸ್ತಾಪ ಸಲ್ಲದು. ಅದರಲ್ಲೂ ನಾಡತಾಯೆ ಭುವನೇಶ್ವರಿಗೆ ಕೈ ಮುಗಿಯದವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ತಪ್ಪು ನಿರ್ಧಾರ. ಭವಿಷ್ಯದಲ್ಲಾದರೂ ಸಂಘಟಕರು ಇಂಥ ಅವಾಂತರಗಳಿಗೆ ಅವಕಾಶ ನೀಡಬಾರದು’’ ಎಂದ ಅವರು, ‘‘ಸಾಹಿತಿ ಭಗವಾನ್ ಅವರು ರಾಮನ ಕುರಿತು ನೀಡಿದ ಹೇಳಿಕೆ ಖಂಡನಾರ್ಹ’’ ಎಂದು ಹೇಳಿದರು.

27ರಿಂದ ಸತ್ಯಾಗ್ರಹ : ‘‘ಸಚಿವ ಕೆ.ಜೆ.ಜಾರ್ಜ್ ಮತ್ತು ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ವಿನಯ್ ಕುಲಕರ್ಣಿ ವಿರುದ್ಧ ನಾಳೆ ಸತ್ಯಾಗ್ರಹ ನಡೆಸಲಾಗುತ್ತದೆ. ವಿಜಯಪುರದಲ್ಲಿ ನ.27ರಂದು ನಡೆಯಲಿರುವ ಸತ್ಯಾಗ್ರಹದಲ್ಲಿ ನಾನು ಭಾಗವಹಿಸುವೆ. ವಿನಯ್ ಕುಲಕರ್ಣಿ ಅವರ ವಿರುದ್ಧ ಬಿಜೆಪಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಸೂಕ್ತ ಸಾಕ್ಷ್ಯಾಧಾರಗಳಿವೆ’’ ಎಂದ ಅವರು, ‘‘ಮುಂದಿನ ಚುನಾವಣೆ ಸಮೀಪಿಸುತ್ತಿದ್ದಂತೆ ಬೇರೆ ಪಕ್ಷಗಳ ಅನೇಕ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಶೀಘ್ರವೇ ಮಾಹಿತಿ ಬಹಿರಂಗಗೊಳಿಸಲಾಗುವುದು’’ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ