ಆ್ಯಪ್ನಗರ

ಸಂಜೆ ಲಾರಿ ಜಪ್ತಿ; ರಾತ್ರಿ ಬಿಡುಗಡೆ

ತಾಲೂಕಿನ ಸಾಸಲಮರಿಕ್ಯಾಂಪ್‌ ಹತ್ತಿರ ಅಕ್ರಮವಾಗಿ ಮರಮ್‌ ಸಾಗಣೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ದಾಳಿ ನಡೆಸಿದ ತಹಸೀಲ್ದಾರ್‌ ಶಿವಾನಂದ ಸಾಗರ 6 ಲಾರಿಗಳನ್ನು ಜಪ್ತಿ ಮಾಡಿ, ರಾತ್ರಿ ವೇಳೆ ಬಿಟ್ಟು ಕಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

Vijaya Karnataka 11 Jul 2019, 5:00 am
ಸಿಂಧನೂರು : ತಾಲೂಕಿನ ಸಾಸಲಮರಿಕ್ಯಾಂಪ್‌ ಹತ್ತಿರ ಅಕ್ರಮವಾಗಿ ಮರಮ್‌ ಸಾಗಣೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ದಾಳಿ ನಡೆಸಿದ ತಹಸೀಲ್ದಾರ್‌ ಶಿವಾನಂದ ಸಾಗರ 6 ಲಾರಿಗಳನ್ನು ಜಪ್ತಿ ಮಾಡಿ, ರಾತ್ರಿ ವೇಳೆ ಬಿಟ್ಟು ಕಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
Vijaya Karnataka Web lorry szie in the evening release the night
ಸಂಜೆ ಲಾರಿ ಜಪ್ತಿ; ರಾತ್ರಿ ಬಿಡುಗಡೆ


ಸಾಸಲಮರಿಕ್ಯಾಂಪ್‌, ಕೆಂಗಲ್‌ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಹೊಲಗಳಲ್ಲಿ ಅಕ್ರಮವಾಗಿ ಮರಮ್‌ ಅಗೆಯುವುದು ಹೆಚ್ಚಿದೆ. ಕೃಷಿ ಭೂಮಿಯಲ್ಲಿ ಕಂದಾಯ ನಿಯಮ ಉಲ್ಲಂಘನೆ ಮಾಡಿ ಭಾರಿ ಪ್ರಮಾಣದ ಮರಮ್‌ನ್ನು ರೈಲ್ವೆ ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿಢೀರ್‌ ದಾಳಿ ನಡೆಸಿದ 6 ಲಾರಿಗಳನ್ನು ಜಪ್ತಿ ಮಾಡಿ ತಂದಿದ್ದರು. ಬಳಿಕ ಎಲ್ಲವನ್ನು ಪೊಲೀಸ್‌ ಠಾಣೆಗೆ ಕಳಿಸಿಕೊಟ್ಟಿದ್ದು ಪ್ರಕರಣ ದಾಖಲಾಗಿಲ್ಲ. ಬಳಿಕ ತಹಸಿಲ್‌ ಕಚೇರಿ ಬಳಿ ವಾಹನಗಳನ್ನು ತಂದು ನಿಲ್ಲಿಸಲಾಗಿದೆ. ಇದಾದ ಬಳಿಕ ಏಕಾಏಕಿ ಲಾರಿ ಬಿಟ್ಟು ಕಳಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ದಾಳಿ ನಡೆಸಿದ್ದು ಯಾಕೆ? ಬಿಟ್ಟು ಕಳಿಸಿರುವುದರ ಹಿಂದಿನ ಪ್ರಭಾವವೇನು? ಎಂಬ ಪ್ರಶ್ನೆ ಎದ್ದಿದೆ.

ಚರ್ಚೆ: ಜಪ್ತಿ ಬಳಿಕ, ಸಂಬಂಧಪಟ್ಟ ಗುತ್ತಿಗೆದಾರನೊಬ್ಬ ತಹಸಿಲ್‌ ಕಚೇರಿಗೆ ಬಂದು, ತಹಸೀಲ್ದಾರರಿಗೆ ತಾವು ಸರಕಾರಕ್ಕೆ ರಾಯಲ್ಟಿ ಕಟ್ಟುತ್ತಿದ್ದೇವೆ ಎಂದು ತಿಳಿಸಿದ್ದಾನೆ. ಆದರೆ ತಮ್ಮ ಬಿಲ್‌ಗಳಲ್ಲಿ ಕಟ್ಟಾಗುವ ರಾಜಧನವನ್ನೇ ರಾಯಲ್ಟಿಯೆಂದು ಪರಿಗಣಿಸಿ ಮಾಹಿತಿ ನೀಡಿ, ತಹಸೀಲ್ದಾರರನ್ನೇ ಯಾಮಾರಿಸಲು ಮುಂದಾಗಿದ್ದಾನೆ. ಗಂಗಾವತಿ ತಾಲೂಕಿನಲ್ಲಿ ನಡೆದ ಕಾಮಗಾರಿ ವೇಳೆ ಅಲ್ಲಿಯ ಸ್ಥಳೀಯ ತಾಲೂಕಾಡಳಿತದಿಂದ ಪರವಾನಗಿ ಪಡೆದಿದ್ದು, ಸಿಂಧನೂರಿನಲ್ಲಿ ಈ ನಿಯಮ ಪಾಲಿಸಿಲ್ಲ ಎಂಬುದು ತಹಸೀಲ್ದಾರ್‌ ಗಮನಕ್ಕೆ ಬಂದಿದೆ. ಮೊದಲು ಪರವಾನಗಿ ಪಡೆಯಿರಿ, ನಂತರ ಮರಮ್‌ ಸಾಗಣೆ ಮಾಡಿ ಎಂದು ಗುತ್ತಿಗೆದಾರನಿಗೆ ಅಧಿಕಾರಿ ಖಡಕ್‌ ಸೂಚನೆ ನೀಡಿದ್ದಾರೆ. ಆದರೆ ರಾತ್ರಿಯಾಗುವ ವೇಳೆಗೆ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ತಹಸಿಲ್‌ ಕಚೇರಿಯಲ್ಲಿ ನಿಂತಿದ್ದ ಲಾರಿಯಲ್ಲಿನ ಮರಮ್‌ ಅನ್ನು ಮೈದಾನದಲ್ಲಿಯೇ ಹಾಕಿ, ಹಾಗೆಯೇ ಬಿಟ್ಟು ಕಳಿಸಿರುವುದು ಅಚ್ಚರಿ ಮೂಡಿಸಿದೆ. ದಾಳಿ ನಡೆಸಿ ಮೌನವಹಿಸಿರುವುದರ ಹಿಂದೆ ಪ್ರಮುಖ ರಾಜಕೀಯ ನಾಯಕರ ಹಸ್ತಕ್ಷೇಪವೂ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ತಾಲೂಕಿನ ತುಂಬಾ ಮರಳು, ಮರಮ್‌ ಮಾಫಿಯಾ ತಲೆ ಎತ್ತಿದ್ದು, ಕಡಿವಾಣ ಇಲ್ಲವಾಗಿದೆ. ಸರಕಾರ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟ ಉಂಟಾದರೂ ಕೇಳುವವರು ಇಲ್ಲ ಎಂಬುದು ಜನರ ಆರೋಪವಾಗಿದೆ.

---
ರೈಲ್ವೆ ಕಾಮಗಾರಿಗಾಗಿ ಅಕ್ರಮವಾಗಿ ಮರಮ್‌ ಸಾಗಣೆ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಲಾರಿ ಜಪ್ತಿ ಮಾಡಲಾಗಿತ್ತು. ಆದರೆ ಗುತ್ತಿಗೆದಾರರು ರಾಯಲ್ಟಿ ಕಟ್ಟಿದ್ದಾರೆ. ಮರಮ್‌ ಸಾಗಣೆಗೆ ಈ ಹಿಂದೆಯೇ ಅನುಮತಿ ನೀಡುವಂತೆ ಪತ್ರವನ್ನು ನಮಗೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು. ಗಣಿ ಮತ್ತು ಭೂವಿಧಿ ವಿಜ್ಞಾನ ಇಲಾಖೆಗೆ ಕಳಿಸಲಾಗುವುದು. ಇನ್ನು ಅವರು ಮಾಡುವ ಕೆಲಸ ತುಂಬಾ ಇದೆ.

-ಶಿವಾನಂದ ಸಾಗರ, ತಹಸೀಲ್ದಾರ್‌, ಸಿಂಧನೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ